ಆಲೇಕಾನ್ ಜಲಪಾತದಲ್ಲಿ ಸೆಲ್ಫಿ(selfie) ತೆಗೆಯಲು ಹೋಗಿ ಬಿದ್ದು ಗಾಯಗೊಂಡ ಯುವಕ
1 min read
ಆಲೇಕಾನ್ ಜಲಪಾತದಲ್ಲಿ ಸೆಲ್ಟಿ ತೆಗೆಯಲು ಹೋಗಿ ಬಿದ್ದು ಗಾಯಗೊಂಡ ಯುವಕ
ಬಣಕಲ್: ಆಲೇಕಾನ್ ಜಲಪಾತದಲ್ಲಿ ಸೆಲ್ಟಿ ತೆಗೆಯಲು ಹೋಗಿ ಯುವಕನೊಬ್ಬ ಬಿದ್ದು ಗಾಯಗೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಕಂಪನಿಯೊಂದರ ಟವರ್ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ವಾಹನದಲ್ಲಿದ್ದ ಪಾವಗಡ ಮೂಲದ ಮೂವರು ಯುವಕರು ಚಾರ್ಮಾಡಿ ಘಾಟ್ ನ ಆಲೇಕಾನ್ ಜಲಪಾತಕ್ಕೆ ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಹೋಗಿದ್ದು ಸೆಲ್ಪಿ ತೆಗೆಯುವ ಭರದಲ್ಲಿ ಯುವಕನೊಬ್ಬ ಕಾಲು ಜಾರಿ ಜಲಪಾತದ ಪ್ರಪಾತಕ್ಕೆ ಬಿದ್ದು ಗಾಯಗೊಂಡಿದ್ದಾನೆ. ಪಾವಗಡ ಮೂಲದ ಅಭಿಲಾಷ್ ಗಾಯಗೊಂಡ ಯುವಕ. ಮಾಹಿತಿ ತಿಳಿಯುತ್ತಿದ್ದಂತೆ ಬಣಕಲ್ ಠಾಣೆ ಹಾಗೂ 112 ಪೋಲಿಸರು ಹಾಗೂ ಅಂಬುಲೆನ್ಸ್ ಸ್ಥಳಕ್ಕೆ ದಾವಿಸಿದ್ದು ಜಲಪಾತದ ಪ್ರಪಾತಕ್ಕೆ ಬಿದ್ದು ಕೈ ಮತ್ತು ಕಾಲಿಗೆ ಗಾಯವಾಗಿದ್ದ ಯುವಕನನ್ನು ಮೇಲೆತ್ತಿ ಉಜಿರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂದರ್ಭದಲ್ಲಿ ಬಣಕಲ್ ಠಾಣೆ ಎಎಸ್ಐ ಶಶಿ, ಸಾಮಾಜಿಕ ಕಾರ್ಯಕರ್ತ ಆರೀಪ್, ಹಾಗೂ ಪೋಲಿಸ್ ಸಿಬ್ಬಂದಿಗಳು ಇದ್ದರು.
ಸೂಚನಾ ಫಲಕ ಅಳವಡಿಸಲು ಒತ್ತಾಯ
ಆಲೇಕಾನ್ ಜಲಪಾತದಲ್ಲಿ ಈ ಹಿಂದೆ ಹಲವರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದು ಜಲಪಾತದ ಬಳಿ ಎಚ್ಚರಿಕೆಯ ಸೂಚನಾ ಫಲಕವನ್ನು ಅಳವಡಿಸಲಾಗಿತ್ತು. ಆದರೆ 2019 ರಲ್ಲಿ ಸುರಿದ ಮಳೆಗೆ ಸೂಚನಾಪಲಕ ಕೊಚ್ಚಿ ಹೋಗಿದ್ದು ಸೂಚನಾ ಫಲಕ ಇಲ್ಲದೆ ಇರುವುದಿಂದ ಜಲಪಾತಕ್ಕೆ ಪ್ರವಾಸಿಗರು ಇಳಿಯುವುದು ಹೆಚ್ಚಾಗಿದೆ. ಜಲಪಾತದ ಬಳಿ ಸಂಬಂಧಪಟ್ಟ ಅಧಿಕಾರಿಗಳು ಸೂಚನಾಫಲಕ ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.