ಸರ್ಕಾರಿ ಶಾಲಾ ಆವರಣದಲ್ಲಿ ಸಾಮಾಜಿಕ ಸಂಸ್ಥೆಯಿಂದ ಸ್ವಚ್ಛತಾ ಕಾರ್ಯ
1 min read
ಸರ್ಕಾರಿ ಶಾಲಾ ಆವರಣದಲ್ಲಿ ಸಾಮಾಜಿಕ ಸಂಸ್ಥೆಯಿಂದ ಸ್ವಚ್ಛತಾ ಕಾರ್ಯ
October 26, 2021
ಚಿಕ್ಕಮಗಳೂರು:
ಶಾಲೆಗಳು ಆರಂಭವಾಗಿದ್ದು, ಶಾಲೆ ಆವರಣಗಳಲ್ಲಿ ಸ್ವಚ್ಛತಾ ಕಾರ್ಯಗಳು ಗರಿಗೆದರತೊಡಗಿವೆ .ಗ್ರಾಮೀಣ ಭಾಗದ ಶಾಲೆಯೊಂದರ ಆವರಣದಲ್ಲಿ ಸ್ವಚ್ಛತಾ ಕಾರ್ಯವನ್ನು ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ನೆರವೇರಿಸಿದೆ
ಸರಿಸುಮಾರು 20 ತಿಂಗಳಿನಿಂದ ಶಾಲೆಗಳು ತೆರೆಯದೆ ಎಷ್ಟೋ ಶಾಲೆಗಳ ಆವರಣಗಳು ನಿರ್ಜನ ಪ್ರದೇಶಗಳಾಗಿ ಮಾರ್ಪಟ್ಟು ಶಾಲೆಯ ಗೋಡೆ , ಟೆರೇಸ್ ಮೇಲೆ ಪಾಚಿ , ಆವರಣದಲ್ಲಿ ಗಿಡಗಂಟಿ, ಪೊದೆ ಬೆಳೆದಿರುವುದು ಸಾಮಾನ್ಯ ದೃಶ್ಯ.
ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯಿಂದ ಮೂಡಿಗೆರೆ ತಾಲೂಕಿನ ಬೀಜುವಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಶಾಲೆಯ ಮೇಲ್ಚಾವಣಿ ಹಾಗೂ ನೀರಿನ ಟ್ಯಾಂಕ್ ಸಹಿತ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿದರು.
ಸ್ಚಚ್ಛತಾ ಕಾರ್ಯದಲ್ಲಿ ಸಂಸ್ಥೆಯ ಅಧ್ಯಕ್ಷ ಫಿಶ್ ಮೋನು, ಅಬ್ದುಲ್ ರಹಿಮಾನ್, ಹಸೈನಾರ್, ಆಶಿಕ್, ಮುಸ್ತಫ, ಅಕ್ರಮ್, ರಫೀಕ್ ಪಾಲ್ಗೊಂಡಿದ್ದರು.
ಶಾಲೆಯ ಮುಖ್ಯ ಶಿಕ್ಷಕಿ ಧರಣಿ, ಜ್ಞಾನೇಶ್ವರಿ ಸುರಯ್ಯ ಬಾನು, ಆಶಿಕ್.
ಇದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.