लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
22/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆ ಬಹುಜನ ಸಮಾಜ ಪಾರ್ಟಿ* ವತಿಯಿಂದ ಪ್ರತಿಭಟನೆ.

1 min read
Featured Video Play Icon

*ಮೂಡಿಗೆರೆ ಬಹುಜನ ಸಮಾಜ ಪಾರ್ಟಿ* ವತಿಯಿಂದ ಪ್ರತಿಭಟನೆ.
ದಿನಾಂಕ 3-10-2021ನೇ ಭಾನುವಾರದಂದು ಉತ್ತರ ಪ್ರದೇಶದ ಲಖಿಮ್ ಪುರ ಖೇರಿಯಲ್ಲಿ ನಡೆಯುತ್ತಿದ್ದ ರೈತರ ಶಾಂತಿಯುತ ಪ್ರತಿಭಟನೆಯಲ್ಲಿ ಕೇಂದ್ರ ಗೃಹ ಖಾತೆ ಸಚಿವ ಅಜೇಯ್ ಮಿಶ್ರ ರವರ ಪುತ್ರ ಆಶಿಶ್ ಕಾರು ಹರಿಸಿ ನಾಲ್ವರು ರೈತರನ್ನು ಅಮಾನುಷವಾಗಿ ಕೊಂದಿರುವುದನ್ನು ಖಂಡಿಸಿ ಗುರುವಾರ ಪಟ್ಟಣದ ಎಂ ಜಿ ರೋಡಿನ ಮೂಲಕ ತಾಲೂಕು ಕಚೇರಿ ಮುಂಭಾಗ ಮೂಡಿಗೆರೆ ಬಿ ಎಸ್ ಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಕುರಿತು ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕಿರ್ ಹುಸೇನ್ ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶದ ದ ಯೋಗಿ ಸರ್ಕಾರದ ವಿರುದ್ಧ ಹರಿಹಾಯ್ದರು.ನರೇಂದ್ರ ಮೋದಿ ಸರ್ಕಾರಕ್ಕೆ ರೈತರ ಮೇಲೆ ಅಥವಾ ಸಾಮಾನ್ಯ ಜನರ ಮೇಲೆ ಯಾವುದೇ ರೀತಿಯ ಗೌರವ ಇಲ್ಲ ಆಗಾಗಿ ಇಟ್ಲರ್ ನ ಹಾಗೆ ಸರ್ವಾಧಿಕಾರಿ ಧೋರಣೆ ಮಾಡುತ್ತಿದ್ದಾರೆ ಆದ ಕಾರಣ ಮನಬಂದಂತೆ ಯೋಧರನ್ನು ರೈತರನ್ನು ಬಳಸಿಕೊಳ್ಳುತ್ತಿದ್ದಾರೆ ಇದಕ್ಕೆ ಉತ್ತರ ಜನರೇ ಸದ್ಯದಲ್ಲೇ ಕೊಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಬಿ ಎಸ್ ಪಿ ಯ ಜಿಲ್ಲಾ ಸಂಯೋಜಕರು ಯು ಬಿ ಮಂಜಯ್ಯ ಮಾತನಾಡಿ-ಕೋಮುವಾದಿಗಳಿಗೆ ಸರ್ಕಾರ ನಡೆಸಲು ಕೊಟ್ಟು ಇಡೀ ದೇಶ ಕಣ್ ಬಿಡುವಂತಾಗಿದೆ.ಯೋಗಿ ಆದಿತ್ಯ ನಾಥ್ ಸರ್ಕಾರಕ್ಕೆ ಜನರ ಬದುಕು ರೈತರ ಬದುಕು ಬೇಕಿಲ್ಲ ದೊಡ್ಡ ದೊಡ್ಡ ಉದ್ಯಮಿಗಳ, ಗೂಂಡಾಗಳ ಪರವಾಗಿ ಇರುವ ಭ್ರಷ್ಟ ಸರ್ಕಾರ ಆಗಾಗಿ ಯು ಪಿ ಸರ್ಕಾರದಲ್ಲಿ ದಿನ ನಿತ್ಯ ಕೊಲೆ ಸುಲಿಗೆ ಅತ್ಯಾಚಾರ ಎಗ್ಗಿಲ್ಲದೇ ನಡೆಯುತ್ತಿರುವುದು.
ರೈತರ ಮೇಲೆ ಕಾರು ಹತ್ತಿಸಿ ಹತ್ಯಾ ಮಾಡಿರುವುದು ಅಮಾನುವಿಯ ಇದನ್ನು ನಮ್ಮ ಪಕ್ಷ ಖಂಡಿಸುತ್ತೆ ಕೂಡಲೇ ಯೋಗಿ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ತರಬೇಕು ಎಂದರು.
