*ಮಾಜಿ ಪ್ರದಾನಿ ದೇವೆಗೌಡರ ಬೇಟಿ*
1 min read
*ಮಾಜಿ ಪ್ರದಾನಿ ದೇವೆಗೌಡರ ಬೇಟಿ*
ದಿನಾಂಕ 05.12.2021 ರಂದು ಹೇಮಾವತಿ ನದಿ ಉಗಮ ಹಿತರಕ್ಷಣಾ ಒಕ್ಕೂಟದ ನಿರ್ದೆಶಕರು ಒಕ್ಕೂಟದ ಉದ್ಘಾಟನೆಗೆ ಸನ್ಮಾನ್ಯ ಶ್ರೀ ಹೆಚ್ ಡಿ ದೇವೇಗೌಡ ರವರನ್ನು ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘ ದ ನೇತೃತ್ವದಲ್ಲಿ ಸೆಷನ್ ಪ್ರಾರಂಭದ ನಂತರ ಅಂದರೆ ಡಿಸೆಂಬರ್ 11 ನೇ ತಾರೀಕಿನ ನಂತರ ಕಾಫಿ ಬೆಳೆಗಾರರ ಸಮಸ್ಯೆಗಳೆಲ್ಲವನ್ನು ಚರ್ಚಿಸಲು ಹಾಗು ಹೇಮಾವತಿ ಉಗಮ ಸ್ಥಾನದ ಬಗ್ಗೆ ಚರ್ಚಿಸಲು ಶ್ರೀ ಕೃಷ್ಣೇಗೌಡ ರವರೊಂದಿಗೆ ದೆಹಲಿಗೆ ಬರುವಂತೆ ತಿಳಿಸಿರುತ್ತಾರೆ . ಕೇಂದ್ರ ವಾಣಿಜ್ಯ ಮತ್ತು ಹಣಕಾಸು ಸಚಿವರನ್ನು ಭೇಟಿ ಮಾಡಿಸುವುದಾಗಿ ಭರವಸೆ ನೀಡಿರುತ್ತಾರೆ .ಜಯದೇವ ಆಸ್ಪತ್ರೆಯ ವೈದ್ಯರಾದ ಶ್ರೀ ಮಂಜುನಾಥ್ ,ಸನ್ಮಾನ್ಯ ಶ್ರೀ ಹೆಚ್ ಡಿ ದೇವೇಗೌಡ ರವರ ಪುತ್ರ ಶ್ರೀ ರಮೇಶ್ ಸಹಾ ಭೇಟಿಮಾಡಲಾಗಿ ,ಕಾಫೀ ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಸೆಳೆಯುವಲ್ಲಿ ಸಹಕರಿಸುವುದಾಗಿ ತಿಳಿಸಿರುತ್ತಾರೆ .
ಈ ಸಂದರ್ಭದಲ್ಲಿ ಹಿರಿಯ ನಿರ್ದೇಶಕರುಗಳಾದ ಕೆ ಆರ್ ಪೇಟೆಯ ಶ್ರೀ ಸುಬ್ಬೇಗೌಡರು ,ಶ್ರೀ ಕೃಷ್ಣೇಗೌಡ ಹಾಗು ಶ್ರೀ ಬಿ ಆರ್ ಬಾಲಕೃಷ್ಣ ,
ಶ್ರೀ ಜಗದೀಶ್ ,
ಶ್ರೀ ಶಶಿಧರ್ ,
,ಶ್ರೀ ಅಶೋಕ್ ,
ಶ್ರೀ ಆದರ್ಶ ಬಾಳೂರು ,
ಶ್ರೀ ಸುರೇಶ್ ಹೇಮಗಿರಿ ಹಾಗು ಇತರರು ನಿಯೋಗದಲ್ಲಿದ್ದರು .
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.