*ರಾಜ್ಯ ಟೈಲರ್ ಅಸೋಷಿಯನ್ ವತಿಯಿಂದ ನಡೆದ ಕಸೂತಿ ತರಬೇತಿ ಶಿಬಿರದ*
1 min read
ಚಿಕ್ಕಮಗಳೂರು ಜಿಲ್ಲೆ,ಮೂಡಿಗೆರೆ ತಾಲ್ಲೂಕಿನ ಕರ್ನಾಟಕ ರಾಜ್ಯ ಟೈಲರ್ ಅಸೋಷಿಯನ್ ಇವರ ವತಿಯಿಂದ ನಡೆದ ಒಂದು ತಿಂಗಳ ಕಸೂತಿ ತರಬೇತಿ ಶಿಬಿರದ ಸಮಾರೋಪ ಸಮಾರಂಭ
ಚಿಕ್ಕಮಗಳೂರು ಜಿಲ್ಲೆ,ಮೂಡಿಗೆರೆ ತಾಲ್ಲೂಕಿನ “ಕರ್ನಾಟಕ ರಾಜ್ಯ ಟೈಲರ್ ಅಸೋಷಿಯನ್ (ರಿ)”ಇವರ ವತಿಯಿಂದ ನಡೆದ ಒಂದು ತಿಂಗಳ ಕಸೂತಿ ತರಬೇತಿ ಕಾರ್ಯಗಾರವನ್ನು ನಡೆಸಿ ದಿನಾಂಕ 14 / 12 /2021ರಂದು ಸಮಾರೋಪ ಗೊಂಡಿದೆ.
ಈ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದ ಮೂಡಿಗೆರೆ ಶಾಸಕರಾದ ಎಂ.ಪಿ ಕುಮಾರಸ್ವಾಮಿ
“ಈ ಶಿಬಿರವು ಮಹಿಳೆಯರಿಗೆ ಸುಸ್ಥಿರ ಜೀವನೋಪಾಯಕ್ಕಾಗಿ ಟೈಲರಿಂಗ್, ಕಸೂತಿ ಮತ್ತು ಫ್ಯಾಷನ್ ವಿನ್ಯಾಸದ ಕೌಶಲ್ಯ ತರಬೇತಿಯನ್ನು ನೀಡಲು ಉದ್ದೇಶಿಸಿ ನಡೆಸಲಾಗಿತ್ತು ಈ ವೃತ್ತಿ ಕೌಶಲ್ಯ ತರಬೇತಿಯಿಂದ ಮಹಿಳೆಯರು ತಾವೇ ಹಣ ಸಂಪಾದಿಸಿ ಗೌರವದಿಂದ ಬದುಕುತ್ತಾರೆ. ಈ ತರಬೇತಿಯ ಸಮಯದಲ್ಲಿ, ಮಹಿಳೆಯರು ಸ್ವಂತವಾಗಿ ಬದುಕಲು ಮತ್ತು ಘನತೆಯಿಂದ ಬದುಕಲು ಈ ತರಬೇತಿ ಉಪಯೋಗವಾಗಲಿದೆ ಎಂದು ತಿಳಿಸಿದರು.
ನಂತರ ಪಟ್ಟಣ ಪಂಚಾಯಿತಿ ಸದಸ್ಯರಾದ ಗೀತಾ ಅವರು ಮಾತನಾಡಿ “ಈ ಕೌಶಲ್ಯಧಾರಿತ ಎಂಬ್ರಾಯಡರಿ ತರಬೇತಿ ಶಿಬಿರವು ಮಹಿಳೆಯರನ್ನು ಆರ್ಥಿಕವಾಗಿ ಅಭಿವೃದ್ಧಿಯನ್ನು ಸೃಷ್ಟಿಸಲು ಮತ್ತು ಬಡತನವನ್ನು ಮುರಿಯಲು ಸಹಾಯಕವಾಗಲಿದೆ” ಎಂದರು.ನಂತರ
ಮಂಜೇಗೌಡರು ಮಾತನಾಡಿ ಕಸೂತಿ ತರಬೇತಿಯು ಅವರ ಮನೆಗಳಲ್ಲಿ ಸ್ವಯಂ ಉದ್ಯೋಗವನ್ನು ಒದಗಿಸುತ್ತದೆ, ಇದು ಒಳ್ಳೆಯ ಬೆಳವಣಿಗೆ ಎಂದರು.
ನಗರ ಅಧ್ಯಕ್ಷರಾದ ಪೂರ್ಣೇಶ್ ಮಾತನಾಡಿ ” ಮಹಿಳೆಯರಲ್ಲಿ ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಕಲ್ಪಿಸುವ ಕಾರ್ಯಗಾರ ಇದಾಗಿದೆ ಇದು ಇನ್ನು ಹೆಚ್ಚಿನ ಆದಾಯಗಳಿಸಲು ದಾರಿಯಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಗೌರವಧ್ಯಕ್ಷರು ಶಿವೆ ಗೌಡ್ರು ಉಪಾಧ್ಯಕ್ಷರು ಉಮಾ ಅವರು ಖಜಾಂಚಿ ವಿಶ್ವನಾಥ್ ಹಾಗೂ
ಕಾರ್ಯದರ್ಶಿ ಮಂಜು ಮತ್ತು ಬೀಳುಗಳ ವಲಯ ಸಮಿತಿ ಅಧ್ಯಕ್ಷರು ಮಂಜುಳಾ,
ಸಬಲೀಕರಣ ಕುರಿತು ಮಾತಾನಾಡಿದಂತಹ ಪೂಜಾ ರಾಜೇಶ್ ಹಾಗೂ ಬಿಳಗುಳದ ಚಂದ್ರವತಿ,
ಜಿಲ್ಲಾ ಖಜಾಂಚಿ ಆದ ಶಾಫಿ ಅವರು ಮತ್ತು ಶೃಂಗೇರಿ ಕಾರ್ಯದರ್ಶಿಯಾದ ಬಾಲಕೃಷ್ಣ ಹಾಗೂ ಈ ಸಂದರ್ಭದಲ್ಲಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಅವರು ಹಾಗೂ ಹಾಲಿ ಅಧ್ಯಕ್ಷರು ಸುರೇಂದ್ರ ಮತ್ತಿತರರು ಇದ್ದರು.
ವರದಿ: ಮಗ್ಗಲಮಕ್ಕಿ ಗಣೇಶ್