“ವಿಧಾನಪರಿಷತ್ ಚುನಾವಣಾ ಪ್ರಚಾರ ಸಭೆ”
1 min read
ಮತಯಾಚನೆ.
ಮೂಡಿಗೆರೆ ತಾಲೂಕಿನ
* ಜನ್ನಾಪುರ ಗವಿಕಲ್ ಕ್ಲಬ್ ನಲ್ಲಿ ಇಂದು ನಡೆದ*
ಗೋಣಿಬೀಡು BJP ಮಹಾಶಕ್ತಿ ಕೇಂದ್ರದ
“ವಿಧಾನಪರಿಷತ್ ಚುನಾವಣಾ ಪ್ರಚಾರ ಸಭೆ”
ನಡೆಯಿತು
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಗೋಣಿಬೀಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕನ್ನೇಹಳ್ಳಿ ಭರತ್ ವಹಿಸಿದ್ದರು
ಪ್ರಾಸ್ತಾವಿಕ ನುಡಿಯನ್ನು ಚುನಾವಣಾ ತಾಲೂಕು ಉಸ್ತುವಾರಿಗಳಾದ ಜಯಂತ್ ರವರು ನುಡಿದರು
ನಂತರ ಮುಖಂಡರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಉದ್ಘಾಟಿಸಿದ ನಂತರ ಮಾನ್ಯ ಶಾಸಕರಾದ ಕುಮಾರಸ್ವಾಮಿ ಯವರು ನಗೆ ಚಟಾಕಿಯೊಂದಿಗೆ ಮಾತನಾಡಿ ಎಲ್ಲರನ್ನೂ ನಗೆಗಡಲಲ್ಲಿ ತೆಲಿಸಿ,ಪ್ರಾಣೇಶರವರ ಶಿಸ್ತು ಬದ್ಧ ರಾಜಕೀಯದ ಬಗ್ಗೆ ವಿವರಿಸಿ ಮತಯಾಚನೆ ಮಾಡಿದರು
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯವರಾದ ದೇವರಾಜು ಶೆಟ್ಟಿ ಯವರು ಮಾತನಾಡಿ ಪ್ರಾಣೇಶರವರ ಕಾರ್ಯವೈಕರಿ ಬಗ್ಗೆ ಮಾತನಾಡಿದರು
ಮಂಡಲದ ಅಧ್ಯಕ್ಷರಾದ ಜನ್ನಾಪುರ ರಘು ರವರು ಮಾತನಾಡಿ,ಪ್ರಾಣೇಶರವರು ಭ್ರಷ್ಟಾಚಾರ ರಹಿತ ರಾಜಕಾರಣಿ,ಜಿಲ್ಲಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಾಲ್ಕು ಶಾಸಕರನ್ನು ಗೆಲ್ಲಿಸಿದ ಹಿರಿಮೆ ಪ್ರಾಣೇಶರವರದು, ಇವರ ಸೇವೆ ನಮಗೆ ಮತಷ್ಟು ಬೇಕಾಗಿದೆ ಎಂದು ಮತಯಾಚಿಸಿದರು
ನಂತರ ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವರಾದ ಶೋಭ ಕರಂದ್ಲಾಜೆಯವರು,ಪ್ರಾಣೇಶರವರು ಗೆದ್ದ ಮೊದಲ ಅವಧಿಯಲ್ಲೆ ಉಪಸಭಾಪತಿಗಳಾದವರು ಇವರ ಕಾರ್ಯವೈಕರಿಗೆ ಇದೂಂದು ಉತ್ತಮ ಉದಾಹರಣೆ,ಮುಂಬರುವ ದಿನಗಳಲ್ಲಿ ಎಲ್ಲ BJPಯ ಸದಸ್ಯರು ಸೇರಿ ಬೇರೆ ಸದಸ್ಯರನ್ನೂ ಸೇರಿಸಿಕೊಂಡು ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಿ ಕೊಡಬೇಕೆಂದು ಮನವಿ ಮಾಡಿದರು
ಕೊನೆಯದಾಗಿ ಮಾತನಾಡಿದ ಈ ಚುನಾವಣಾ ಅಭ್ಯರ್ಥಿ ಯಾದ ಪ್ರಾಣೇಶರವರು,ನಾನು ಎಂದಿಗೂ ಭ್ರಷ್ಟಾಚಾರ ಮಾಡಿಲ್ಲ ಮುಂದೆಯೂ ಮಾಡಲ್ಲ,ಮುಂಬರುವ ದಿನಗಳಲ್ಲಿ ಸದಸ್ಯರ ಗೌರವ ಧನ ಹೆಚ್ಚಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವೆ,ಅದೇ ರೀತಿ ಗೋಣಿಬೀಡು ಜನತೆ ಜಿಲ್ಲಾ ಪಂ ಸದಸ್ಯರಾಗಿ ಆಯ್ಕೆ ಮಾಡಿದ್ದನ್ನು ನೆನಪಿಸಿಕೊಂಡರು
ಅಂತಿಮವಾಗಿ ಅಧ್ಯಕ್ಷರಾದ ಕನ್ನೇಹಳ್ಳಿ ಭರತ್ ಮಾತನಾಡಿ ಗೋಣಿಬೀಡು ಹೋಬಳಿಯಲ್ಲಿ ಎಲ್ಲಾ ನಾಯಕರು ಕಾರ್ಯಕರ್ತರು ಶ್ರಮ ವಹಿಸಿ ಅತೀ ಹೆಚ್ಚಿನ ಮತ ಕೊಡಿಸುತ್ತೆವೆ ಎಂದರು.
