ಪ್ಲಾಸ್ಟಿಕ್ ಮುಕ್ತ ಸ್ವಚ್ಛಾ ಗ್ರಾಮ ಕಾರ್ಯಕ್ರಮ ಆಯೋಜಿಸಲಾಯಿತು
1 min read
ಪ್ಲಾಸ್ಟಿಕ್ ಮುಕ್ತ ಸ್ವಚ್ಛಾ ಗ್ರಾಮ ಕಾರ್ಯಕ್ರಮ ಆಯೋಜಿಸಲಾಯಿತು
ದಿ:25/10/2021
ನೆಹರು ಯುವ ಕೇಂದ್ರ, ಚಿಕ್ಕಮಗಳೂರು ಯುವ ಸ್ಪಂದನ,ಶಿಶು ಅಭಿವೃದ್ಧಿ ಇಲಾಖೆ ಮೂಡಿಗೆರೆ ಸಂಯುಕ್ತಾಶ್ರಯದಲ್ಲಿ ಸಾಮೂಹಿಕ ಅಭಿಯಾನವಾದ #Clean India ನೇತೃತ್ವವನ್ನು ವಿದ್ಯಾರ್ಥಿಗಳಿಂದ ಹಿಡಿದು ಎಲ್ಲಾ ಸಂಘ ಸಂಸ್ಥೆಗಳು ಸೇರಿ ಆಕ್ಟೋಬರ್ ತಿಂಗಳು ನಡೆಸಲಾಗುತ್ತಿದೆ. ಕೃಷ್ಣಪುರ, ಸಮುದಾಯ ಭವನ ಹಾಗೂ ಶಾಲಾ ಅವರಣದಲ್ಲಿ ಶಿಶು ಅಭಿವೃದ್ಧಿ ಇಲಾಖೆ ಮೂಡಿಗೆರೆ ಸಂಯುಕ್ತಾಶ್ರಯದಲ್ಲಿ ಪ್ಲಾಸ್ಟಿಕ್ ಮುಕ್ತ ಸ್ವಚ್ಛಾ ಗ್ರಾಮ ಕಾರ್ಯಕ್ರಮ ಆಯೋಜಿಸಲಾಯಿತು. ಎಲ್ಲರೂ ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡು ಕೈ ಜೋಡಿಸುತ್ತಾ ಮಹಾತ್ಮಾ ಗಾಂಧೀಜಿಯವರ ಸ್ವಚ್ಛ ಮತ್ತು ಆರೋಗ್ಯಕರ ಭಾರತದ ಕನಸನ್ನು ಈಡೇರಿಸಬೇಕು ಎಂದು ಕಾರ್ಯಕರ್ತರಿಗೆ ಮೇಲ್ವಚಾರಕರಾದ ಶ್ವೇತಾ ನುಡಿದರು. ಖುದ್ದು ಸ್ವತಃ ಎಲ್ಲರೂ ಸ್ವಚ್ಛತಾ ಅಭಿಯಾನವನ್ನು ಸುತ್ತಮುತ್ತಲಿನ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಕಾರ್ಯ ಮಾಡಲಾಯಿತು. ಸ್ವಚ್ಛ ಭಾರತ ಆಂದೋಲನಕ್ಕೆ ಜನರು ಸಾರ್ವಜನಿಕ ಸ್ಥಳಗಳಲ್ಲಿ ಉಗುಳಲೂ ಬಾರದು, ಇತರರಿಗೆ ಉಗುಳಲೂ ಬಿಡಬಾರದು ನಾವು ಗಲೀಜು ಮಾಡುವುದಿಲ್ಲ, ಗಲೀಜು ಮಾಡಲೂ ಬಿಡುವುದಿಲ್ಲ ಎನ್ನುವುದು ಮಂತ್ರವಾಗಬೇಕು ನೆಹರು ಯುವ ಕೇಂದ್ರದ ಕಾರ್ಯಕರ್ತರಾದ ಅಭಿಜಿತ್ ಸ್ವಚ್ಛತಾ ಆಂದೋಲನದಲ್ಲಿ ಭಾಗವಹಿಸಬೇಕು ಎಂದು ಆಹ್ವಾನವನ್ನೂ ನೀಡಿದ್ದರು. ನಂತರ ನಾವುಗಳೆಲ್ಲರೂ ಮಾನಸಿಕ ಸದೃಡರಾಗಿ ಉತ್ತಮ ಪ್ರಜೆ ಆಗುವಲ್ಲಿ ಜೀವನ ರೂಪಿಸಿಕೊಳ್ಳಬೇಕು ಎಂದು ನಾಜೀಮ್ , ವಿಜಯಲಕ್ಷ್ಮಿ ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ಸೃಜನಶೀಲ ಸಂಘದ ಉಪಧ್ಯಾಕ್ಷರಾದ ಪರಮೇಶ್ ಹಾಗೂ ಅಂಗನವಾಡಿ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.
ವರದಿ:ಮಗ್ಗಲಮಕ್ಕಿ ಗಣೇಶ್