*ಮಂಜು ಪಾವಗಡರಿಂದ ಹರಕೆ ಸಲ್ಲಿಕೆ*
1 min read
*ಮಂಜು ಪಾವಗಡರಿಂದ ಹರಕೆ ಸಲ್ಲಿಕೆ* ಕನ್ನಡ ಕಿರುತೆರೆ ಹಾಸ್ಯ ನಟರಾದ ಮಂಜು ಪಾವಗಡರವರು ಬಿಗ್ ಬಾಸ್ ಸೀಜನ್ ಎಂಟರ ವಿಜೇತಾರಾಗಿ ಬರಲೆಂದು ನಿಡುವಾಳೆ ಶ್ರೀ ರಾಮೇಶ್ವರ ಸ್ವತಃಸ್ಚಲಿ ಆಟೋ ಸಂಘದ ವತಿಯಿಂದ ಶ್ರೀ ರಾಮೇಶ್ವರ ಕ್ಷೇತ್ರ ನಿಡುವಾಳೆಯಲ್ಲಿ ಪೂಜೆ ಸಲ್ಲಿಸಿದ್ದು ಅದರಂತೆ ಮಂಜು ಪಾವಗಡರವರು ಜಯಗಳಿಸಿದ್ದರು . ಆದ ಕಾರಣ ಇಂದು ತಮ್ಮ ಕೆಲಸದ ನಿಮಿತ್ತ ಬಿಡುವು ಮಾಡಿಕೊಂಡು ಶ್ರೀ ಕ್ಷೇತ್ರದಲ್ಲಿ ಪೂಜೆ ನೆರವೇರಿಸಿದರು . ಈ ಸಂಧರ್ಭದಲ್ಲಿ ಶ್ರೀಯುತರನ್ನು ಕ್ಷೇತ್ರದ ವತಿಯಿಂದ ಹಾಗೂ ಆಟೋ ಸಂಘದ ವತಿಯಿಂದ ಅಭಿನಂದಿಸಲಾಯಿತು. ಕ್ಷೇತ್ರದ ವ್ಯವಸ್ಥಾಪಕರಾದ ಎನ್. ಆರ್. ನಾಗರಾಜ್ ಭಟ್, ಅರ್ಚಕರಾದ ಚರಣ್ ಕಾರಂತ್, ಸಿಬ್ಬಂದಿ ಸೂರ್ಯನಾರಾಯಣ , ಗ್ರಾಮಸ್ಥರಾದ ಎನ್.ಎಸ್ ಸುಬ್ರಾಯ ಗೌಡ, ವಿ ರವಿ, ರವಿ ಪಟೇಲ್, ಆಟೋ ಮಾಲಕ ಚಾಲಕ ಸಂಘದ ಅಧ್ಯಕ್ಷರಾದ ವಿಶ್ವ , ಸದಸ್ಯರುಗಳಾದ ಚಂದ್ರು, ಮಹೇಶ್, ಕೀರ್ತನ್, ಅವಿನಾಶ್, ಕೇಶವ ಬಾಳೂರು, ನಿಡುವಾಳೆ ಗ್ರಾ ಪಂ ಉಪಾಧ್ಯಕ್ಷರಾದ ನವೀನ್ ಹಾವಳಿ, ಸದಸ್ಯರಾದ ಅರುಣ್, ಮತ್ತಿತರರು ಉಪಸ್ಥಿತರಿದ್ದರು. ವರದಿ.ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.