*ಕಸ್ತೂರಿ ರಂಗನ್ ವರದಿ:ಸರ್ಕಾರದ ನಿಲುವು ಸ್ವಾಗತಾರ್ಹ*
1 min read
*ಕಸ್ತೂರಿ ರಂಗನ್ ವರದಿ:ಸರ್ಕಾರದ ನಿಲುವು ಸ್ವಾಗತಾರ್ಹ*
ಮೂಡಿಗೆರೆ.
ಕಸ್ತೂರಿ ರಂಗನ್ ವರದಿ ವಿರೋಧಿಸಿ ಕಸ್ತೂರಿ ರಂಗನ್ ವರದಿ ವಿರೋಧಿ ಒಕ್ಕೂಟ ನಡೆಸಿದ ಹೋರಾಟದ ಫಲವಾಗಿ ಈ ವರದಿ ಜಾರಿ ಅಸಾಧ್ಯ ಎಂದು ರಾಜ್ಯ ಸರ್ಕಾರ ತೆಗೆದುಕೊಂಡ ನಿಲುವು ಸ್ವಾಗತಾರ್ಹ ಎಂದು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಹೇಳಿದರು.
ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘವು, ಕಸ್ತೂರಿ ರಂಗನ್ ವರದಿ ವಿರೋಧಿ ಒಕ್ಕೂಟದ ಜೊತೆಗೂಡಿ ಹೋರಾಟ ರೂಪಿಸಿತ್ತು.
ಇದರ ಭಾಗವಾಗಿ ಈ ಹಿಂದೆ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ೧೮ ಗ್ರಾ.ಪಂಗಳಲ್ಲಿ ಚುನಾವಣೆ ಬಹಿಷ್ಕಾರವನ್ನು ಮಾಡಿ ವರದಿಗೆ ಇಲ್ಲಿನ ರೈತರು ವಿರೋಧವನ್ನು ವ್ಯಕ್ತಪಡಿಸಿದ್ದರು.
ಪ್ರಕೃತಿಗೆ ಪೂರಕವಾಗಿ ಕೃಷಿ ಮಾಡಿಕೊಂಡು ಬಂದಿರುವ ಕೃಷಿಕರಿಗೆ ಕಸ್ತೂರಿರಂಗನ್ ವರದಿ ಮಾರಕವಾಗಿದ್ದು ಇದನ್ನು ಕೈ ಬಿಡುವಂತೆ ಒಕ್ಕೂಟವು ಒತ್ತಾಯಿಸಿತ್ತು ಎಂದರು.
ಪಶ್ಚಿಮ ಘಟ್ಟದ ಕಾಫಿ ಬೆಳೆಯುವ ಪ್ರದೇಶಗಳನ್ನು ಸೂಕ್ಷ್ಮ ಪರಿಸರ ಪ್ರದೇಶಗಳೆಂದು ಡಾ.ಕಸ್ತೂರಿ ರಂಗನ್ ನೇತೃತ್ವದ ಉನ್ನತ ಕಾರ್ಯನಿರತ ತಂಡ ಶಿಫಾರಸ್ಸು ಮಾಡಿರುವುದನ್ನು ಕಸ್ತೂರಿ ರಂಗನ್ ವರದಿ ವಿರೋಧಿ ಒಕ್ಕೂಟ ತೀವ್ರವಾಗಿ ವಿರೋದಿಸಿತ್ತು.
ಸರ್ಕಾರದ ಗಮನಕ್ಕೂ ತಂದಿತ್ತು.
ಇದನ್ನು ಪರಿಗಣಿಸಿ ಕಸ್ತೂರಿರಂಗನ್ ವರದಿ ಜಾರಿಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿ ಕೇಂದ್ರ ಪರಿಸರ ಮತ್ತು ಕಾರ್ಮಿಕ ಸಚಿವರಿಗೆ ಸರ್ಕಾರದ ನಿಲುವನ್ನು ತಿಳಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘ ಸ್ವಾಗತಿಸುತ್ತದೆ ಎಂದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್