ವೇದಿಕೆಯಲ್ಲಿ
ಜಿಲ್ಲಾಧ್ಯಕ್ಷರಾದ ಕಲ್ಮುಡಪ್ಪನವರು
ಜಿಲ್ಲಾ ಚುನಾವಣಾ ಉಸ್ತುವಾರಿಗಳಾದ ತಮ್ಮಯ್ಯ ನವರು
ಜಿಲ್ಲಾ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾದ ಹಳಸೆ ಶಿವಣ್ಣ ನವರು
ರಾಷ್ಟೀಯ ಕಿಸಾನ್ ಮೋರ್ಚಾದ ಕಾರ್ಯಕಾರಿಣಿ ಸದಸ್ಯರಾದ ದೇವರುಂದ ದಿನೇಶ್ ರವರು
ರಾಷ್ಟ್ರೀಯ ST ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಮುತ್ತಪ್ಪನವರು ಉಪಸ್ಥಿತರಿದ್ದರು.
ಒಟ್ಟು 58 ಸದಸ್ಯರಲ್ಲಿ 35 ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ಹೋಬಳಿಯ ಎಲ್ಲಾ ನಾಯಕರುಗಳು,ಎಲ್ಲಾ ಮೋರ್ಚಾಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,ಮಂಡಲದ ಉಪಾಧ್ಯಕ್ಷರಾದ ವಿನೋದ್ ಕಣಚೂರ, ಮಂಡಲದ ಪ್ರಧಾನ ಕಾರ್ಯದರ್ಶಿ ಗಳಾದ ಗಜೇಂದ್ರ ತರುವೆ,ಪಂಚಾಕ್ಷರಿ ಹಾಲೂರು,ಶಶಿ ಜಾವಳಿ, ರಾಜ್ಯ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಧನಿಕ್ ಕೊಡದಿಣ್ಣೆ,ಮಂಡಲದ ಯುವಮೋರ್ಚಾ ಅಧ್ಯಕ್ಷರಾದ ಅವಿನಾಶ್ ಜನ್ನಾಪುರ,APMC ಅಧ್ಯಕ್ಷರಾದ ರವಿಂದ್ರ ಬಾಳೆಗದ್ದೆ,ಮಾಜಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸುದಿರ್ ಜನ್ನಾಪುರ, ಪ್ರವೀಣ್ ನಿಡಗೂಡು,ಸುನಿಲ್ ನಿಡಗೂಡು,ಹಾಗೂ ಕಾರ್ಯಕರ್ತರು ಹಾಜರಿದ್ದರು.
ಪ್ರಧಾನ ಕಾರ್ಯದರ್ಶಿಗಳಾದ
ಸಂಜೀವ ಪ್ರಸಾದ್ ಸ್ವಾಗತಿಸಿದರು
ಮೋಹನ್ ಜಾಣಿಗೆ
ಯವರು ನಿರೂಪಣೆ ಮಾಡಿ ವಂದನಾರ್ಪಣೆ ಮಾಡಿದರು.
ವರದಿ.
ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.