लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಳಸ :ಹೆಮ್ಮಕ್ಕಿ –ಹಡ್ಲುಗದ್ದೆ ಶ್ರೀ ಸತ್ಯ ಶನೇಶ್ವರ ಕ್ಷೇತ್ರ ದಲ್ಲಿ ಗಣಹೋಮ -ಗುರುವಂದನೆ.

1 min read
Featured Video Play Icon

ಕಳಸ :ಹೆಮ್ಮಕ್ಕಿ –ಹಡ್ಲುಗದ್ದೆ ಶ್ರೀ ಸತ್ಯ ಶನೇಶ್ವರ ಕ್ಷೇತ್ರ ದಲ್ಲಿ ಗಣಹೋಮ -ಗುರುವಂದನೆ.
—————————————-ಸಂಘಟನೆ ಗಳಿಂದ ಹಿಂದೂ ಸಮಾಜದಲ್ಲಿ ಜಾಗೃತಿ. ;;ಶ್ರೀ ಶ್ರೀ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿ.

ಕಳಸ:ಹಿಂದೂ ಸಮಾಜ ಎದುರಿಸುತ್ತಿರುವ ಹಲವಾರು ಸವಾಲುಗಳನ್ನು ಶ್ರೀರಾಮ ಸೇನೆ. ವಿಹಿಂಪ. ಬಜರಂಗದಳ ಸಾಮರ್ಥ ವಾಗಿ ಎದುರಿಸಿ. ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಮಹತ್ತರ ವಾದ ಕಾರ್ಯಕ್ರಮ ವನ್ನು ಮಾಡುತ್ತಿದೆ ಎಂದು ಪರಮ ಪೂಜ್ಯ ಯೋಗಿ ಕೌಸ್ತಭ ಕರ್ಮಯೋಗಿ ಶ್ರೀ ಶ್ರೀ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಹೆಮ್ಮಕ್ಕಿ ಹಡ್ಲುಗದ್ದೆ ಶ್ರೀ ಸತ್ಯ ಶನೇಶ್ವರ ಸ್ವಾಮಿ ಕ್ಷೇತ್ರ ದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು.
ಅಯೋಧ್ಯ ಯಲ್ಲಿ ಭವ್ಯ ಶ್ರೀ ರಾಮ ಮಂದಿರ. ದತ್ತಪೀಠ . ತಿರುಪತಿಯ ರಕ್ಷಣೆ ಈ ಸಂಘಟನೆ ಗಳಿಂದ ಹೋರಾಟ ದ ಫಲವಾಗಿ ಸಿಕ್ಕಿದೆ ಎಂದರು. ಮನೆಯೇ ಮೊದಲ ಪಾಠ ಶಾಲೆ ತಂದೆ ತಾಯಿಯೇ ಸಂಸ್ಕಾರ ಸಂಸ್ಕೃತಿ ಮರೆತಂತೆ ವರ್ತಿಸಿದರೆ ಮಕ್ಕಳನ್ನು ದೂರಿ ಪ್ರಯೋಜನವಿಲ್ಲ. ಆದ್ದರಿಂದ ಮಕ್ಕಳಿಗೆ ಸರಿಯಾದ ಸಂಸ್ಕೃತಿ ಸಂಸ್ಕಾರ ಕಲಿಸಿ ಎಂದು ತಿಳಿಸಿದರು.

ಮುಖ್ಯ ಅತಿಥಿ ಗಳಾದ ಕಳಸ ಪೊಲೀಸ್ ಠಾಣೆಯಸಹಾಯಕ ಸಬ್ ಇಸ್ಪೇಕ್ಟರ್ ಡಾ:ಮೋಹನ್ ಕುಮಾರ್ ಮಾತನಾಡುತ್ತ ಮೊದಲು ನಾವು ತಂದೆ-ತಾಯಿ. ಶಿಕ್ಷಣ ಕಲಿಸಿದ ಗುರು ಹಾಗು ಸನ್ಯಾಸತ್ವ ಸ್ವೀಕರಿಸಿದ ಗುರುಗಳನ್ನು ಗೌರವಿಸುವ ಅಭ್ಯಾಸ ವನ್ನು ರೂಡಿಸಿಕೊಳ್ಳಬೇಕು… ಮತ್ತು ಮೊದಲು ಗುರು ಇರಬೇಕು ನಂತರ ಗುರಿ ಇರಬೇಕು ಅವಾಗ ಮಾತ್ರನಾವು ಜೀವನದಲ್ಲಿ ಏನನ್ನಾದರೂ ಸಾಧಿಸ ಬಹುದು ಎಂದರು.

ಕ್ಷೇತ್ರ ದ ಗುರುಗಳಾದ ಶ್ರೀ ಅಶ್ವಥ್ ಗುರೂಜೀ ಪ್ರತಿಯೊಬ್ಬರು ಸಮಾಜ ಬದಲಾಗಬೇಕು ಎನ್ನುತ್ತಾರೆ ಸಮಾಜ ಎಂದರೆ ಇನ್ಯಾರು ಅಲ್ಲ. ನಾವೇ ಆಗಿದ್ದೇವೆ. ಪ್ರಸ್ತುತ ಹಿಂದೂ ಸಮಾಜಕ್ಕೆ ಎದುರಾಗಿರುವ ಎಲ್ಲಾ ಗಂಡಾಂತರ ಗಳನ್ನು ಸವಾಲು ಗಳನ್ನು ಎದುರಿಸಲು ನಮ್ಮೊಳಗೇ ಪರಿವರ್ತನೆ ತರಬೇಕಾದ ಅಗತ್ಯ ವಿದೆಎಂದರು. ಮಕ್ಕಳಿಗೆ ಶಾಲೆಯ ಹೊರತದಾ.ಭಜನೆ ಸಂಸ್ಕಾರ. ಯೋಗ. ಪ್ರಾಣಾಯಾಮ ಗಳನ್ನು ಕಲಿಸಬೇಕು. ಸಭ್ಯ ಉಡುಪು ಧರಿಸಲು ತಿಳಿಹೇಳಬೇಕು. ಎಂದರು.
ಶ್ರೀರಾಮ ಸೇನೆಯ ಪ್ರಧಾನ ಕಾರ್ಯದರ್ಶಿ ನರಗಲ್ ಸುಂದರೇಶ್. ಬಜರಂಗದಳ ದ ಜಿಲ್ಲಾ ಸಂಚಾಲಕ.ಶಶಾಂಕ್ ಹೆರೂರ್. ಚಂದ್ರಶೆಟ್ಟಿ. ಸುಧಾಕರ್. ಪರಮೇಶ್ವರ್ ಹೆಬ್ಬಾರ್ ಹಾಗು ಇನ್ನು ಮುಂತದವರು ಉಪಸ್ಥಿತರಿದ್ದರು..

Career | job

Navachaitanya Old Age Home

About Author