ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಸಾರಥಿಗೆ ಸನ್ಮಾನ
1 min read
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಸಾರಥಿಗೆ ಸನ್ಮಾನ
ಕರ್ನಾಟಕದಾದ್ಯಂತ ರಾಜ್ಯ ಮತ್ತು ಜಿಲ್ಲೆಯ ನೂತನ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರ ನೇಮಕಕ್ಕೆ ದಿನಾಂಕ 21/11/2021ರಂದು ನಡೆದ ಚುನಾವಣೆಯಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಬಹುಮತಗಳಿಂದ ಗೆಲುವನ್ನು ಪಡೆದ ಕ್ರಿಯಾಶೀಲ ವ್ಯಕ್ತಿತ್ವದ ಕನ್ನಡದ ಕಟ್ಟಾಳು
ಸೂರಿ ಶ್ರೀನಿವಾಸ್ ರವರಿಗೆ ಇಂದು ಮೂಡಿಗೆರೆಯ ಸಮಸ್ತ ಜನತೆಯ ಪರವಾಗಿ, ಕನ್ನಡ ಸಾಹಿತ್ಯ ಪರಿಷತ್ ನ ನಿಕಟ ಪೂರ್ವ ಅಧ್ಯಕ್ಷರಾದ ಮಗ್ಗಲಮಕ್ಕಿ ಗಣೇಶ್ ರವರು ಸನ್ಮಾನಿಸಿ ಗೌರವಿಸಿದರು. ಇದೆ ಸಂದರ್ಭದಲ್ಲಿ ಸೂರಿ ಶ್ರೀನಿವಾಸ್ ರವರು ಕೂಡ ಮಗ್ಗಲಮಕ್ಕಿ ಗಣೇಶ್ ರವರನ್ನು ಸನ್ಮಾನಿಸಿ ಗೌವಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಜಾನಪದ ಪರಿಷತ್ ನ ಅಧ್ಯಕ್ಷರಾದ ಬಕ್ಕಿ ಮಂಜುನಾಥ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷರಾದ ಎಂ.ಎಸ್ ಅಶೋಕ್, ಪೃಥ್ವಿ ಸೂರಿ, ಮತ್ತು ಸ್ಥಳಿಯರು ಉಪಸ್ಥಿತರಿದ್ದರು.
ಬರಹ ಕೃಪೆ :
ಹೆಸಗಲ್ ವೆಂಕಟೇಶ್.
ವರದಿ: ಮಗ್ಗಲಮಕ್ಕಿ ಗಣೇಶ್.
ಬ್ಯುರೋ ನ್ಯೂಸ್.