
ಮೂಡಿಗೆರೆ ಹಾಗೂ ಬಣಕಲ್ ನಲ್ಲಿ ನಡೆದ ಬೀದಿ ನಾಟಕ
ದಿನಾಂಕ22/11/2021 ಸೋಮವಾರದಂದು
ಮೂಡಿಗೆರೆ ತಾಲೂಕಿನ ಜಿಲ್ಲಾ ಸರ್ವೇಕ್ಷಣ ಅಭಿಯಾನ ಯೋಜನೆಯಡಿ ಡಾಕ್ಟರ್ ಸುಂದರೇಶ್ ಅವರ ನೇತೃತ್ವದಲ್ಲಿ ಕೆ.ಎಸ್.ಆರ್.ಟಿ.ಸರ್ಕಾರಿ ಬಸ್ ನಿಲ್ದಾಣದ ಬಳಿ ಹಾಗೂ ಬಣಕಲ್ ಗ್ರಾಮ ಪಂಚಾಯಿತಿ ಬಳಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಯುವ ಸ್ಪಂದನ ಸಹಯೋಗದಲ್ಲಿ ಸಂಕೇತ್ ಯುವ ಸಂಘದ ಸಂಯುಕ್ತಾಶ್ರಯದಲ್ಲಿ ಆರೋಗ್ಯದ ಕುರಿತು ಹಾಗೂ ಸರ್ಕಾರದ ಆರೋಗ್ಯ ಸಂಬಂಧಿತ ಯೋಜನೆಗಳ ಕುರಿತು ಜನರಲ್ಲಿ ಬೀದಿನಾಟಕದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು,
ನಾಟಕದ ನಿರ್ದೇಶಕರಾದ ಹಿರಿಯ
ಕಲಾವಿದರಾದ ಚಿಕ್ಕಮಗಳೂರಿನ ರಮೇಶ್ ಬಂಗಾರ್ ರವರ ನೇತೃತ್ವದಲ್ಲಿ ಸಂಕೇತ್ ಕಲಾ ತಂಡದ ಕಲಾವಿದರು ಜನಪದ ಗೀತೆ ಹಾಗೂ ಅಭಿನಯದ ಮೂಲಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ದೊರೆಯುವ ಯೋಜನೆಗಳ ಒಳ್ಳೆಯ ಸಂದೇಶಗಳನ್ನು ಉತ್ತಮ ಅಭಿನಯ ಮತ್ತು ಹಾಡುಗಳ ಮೂಲಕ ಗ್ರಾಮೀಣ ಕನ್ನಡ ಭಾಷೆಯಲ್ಲಿ ಜನಮನ ಮುಟ್ಟುವಂತೆ ತಲುಪಿಸಿದರು. ಸಂಯೋಜನೆ ಜೊತೆಯಾಗಿ ಸುಗ್ರಾಮ ಹಾಗೂ ವಾಯ್ಸ್,ವಿಕಸನ ಸಂಸ್ತೆಯ N G O ನವೀನ್ ಕುಮಾರ್ ಸಹಕಾರ ನೀಡಿದರು..
ನಾಟಕದಲ್ಲಿ ಕಲಾವಿದರಾದ ರಮೇಶ್ ಬಂಗಾರ್,ಅಶ್ವಿನಿ, ಶ್ರವಣ್,ಪ್ರಸನ್ನ,ರಂಗಸ್ವಾಮಿ ನಟಿಸಿದರು..ಹಾಗೂ ಯುವ ಸ್ಪಂದನದ ಕರ್ಯಕರ್ತರಾದ ಅಬ್ದುಲ್ ನಾಜ಼ೀಮ್ ಹಾಗೂ ಪತ್ರಕರ್ತ ನಂದಿಶ್ ಬಂಕೇನಹಳ್ಳಿ ಹಾಗೂ ನಿರೂಪಕಿ ವಿಜಯಲಕ್ಷ್ಮಿ ಉಪಸ್ಥಿತರಿದ್ದರು.
ವರದಿ: ಮಗ್ಗಲಮಕ್ಕಿ ಗಣೇಶ್
ಬ್ಯೂರೋ ನ್ಯೂಸ್