ಸಾಹಿತ್ಯದಲ್ಲಿ ಶ್ರೀಮತಿ ರಾಜೇಶ್ವರಿ ತೇಜಸ್ವಿ ಎಂದಿಗೂ ಜೀವಂತ: ಮಗ್ಗಲಮಕ್ಕಿ ಗಣೇಶ್
1 min read
ಭಾವಪೂರ್ಣ ಶ್ರದ್ಧಾಂಜಲಿ
ಸಾಹಿತ್ಯದಲ್ಲಿ ಶ್ರೀಮತಿ ರಾಜೇಶ್ವರಿ ತೇಜಸ್ವಿ ಎಂದಿಗೂ ಜೀವಂತ: ಮಗ್ಗಲಮಕ್ಕಿ ಗಣೇಶ್
ಸಾಹಿತ್ಯದಲ್ಲಿ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ಎಂದಿಗೂ ಜೀವಂತವಾಗಿರುತ್ತಾರೆ ಎಂದು ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ನಿಕಟ ಪೂರ್ವ ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ರವರು ಹೇಳಿದರು.
ಅನಾರೋಗ್ಯದಿಂದ
ಇಂದು ಬೆಳಿಗ್ಗೆ ಬೆಂಗಳೂರಿನ ರಾಜಲಕ್ಷ್ಮಿ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯಲ್ಲಿ 6. 20ಕ್ಕೆ ಹೃದಯಘಾತದಿಂದ ನಿಧನರಾದ ಸಾಹಿತ್ಯ ಲೋಕದ ಹಿರಿಮೆ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿ ಮಾತನಾಡಿದರು.
ಮೂಡಿಗೆರೆಯ ಮಾಯಾವಿ
ಕೆ. ಪಿ ಪೂರ್ಣಚಂದ್ರ ತೇಜಸ್ವಿಯವರ ಒಡನಾಡಿಯಾಗಿ ಅವರ ವಿಚಾರಗಳಿಂದ ನಾವೆಲ್ಲರೂ ಪ್ರೇರಣೆಯನ್ನು ಪಡೆದುಕೊಳ್ಳುವುದರ ಜೊತೆಗೆ ಶ್ರೀಮತಿ ರಾಜರಾಜೇಶ್ವರಿ ತೇಜಸ್ವಿಯವರ ಸಾಹಿತ್ಯದ ಪ್ರಭಾವವು ಎಲ್ಲಾ ವಯೋಮಾನದವರಿಗೂ ಮಾದರಿಯಾಗಿತ್ತು ಎಂದು ಸ್ಫೂರ್ತಿ ಮಿತ್ರ ಮಂಡಳಿ ಗ್ರಂಥಾಲಯ ಕೊಟ್ಟಿಗೆಹಾರ ಇಲ್ಲಿ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಇವರು ಹೇಳಿದರು.
ಮೂಡಿಗೆರೆ ತಾಲ್ಲೂಕು ಕನ್ನಡ ಜಾನಪದ ಪರಿಷತ್ ನ ಅಧ್ಯಕ್ಷರಾದ
ಬಕ್ಕಿ ಮಂಜುನಾಥ್ ಮಾತನಾಡಿ
ಪೂರ್ಣಚಂದ್ರ ತೇಜಸ್ವಿಯವರ ವಿಚಾರಗಳಿಗೆ ಕನ್ನಡಿ ಹಿಡಿದಂತೆ ಯುವ ಪೀಳಿಗೆಗೆ ಸ್ಫೂರ್ತಿ ಮತ್ತು ಪ್ರೇರಣೆಯನ್ನು ಧಾರೆಯೆರೆಯುವಲ್ಲಿ ರಾಜೇಶ್ವರಿ ತೇಜಸ್ವಿಯವರ ಸಾಹಿತ್ಯದ ಚಿಂತನೆಗಳು ಚಿರಸ್ಥಾಯಿಯಾಗಿ ಎಂದಿಗೂ ಉಳಿದುಕೊಳ್ಳುತ್ತವೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ನ ಹೋಬಳಿ ಘಟಕದ ನಿಕಟ ಪೂರ್ವ ಅಧ್ಯಕ್ಷರಾದ ವಸಂತ್ ಹಾರ್ಗೋಡು ಮಾತನಾಡಿ ರಾಷ್ಟ್ರಕವಿ ಕುವೆಂಪುರವರ ಸೊಸೆಯಾಗಿ ತಮ್ಮದೇ ವಿಶಿಷ್ಟ ವ್ಯಕ್ತಿತ್ವದೊಂದಿಗೆ “ನನ್ನ ತೇಜಸ್ವಿ, ನಮ್ಮ ಮನೆಗೂ ಗಾಂಧಿಜಿ ಬಂದಿದ್ದರು, ಡ್ರೈವಿಂಗ್ ಡೈರಿ ಇತ್ಯಾದಿ ಪುಸ್ತಕಗಳನ್ನು ಬರೆದು
ಸಾಹಿತ್ಯ ಲೋಕದ ಹೆಗ್ಗಳಿಕೆಯನ್ನು ಹೆಚ್ಚಿಸಿರುವುದು ಎಂದಿಗೂ ಇತಿಹಾಸವಾಗಿ ಉಳಿದುಕೊಳ್ಳುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕೊಟ್ಟಿಗೆಹಾರ ಪ್ರೌಢಶಾಲೆಯ ಎಸ್.ಡಿ. ಎಂ. ಸಿ.ಅಧ್ಯಕ್ಷರಾದ ಸಂಜಯ್ ಕೊಟ್ಟಿಗೆಹಾರ, ತೇಜಸ್ವಿ ಪ್ರತಿಷ್ಠಾನದ ಪದಾಧಿಕಾರಿಯಾದ ಸತೀಶ್, ಶಿಕ್ಷಕರಾದ ಭಕ್ತೇಶ್, ಸಾಹಿತಿ ಹೆಸಗಲ್ ವೆಂಕಟೇಶ್, ಸ್ಥಳೀಯರಾದ ಸಿದ್ದಿಕ್,ರೇಖಾ, ಮಹೇಶ್, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ನುಡಿ ನಮನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬರಹಕೃಪೆ:
ಹೆಸಗಲ್ ವೆಂಕಟೇಶ್.
ವರದಿ :
ಮಗ್ಗಲಮಕ್ಕಿ ಗಣೇಶ್.
ಬ್ಯುರೋ ನ್ಯೂಸ್.