ಬಡ ಮಹಿಳೆಗೆ ಮನೆ ನಿರ್ಮಿಸಿ ಕೊಟ್ಟ ಆಶ್ರಯದಾತ ಯುವ ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ
1 min read
ಬಡ ಮಹಿಳೆಗೆ ಮನೆ ನಿರ್ಮಿಸಿ ಕೊಟ್ಟ ಆಶ್ರಯದಾತ ಯುವ ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ
ಕುಂದಾಪುರ : ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ವತಿಯಿಂದ ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ ಸಮೀಪ ಹೊಸಾಡು ಗ್ರಾಮದ ಕೊಪ್ಪರಿಗೆ ವಾರ್ಡಿನ ನಿವಾಸಿಯಾದ ಸುಶೀಲಾ ಪೂಜಾರ್ತಿಯವರಿಗೆ ಇಂದು ನೂತನ ಮನೆಯನ್ನು ಆಶ್ರಯದಾತ ಕೊಡುಗೈ ದಾನಿ ಯುವ ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿಯವರು ಬಡ ಮಹಿಳೆಗೆ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಮುಳ್ಳಿಕಟ್ಟೆ ಹೊಸಾಡು ಗ್ರಾಮ ಕೊಪ್ಪರಿಗೆ ಸಮೀಪದ ಸುಶೀಲಾ ಪೂಜಾರ್ತಿಯವರ ಗಂಡ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಗಂಡನ ಮನೆ ಹಾಗೂ ತವರು ಮನೆಯಿಂದ ದೂರವಾದ ಸುಶೀಲ 1ಗಂಡು ಮಗು ಹಾಗೂ ತಾಯಿಯ ಜೊತೆಗೆ ಸಂಪೂರ್ಣ ಶಿಥಿಲ ವ್ಯವಸ್ಥೆಯ ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದರು. ಗುಡಿಸಲಲ್ಲೇ ಇದ್ದು ಪುಟ್ಟ ಮನೆಯ ಕನಸು ಕಾಣುತ್ತಿದ್ದರು. ಆದರೆ ಮನೆ ಕಟ್ಟುವ ಕನಸಿಗೆ ಬಡತನ ತೊಡಕಾಗಿತ್ತು. ಕನಸು ನನಸಾಗದೆ ಹಾಗೆಯೇ ಉಳಿದಿತ್ತು . ಇವರ ಅಸಹಾಯಕತೆ ಅರಿತ ಸ್ಥಳೀಯರಾದ ಮುಳ್ಳಿಕಟ್ಟೆ ಪ್ರದೀಪ್ ಬಿಲ್ಲವ ತಕ್ಷಣ ಡಾ. ಗೋವಿಂದ ಬಾಬು ಪೂಜಾರಿಯವರ ಗಮನಕ್ಕೆ ತಂದರು.
ಇಂದು ಬೆಳಿಗ್ಗೆ ಶುಭ ಸಂದರ್ಭದಲ್ಲಿ ಶ್ರೀ ವರಲಕ್ಷ್ಮಿ ನಿಲಯ ಗೃಹಪ್ರವೇಶ ನೆರವೇರಿಸಿ ಮನೆಯ ಕೀಯನ್ನು ಫಲನುಭವಿಗಳಿಗೆ ಕೈಗೆ ಹಸ್ತಾಂತರ ಮಾಡಿದರು .
ಡಾ .ಗೋವಿಂದಬಾಬು ಪೂಜಾರಿಯವರ ಪೂರ್ಣ ವೆಚ್ಚದಲ್ಲಿ ಸಂಪೂರ್ಣ ಸುಸಜ್ಜಿತ ಮನೆ ನಿರ್ಮಿಸಿಕೊಟ್ಟ “ಆರನೇ ಮನೆ” ಇದಾಗಿದ್ದು, ಶ್ರೀ ವರಲಕ್ಷ್ಮಿ ನಿಲಯದ ಗೃಹ ಪ್ರವೇಶೋತ್ಸವ ಕನ್ಯಾಡಿ ಶ್ರೀ ರಾಮಕ್ಷೇತ್ರದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ನೂತನ ಮನೆ ಗೃಹಪ್ರವೇಶ ಉದ್ಘಾಟನೆ ನೆರವೇರಿಸಿ ಆಶೀರ್ವಚಿಸಿದರು. ಇದೇ ಸಂದರ್ಭದಲ್ಲಿ ವರಮಹಾಲಕ್ಷ್ಮಿ ಸೌಹಾರ್ದ ಸೊಸೈಟಿಯ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾ. ಗೋವಿಂದ ಬಾಬು ಪೂಜಾರಿ ದಂಪತಿಗೆ “ಅಂಬಾ ಫ್ರೆಂಡ್ಸ್” ಮುಳ್ಳಿಕಟ್ಟೆ ವತಿಯಿಂದ ಸನ್ಮಾನಿಸಲಾಯಿತು. ಗೋವಿಂದ ಬಾಬು ಪೂಜಾರಿಯವರ ತಂದೆ, ತಾಯಿ ಕುಟುಂಬದ ಸದಸ್ಯರು ಬಿಲ್ಲವ ಮುಖಂಡರು, ಅಂಬಾ ಫ್ರೆಂಡ್ಸ್ ಮುಳ್ಳಿಕಟ್ಟೆ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು, ಶ್ರೀ ಗೋವಿಂದ ಬಾಬು ಪೂಜಾರಿ ಅಭಿಮಾನಿ ಬಳಗದ ಸಮಕ್ಷಮ ಇಂಥ ಒಂದು ಪುಣ್ಯ ಕಾರ್ಯ ಸಂಭ್ರಮದಿಂದ ನಡೆಯಿತು.
ಬರಹ ಕೃಪೆ.
ಈಶ್ವರ್ ಸಿ ನಾವುಂದ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |