ಭಾಷಣ ಸ್ಪರ್ಧೆ
1 min read
ಭಾಷಣ ಸ್ಪರ್ಧೆ
ದಿನಾಂಕ: 30/11/2021 ಮಂಗಳವಾರ ದೇಶಭಕ್ತಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಯುವಜನರು
(ಸಬ್ ಕಾ ಸಾಥ್ ಸಬ್ ಕಾ ವಿಕಾಸ್,
ಸಬ್ಕಾ ವಿಶ್ವಾಸ್ ಸಬ್ಕಾ ಪ್ರಯಾಸ್ ) ಎಂಬ ವಿಷಯದ ಕುರಿತು
!!ಹಿಂದಿ/ಇಂಗ್ಲಿಷ್!! ನಲ್ಲಿ ರಾಷ್ಟ್ರ ಮಟ್ಟದ ಭಾಷಣದ ಸ್ಪರ್ಧೆಯನ್ನು ಇಂದು ತೋಟಗಾರಿಕಾ ಕಾಲೇಜು, ಹ್ಯಾಂಡ್ ಪೊಸ್ಟ್, ಮೂಡಿಗೆರೆಯಲ್ಲಿ ನೆಹರು ಯುವ ಕೇಂದ್ರದಿಂದ ತಾಲೂಕು ಮಟ್ಟದ ಸ್ಪರ್ಧೆಯನ್ನು ಏರ್ಪಡಿಸಿತ್ತು.. ವೇದಿಕೆಯ ಗಣ್ಯರಿಗೆ ಪ್ರೊಫೆಸರ್ ಯಲ್ಲೆಷ್ ರವರು ಸ್ವಾಗತಿಸಿದರು..ನಂತರ
ವೇದಿಕೆಯಲ್ಲಿ ತೋಟಗಾರಿಕ ಕಾಲೇಜಿನ ಡೀನ್ ಡಾ॥ನಾರಾಯಣ್ ಎಸ್ ಮಾವರ್ ಕರ್ ಹಾಗೂ ಪ್ರೋಫೆಸರ್ ಗಳಾದ ಯಲ್ಲೆಷ್,ರವಿರಾಜ್ ಶೆಟ್ಟಿ ,ಭರತ್, ನೆಹರು ಯುವ ಕೇಂದ್ರದ ಅಭಿಜಿತ್, ನಿರೂಪಕಿ ವಿಜಯಲಕ್ಷ್ಮಿರವರು ವೇದಿಕೆ ಕಾರ್ಯಕ್ರಮವನ್ನು ಗಿಡಕ್ಕೆ ನೀರನ್ನು ಹಾಕುವ ಮೂಲಕ ಚಾಲನೆ ನೀಡಿದರು..ನಂತರ ಕಾರ್ಯಕ್ರಮದ ಕುರಿತು ಕಾಲೇಜಿನ ಡೀನ್ ಡಾ:ನಾರಾಯಣ್ ಎಸ್ ಮಾವರ್ಕರ್ ಮಾತನಾಡಿ ” ದೇಶ ಭಕ್ತಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಯುವ ಜನತೆ ಎಚ್ಚೆತ್ತು ಕೊಳ್ಳಬೇಕು ಎಂದು ಯುವ ಜನತೆಗೆ ಸ್ವಾಮಿ ವಿವೇಕಾನಂದರ ” ಏಳಿ ಎದ್ದೇಳಿ ಗುರಿ ಮುಟ್ಟುವವರೆಗು ನಿಲ್ಲದಿರಿ” ಎಂದು , ಯುವ ಜನತೆ ಉತ್ತಮವಾದ ದೇಶ ಕಟ್ಟಲು ಸಾದ್ಯ ಎಂಬ ವಿಚಾರಧಾರೆಗಳನ್ನು ತಿಳಿಸಿ..ಸ್ಪರ್ಧೆಯ ಕುರಿತು
ಕಳೆದ ವರ್ಷವು ಕೂಡ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಈ ಭಾಷಾಣ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿತ್ತು..ಈ ಭಾರಿಯು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ರಾಷ್ಟ ಮಟ್ಟ ತಲುಪಿ ಜಯಗಳಿಸಲು ಶುಭ ಹಾರೈಸಿದರು..
ಸ್ಪರ್ಧೆಯಲ್ಲಿ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು.. ರವಿರಾಜ್ ಶೆಟ್ಟಿ,
ಡಾ॥ ಹರೀಶ್, ತಮನ್ನಾ ,ಪೂಜಾ,ಅಭಿಜಿತ್ ತೀರ್ಪುಗಾರರಾಗಿದ್ದರು..
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಆನಾಜೊಯ್,
ದ್ವಿತೀಯ ಸ್ಥಾನ ಉತ್ತಾಪ ರಂಜನ್ ಸಾಹು ಹಾಗೂ ದಿವ್ಯಾ ತೃತೀಯ ಸ್ಥಾನಗಳಿಸಿದರು,ಅವರಿಗೆ ಮೆಡಲ್ ಹಾಕಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಲು ಶುಭ ಕೋರಿದರು..ನೆಹರು ಯುವ ಕೇಂದ್ರದ ಸ್ವಯಂ ಸೇವಕರಾದ ಸಚಿನ್ ಕಳಸ, ಅಕ್ಷತ,ಅಭಿಜಿತ್ ಉಪಸ್ತಿತಿಯಲ್ಲಿ ಉತ್ತಮವಾಗಿ ನೆರವೇರಿತು..
ವರದಿ : ಮಗ್ಗಲಮಕ್ಕಿ ಗಣೇಶ್
ಬ್ಯುರೊ ನ್ಯೂಸ್
ಅವಿನ್ ಟಿವಿ.