लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರೈತ ದಿನಾಚರಣೆ

1 min read
Featured Video Play Icon

ರೈತ ದಿನಾಚರಣೆ

ದಿ:23/12/2021
ರಂದು ಜೆಸಿಐ ಮೂಡಿಗೆರೆ ವತಿಯಿಂದ ಜೆಸಿ ಭವನದಲ್ಲಿ ಕೃಷಿ ಸಮಾಜ,ಕೃಷಿ ಇಲಾಖೆ,ಕೃಷಿ ವಿಜ್ನಾನ ಕೇಂದ್ರ ವಲಯ ಕೃಷಿ ಮತ್ತು ತೋಟಗಾರಿಕ ಸಂಶೋಧನಾ ಕೇಂದ್ರ, ತೋಟಗಾರಿಕ ಮಹಾವಿದ್ಯಾಲಯ ತೋಟಗಾರಿಕೆ ಇಲಾಖೆ ಹಾಗೂ ತಾಲೂಕು ಬೆಳೆಗಾರರ ಸಂಘ ಮತ್ತು ತಾಲೂಕು ಸ್ಕೌಟ್ ಮತ್ತು ಗೈಡ್ಸ್ ಮೂಡಿಗೆರೆ ಇವರ ಸಂಯುಕ್ತಾಶ್ರಯದಲ್ಲಿ “ಚೌದ್ರಿ ಚರಣ್ ಸಿಂಗ್” ಅವರ ಹುಟ್ಟುಹಬ್ಬದ ಪ್ರಯುಕ್ತ
ರೈತ ದಿನಾಚರಣೆ ಯನ್ನು ಆಚರಿಸಲಾಯಿತು,,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ನೂತನ ಅಧ್ಯಕ್ಷರಾದ ವಿದ್ಯಾರಾಜುರವರು ವಹಿಸಿದ್ದು ,ಮುಖ್ಯ ಅತಿಥಿಗಳಾಗಿ ಡಾ:ನಾರಾಯಣ್ ಎಸ್ ಮಾವರ್ಕರ್ ಹಾಗೂ ಬಿ.ಆರ್. ಬಾಲಕೃಷ್ಣ , ಪಿ.ಕೆ.ನಾಗೇಶ್ ,ಡಿ.ಎಲ್.ಅಶೋಕ್ ಕುಮಾರ್,ಸುಮ ಹೆಚ್.ಎನ್.ಹಾಗೂ ಶಿವಪ್ರಸಾದ್, ಜಯದೇವಪ್ಪ ಹೆಚ್.ಕೆ,ಚಂದ್ರ ಶೇಖರ್ ಕುನ್ನಹಳ್ಳಿ, ಕೃತಿ ಪ್ರದೀಪ್,ಸಂದ್ಯ ಸುದೀಪ್,ಸುಪ್ರೀತ್ ಜೆಸಿ, ಇವರುಗಳು ವೇದಿಕೆಯನ್ನು ಅಲಂಕರಿಸಿದ್ದರು ,ಚೌದ್ರಿ ಚರಣ್ ಸಿಂಗ್ ರವರ ಜೀವನ ಹಾಗೂ ರೈತ ದಿನಾಚರಣೆಯ ಕುರಿತು ಮತ್ತು ರೈತರ , ಕೃಷಿ,ಮಣ್ಣಿನ ಪಲವತ್ತತೆ,ಸವಾಯವ ಗೊಬ್ಬರ,ಹೈನು ಗಾರಿಕೆ ಇತರೆ ವಿಚಾರಗಳನ್ನು ಭಾಷಣದಲ್ಲಿ ರೈತರಿಗೆ ತಿಳಿಸಿದರು…ನಂತರ ರೈತ ಮಹಿಳೆ ಎಂದೆ ಪ್ರಸಿದ್ದರಾದ ಜೆ.ಆರ್.ವನಶ್ರೀ ಲಕ್ಷ್ಮಣ್ ಗೌಡರವರನ್ನು ಸನ್ಮಾನಿಸಿ,ಎಲ್ಲಾ ರೈತರಿಗೂ ನಿಂಬೆಹಣ್ಣಿನ ಗಿಡಗಳನ್ನು ವಿತರಿಸಲಾಯಿತು,ಕಾರ್ಯಕ್ರಮದಲ್ಲಿ ತಾಲೂಕಿನ ಹಲವು ಭಾಗದ ರೈತರು ಹಾಗೂ ಬೆಳೆಗಾರರು ಮತ್ತು ಜೆಸಿ ಸದಸ್ಯರುಗಳು ಹಾಗೂ ಪತ್ರಿಕಾ ವೃಂದದವರು ಉಪಸ್ತಿತರಿದ್ದರು.

ವರದಿ : ಮಗ್ಗಲಮಕ್ಕಿ ಗಣೇಶ್
ಬ್ಯುರೋ ನ್ಯೂಸ್

Navachaitanya Old Age Home

Career | job

About Author