ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯ
1 min read
ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯ, ಜ್ಞಾನ ಪ್ರಕಾಶ ಭವನ, ಬಸವನಹಳ್ಳಿ, ಚಿಕ್ಕಮಗಳೂರಿನಲ್ಲಿ ದಿನಾಂಕ: ೦೨/೦೧/೨೦೨೨
ಭಾನುವಾರ ಮಧ್ಯಾಹ್ನ ೧೨ ಗಂಟೆಗೆ ಸ್ವಾತಂತ್ರö್ಯದ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ “ತ್ಯಾಗ, ತಪಸ್ಸು, ಸೇವೆಯಿಂದ ಸ್ವರ್ಣಿಮ ಭಾರತದ
ನಿರ್ಮಾಣ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಸನ್ಮಾನ್ಯ ಸಹೋದರಿ ಶೃತಿ ಎನ್.ಎಸ್.ಅಪರ ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿಗಳು, ಚಿಕ್ಕಮಗಳೂರು. ಸಹೋದರ ವರಸಿದ್ಧಿ ವೇಣುಗೋಪಾಲ್ ಸಿ.ಎಸ್, ನಗರಸಭಾ ಸದಸ್ಯರು, ಚಿಕ್ಕಮಗಳೂರು, ಸಹೋದರ
ಡಾ.ಬಿ.ಕೆ.ನಾಗರಾಜು, ಉಪನಿರ್ಧೇಶಕರು, ಪಶುಪಾಲನಾ ಇಲಾಖೆ, ಚಿಕ್ಕಮಗಳೂರು, ರಾಜಯೋಗಿನಿ ಬ್ರಹ್ಮಾಕುಮಾರಿ ಭಾಗ್ಯಕ್ಕರವರು, ಜಿಲ್ಲಾ
ಸಂಚಾಲಕರು, ಬ್ರಹ್ಮಾಕುಮಾರೀಸ್,ಚಿಕ್ಕಮಗಳೂರು ಹಾಗೂ ಈಶ್ವರೀಯ ವಿಧ್ಯಾರ್ಥಿಗಳು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಅಪರ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳಾದ ಸಹೋದರಿ ಶೃತಿ ಮಾತನಾಡಿ ಬ್ರಹ್ಮಾಕುಮಾರೀಸ್ ಸಂಸ್ಥೆಯು ಬೆಳೆಯುವುದಕ್ಕೆ ಪರಮಾತ್ಮನೇ ಕಾರಣ.ಶಿಕ್ಷಕರ ಸ್ಥಾನ ಬಹಳ ಶ್ರೇಷ್ಟವಾದದ್ದು, ಪರಮ ಶಿಕ್ಷಕ ಪರಮಾತ್ಮನ ಮಹಿಮೆ ಅಪಾರವಾದುದು.ನಾವೆಲ್ಲರೂ ಪರಮಾತ್ಮನ ಮಾಧ್ಯಮ ಆಗಿದ್ದೇವೆ.ನಾವು ಏನು ಆಗಬೇಕು ಅಂತ ಬಯಸುತ್ತೇವೋ ಅದನ್ನೇ ವಿಚಾರ ಮಾಡಬೇಕು. ಬ್ರಹ್ಮಾಕುಮಾರೀಸ್ ಸಂಸ್ಥೆಗೆ ಬಂದು ಒಳ್ಳೆಯ ಸಕಾರಾತ್ಮಕ ವೈಬ್ರೇಷನ್ ಅನುಭವ ಮಾಡಿದೆ.ನಮ್ಮ ವಿಚಾರಗಳೇ ನಮ್ಮ ವ್ಯಕ್ತಿತ್ವ ನಿರ್ಮಾಣ ಆಗುತ್ತದೆ. ಎಲ್ಲವನ್ನೂ ಮಾಡಿ ಮಾಡಿಸುತ್ತಿರುವವರು ಭಗವಂತ. ಕಾಯಕವೇ ಕೈಲಾಸ. ಈ ಪರಮಾತ್ಮನ ಜ್ಞಾನ ಅನ್ಯರಿಗೆ ನೀಡುವುದೇ ನಿಜವಾದ ಸೇವೆ.ನಾನು ಅನ್ನೋ ಈ ಅಭಿಮಾನ ಇರಬಾರದು ಎಂದು ತೀಳಿಸಿದರು. ಸಹೋದರಸಹೋದರ ವರಸಿದ್ಧಿ ವೇಣುಗೋಪಾಲ್ ಸಿ.ಎಸ್, ನಗರಸಭಾ ಸದಸ್ಯರು ಮಾತನಾಡಿ ತಮ್ಮ ಬರಹದಿಂದನೇ ಈ ಪದವಿ ದೊರಕಿದೆ, ಈ ಅವಕಾಶವನ್ನು ಸಾರ್ವಜನಿಕರ ಸೇವೆಗೆ ಉಪಯೋಗಿಸುತ್ತೇನೆ ಎಂದರು. ಸಹೋದರ ಡಾ.ಬಿ.ಕೆ.ನಾಗರಾಜು ಮಾತನಾಡಿ ಶರೀರದ ಆರೋಗ್ಯಕ್ಕೆ ಧ್ಯಾನ/ಮೆಡಿಟೇಷನ್ ಅತಿ ಅವಶ್ಯಕ ಎಂದರು. ರಾಜಯೋಗಿನಿ ಬ್ರಹ್ಮಾಕುಮಾರಿ ಭಾಗ್ಯಕ್ಕರವರು ಮಾತನಾಡಿ ಭಾರತ ದೇಶ ಮಹಾನ್ ದೇಶ, ಪುಣ್ಯ ಭೂಮಿ, ದೇವ ಭೂಮಿ, ಸಂಪತ್ಬರಿತವಾದ ಭೂಮಿ ಎಲ್ಲದಕ್ಕಿಂತ ಹೆಚ್ಚಿನದಾಗಿ ಜಗತ್ಪಿತ, ಜಗತ್ರಕ್ಷಕ, ಜಗತ್ಶಿಕ್ಷಕನ ಅವತರನಾ ಭೂಮಿ. ಇಂತಹ ಭೂಮಿಯಲ್ಲಿ ಜನಿಸಿದ ನಾವೇ ಪುಣ್ಯವಂತರು. ಯೋಗಿ ನಿರೋಗಿ, ಯೋಗಿಗೆ ಆಯಸ್ಸು ಧೀರ್ಘವಾಗಿರುತ್ತದೆ.ಈ ರಾಜಯೋಗದಿಂದ ಸಂಪೂರ್ಣ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.
Good facilities and Best treatment Center Bangalore |