*ಅಂಗವಿಕಲನಿಗೆ ಆಶ್ರಯ*
1 min read
*ಅಂಗವಿಕಲನಿಗೆ ಆಶ್ರಯ*
ಚಿಕ್ಕಮಗಳೂರು ಜಿಲ್ಲೆಯ,
ಮೂಡಿಗೆರೆ ತಾಲೂಕು,
ಹಳೆ ಮೂಡಿಗೆರೆ ಗ್ರಾಮಪಂಚಾಯತ್ ವ್ಯಾಪ್ತಿಯ ದುಂಡುಗ ಗ್ರಾಮದ ವಾಸಿಯಾದ ಮಾರಿಮುತ್ತು ಭಿನ್ ಲೇಟ್ ರಂಗಸ್ವಾಮಿ ಇವರಿಗೆ ಸುಮಾರು 58 ವರ್ಷ ವಯಸ್ಸಾಗಿದ್ದು ಇವರು ಅಂಗವಿಕಲರಾಗಿದ್ದು ಹಾಗೂ ಬಲ ಕಾಲಿನಲ್ಲಿ ಗ್ಯಾಂಗ್ರಿನ್ ಆಗಿದ್ದು ಇವರ ತಂದೆ-ತಾಯಿ ಮೃತಪಟ್ಟಿರುತ್ತಾರೆ ಹಾಗೂ ಇವರಿಗೆ ಒಬ್ಬರು ತಂಗಿ ಇದ್ದು ಅವರು ಕೂಡ ಅಂಗವಿಕಲರಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರನ್ನು ನೋಡಿಕೊಳ್ಳಲು ಯಾರು ಇಲ್ಲದ ಕಾರಣ ಇವರನ್ನು ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಫಿಶ್ ಮೊಣು.
ಕಾರ್ಯಧ್ಯಕ್ಷರಾದ ಅಬ್ದುಲ್ ರೆಹಮಾನ್. ಗೌರವಾಧ್ಯಕ್ಷರಾದ ಹಸೈನಾರ್ ಸಹಕಾರ್ಯದರ್ಶಿ ಶರೀಫ್ ಫಿಶ್ ಉಪಾಧ್ಯಕ್ಷರಾದ ಆಶಿಕ್. ಶ್ರೀಧರ್ ಆಚಾರಿ ಹಾಗೂ ಹಳೆಮೂಡಿಗೆರೆ ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರೇಶ್ ಮುಖಾಂತರ ಶಾರದಾಂಬ (ಟ್ರಸ್ಟ್ ) ಆಶ್ರಮಕ್ಕೆ ತುಮಕೂರಿಗೆ ಸೇರಿಸಲಾಯಿತು ಹೋಗುವಾಗ ಅಕ್ಕಿ ಇನ್ನಿತರ ಅಗತ್ಯ ವಸ್ತುಗಳನ್ನು ಆಶ್ರಮಕ್ಕೆ ಕೊಡಲಾಯಿತು. ಇದಕ್ಕೆ ಮೂಡಿಗೆರೆಯ ನಾಗರಿಕರು ಹಾಗೂ ಹಳೆಮೂಡಿಗೆರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಹಕಾರ ನೀಡಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.