ಕನ್ನಡ ಭಾಷೆಗೆ ತಾಯಿ ಗುಣದ ಸತ್ವವಿದೆ ಚಟ್ನಳ್ಳಿ ಮಹೇಶ್
1 min read
ಕನ್ನಡ ಭಾಷೆಗೆ ತಾಯಿ ಗುಣದ ಸತ್ವವಿದೆ ಚಟ್ನಳ್ಳಿ ಮಹೇಶ್
ಕನ್ನಡ ಭಾಷೆಯು ಅಂತರಂಗದ ಅಭಿವ್ಯಕ್ತಿಯಾಗಿದ್ದು, ಕನ್ನಡ ಭಾಷೆಯು ತಾಯಿ ಗುಣದ ಸತ್ವವನ್ನು ಹೊಂದಿದೆ ಎಂದು ಖ್ಯಾತ ಭಾಷಣಕಾರರು ಹಾಗೂ ವಾಗ್ಮಿಯಾದ ಚಟ್ನಳ್ಳಿ ಮಹೇಶ್ ಹೇಳಿದರು.
ಮೂಡಿಗೆರೆಯ ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನುಡಿಸಿಂಚನದಲ್ಲಿ ಮಾತನಾಡಿದರು.
ಕನ್ನಡ ಭಾಷೆಯು ಈ ನೆಲದ ಗುಣವನ್ನು ಹೊಂದಿದ್ದು ಎಲ್ಲಾ ಬಗೆಯ ಸಂಸ್ಕೃತಿಯನ್ನು ಸ್ವೀಕರಿಸಿ ಇತರ ಭಾಷಿಗರಿಗೂ ನೆಲೆಯನ್ನು ನೆಲವನ್ನು ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ಮಾತನಾಡುತ್ತ ಇಂದಿನ ಜಾಗತಿಕ ಜಗತ್ತು ತಾಂತ್ರಿಕಮಯವಾಗಿದ್ದು
ಜನರ ನಿತ್ಯ ಜೀವನದಲ್ಲಿ ಕನ್ನಡ ಭಾಷೆಯು ಅದಕ್ಕೆ ಪೂರಕವಾಗಿ ಬಳಕೆಯಾಗಬೇಕು ಎಂದು ಹೇಳಿದರು.
ಜೀವ ಸಂಕುಲವು ಜಾಗತಿಕ ತಾಪಮಾನದಿಂದಾಗಿ ವಿನಾಶದ ಹಂಚಿಗೆ ಸಾಗಲು ಮನುಷ್ಯನೇ ಮೂಲಕಾರಣವಾಗಿದ್ದಾನೆ ಎಂದು ಹೇಳುತ್ತಾ “ಮನುಷ್ಯ ಪ್ರಕೃತಿಯ ಒಂದು ಭಾಗ,ಪ್ರಕೃತಿಯೇ ಮನುಷ್ಯನ ಒಂದು ಭಾಗವಲ್ಲ “ಎಂಬ ತೇಜಸ್ವಿಯವರ ನುಡಿಮುತ್ತನ್ನು ಪುನಃ ನೆನಪಿಸುತ್ತ ವಿದ್ಯಾರ್ಥಿಗಳಿಗೆ ಜಾಗೃತಿಯ ಸಂದೇಶವನ್ನು ನೀಡಿದರು.
ಚಿಕ್ಕಮಗಳೂರು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ನ ನೂತನ ಅಧ್ಯಕ್ಷರಾದ ಸೂರಿ ಶ್ರೀನಿವಾಸ್ ಮಾತನಾಡಿ ಮುಂದಿನ ದಿನಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಯುವಜನೋತ್ಸವನ್ನು ಮಾಡುವ ಮನದಿಂಗಿತವನ್ನು ವ್ಯಕಪಡಿಸಿದರು.
ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನ ನಿಕಟ ಪೂರ್ವ ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ಮಾತನಾಡಿ ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯದ ಯಾವುದಾದರೂ ಒಂದು ವಿಭಾಗಕ್ಕೆ ಪೂರ್ಣಚಂದ್ರ ತೇಜಸ್ವಿಯವರ ಹೆಸರನ್ನಿಡಬೇಕೆಂದು ತಿಳಿಸಿದರು.
ಕಾರ್ಯಕ್ರಮವು ಪೂರ್ಣ ಕುಂಭ ಸ್ವಾಗತ ಮತ್ತು ಮೆರವಣಿಗೆಯಿಂದ ಪ್ರಾರಂಭವಾಗಿ ಮೂಡಿಗೆರೆಯ ಮಾಯಾವಿ ಶ್ರೀ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಕಾಳಜಿಯಂತೆ ಪ್ರಕೃತಿಯ ಬಗೆಗಿನ ವಿಚಾರಗಳ ಸಂಕಲನವನ್ನೊಳಗೊಂಡಂತೆ ವಿದ್ಯಾರ್ಥಿಗಳಿಂದ ಕಿರು ನಾಟಕದೊಂದಿಗೆ ಕಾರ್ಯಕ್ರಮಕ್ಕೆ ನೂತನ ಚಾಲನೆಯನ್ನು ನೀಡಲಾಯಿತು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯ ಕಾರ್ಯಕ್ರಮವು
ನಾಡಗೀತೆ ಮತ್ತು ರೈತಗೀತೆಯೊಂದಿಗೆ ಅಧಿಕೃತವಾಗಿ ಪ್ರಾರಂಭವಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಎಂ. ಹನುಮಂತಪ್ಪ ಶಿಕ್ಷಣ ನಿರ್ದೇಶಕರು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಇವರು ನೆರವೇರಿಸಿದರು.
ತಾಂತ್ರಿಕತೆಗಳ ಬಿಡುಗಡೆಯನ್ನು
ಡಾ ಮೃತ್ಯುಂಜಯ ಸಿ ವಾಲಿ ಮಾಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ಪ್ರತಿಜ್ಞಾ ಭೋದನೆಯನ್ನು ಡಾ. ಎನ್ ಶಿವಶಂಕರ್ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆಯನ್ನು ಡಾ. ಆರ್. ಲೋಕೇಶ್ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ನಾರಾಯಣ ಎಸ್ ಮಾವರ್ಕರ್
ಡೀನ್ ತೋಟಗಾರಿಕೆ ಮಹಾ ವಿದ್ಯಾಲಯ ಮೂಡಿಗೆರೆ ಇವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮೂಡಿಗೆರೆ ತಾಲ್ಲೂಕು ಜಾನಪದ ಪರಿಷತ್ ನ ಅಧ್ಯಕ್ಷರಾದ ಬಕ್ಕಿ ಮಂಜುನಾಥ್, ಡಾ:ರೇವಣ್ಣನವರ್.
ಡಾ. ಶಿವಪ್ರಸಾದ್,ಡಾ. ಕೃಷ್ಣ ಮೂರ್ತಿ ಎ. ಟಿ.. . ಸಿ. ಯೋಗೇಶ್ ಬಿ. ಆಚಾರ್ಯ .ರೊಟರಿ.ಪ್ರಸಾದ್.ತೇಜಸ್ವಿ ಪ್ರತಿಷ್ಟಾನದ ಆಕರ್ಷ್ .ಹೊಂಗೀರಣ ಸಂಘದ ಅವಿನಾಷ್ ಮತ್ತು ತೋಟಗಾರಿಕೆ ಮಹಾವಿದ್ಯಾಲಯದ ವಿಜ್ಞಾನಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿವರ್ಗದವರು ಹಾಜರಿದ್ದರು.
ಬರಹ ಕೃಪೆ:
ಹೆಸಗಲ್ ವೆಂಕಟೇಶ್.
ವರದಿ: ಮಗ್ಗಲಮಕ್ಕಿ ಗಣೇಶ್
ಬ್ಯುರೋ ನ್ಯೂಸ್.