ಈ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಬಿ ಎಂ ಶಂಕರ್ -ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ಅಭದ್ರತೆ ಉಂಟಾಗಿದ್ದು ಪ್ರಜಾಪ್ರಭುತ್ವದ ಬಗ್ಗೆ ಅರಿವೇ ಇಲ್ಲದ ಮೂರ್ಖರಿಗೆ ದೇಶದ ಅಧಿಕಾರದ ಚುಕ್ಕಾಣಿಕೊಟ್ಟಿರುವುದು ನಮ್ಮೆಲ್ಲರ ದೌರ್ಭಗ್ಯ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ರೈತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತ ಬಂದಿದೆ ಅಧಿಕಾರಕ್ಕಾಗಿ ದೇಶ ಮಾರುವ ದೇಶ ದ್ರೋಹಿಗಳು ಎಂದರು.
ಬಿ ಎಸ್ ಪಿ ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಕ್ಕಿ ಮಂಜುನಾಥ್ ಮಾತನಾಡಿ-ದೇಶದಲ್ಲಿ 85% ಬಹುಜನರು ಇರುವ ಈ ದೇಶದಲ್ಲಿ ಯಾವುದೇ ಅಧಿಕಾರ ಇಲ್ಲ ಆದರೆ 3%ಇರುವವರ ಹತ್ತಿರ ಅಧಿಕಾರ ಇದೆ ಇದು ಈ ದೇಶದ ದುರಂತ .
ದೇಶದಲ್ಲಿ ರಾಜ್ಯದಲ್ಲಿ ಇರುವ ಯಾವುದೇ ಸಮುದಾಯಕ್ಕೂ ಬಸವಣ್ಣ, ನಾರಾಯನಗುರು,ಅಂಬೇಡ್ಕರ್,ಕುವೆಂಪು ಇವರ ವಿಚಾರಗಳು ಅರ್ಥವಾಗಿಲ್ಲ ಆಗಾಗಿ ದೇಶದಲ್ಲಿ ಮೂರ್ಖರ ಕೈಯಲ್ಲಿ ದೇಶ ಇರುವುದು ಇದೆ ರೀತಿ ದಿನೇ ದಿನೇ ಈ ರೀತಿಯ ಘಟನೆಗಳು ಮರುಕಳಿಸುತ್ತಿದ್ದರೆ ಈ ದೇಶದಲ್ಲಿ ಮುಂದೊಂದು ದಿನ ಜನರು ಕಾನೂನನ್ನು ಕೈ ಗೆತ್ತಿಕೊಳ್ಳುವ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕ್ಷೇತ್ರ ಸಮಿತಿ ಅಧ್ಯಕ್ಷ ಎಲ್ ಬಿ ರಮೇಶ್ ಮಾತನಾಡಿ-ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯಾವುದೋ ಮಠದಲ್ಲಿ ಪೂಜೆ ಮಾಡಿಕೊಂಡು ಕೂರಬೇಕಿದ್ದ ಯೋಗಿ ಆದಿತ್ಯನಾಥ ಮುಖ್ಯಮಂತ್ರಿ ಆದಾಗಿನಿಂದ ತನ್ನ ಸರ್ವಾಧಿಕಾರಿ ದೊರಣೆಯ ಮೂಲಕ ಇಡೀ ರಾಜ್ಯವನ್ನೇ ಗೂಂಡಾ ರಾಜ್ಯವನ್ನಾಗಿ ಮಾಡಿದ್ದಾನೆ,ರೈತರನ್ನು ಅಮಾನುಷವಾಗಿ ಕೊಂದ ದುಷ್ಟರನ್ನು ಆದಷ್ಟು ಬೇಗ ಬಂಧಿಸಿ ಉಗ್ರ ಶಿಕ್ಷೆ ವಿಧಿಸಿ ಸರ್ಕಾರವನ್ನು ವಜಾಗೊಳಿಸುವ ಮೂಲಕ ರಾಷ್ಟ್ರಪತಿಯವರು ಮಧ್ಯ ಪ್ರವೇಶಿಸಿಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಪಕ್ಷ ಇಡೀ ದೇಶದಾದ್ಯಂತ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿ ಎಸ್ ಪಿ ಯ ಜಿಲ್ಲಾ ಮುಖಂಡ ಹಾಂದಿ ಬಾಬಣ್ಣ,.ಬಿ ಎಸ್ ಪಿ ಯ ತಾಲ್ಲೂಕು ಸಂಯೋಜಕ ಹೊರಟ್ಟಿ ಶ್ರೀಕಾಂತ್,ತಾಲ್ಲೂಕು ಉಸ್ತುವಾರಿ ವಸಂತ್,ಪ್ರಧಾನ ಕಾರ್ಯದರ್ಶಿ ಮಹೇಶ್, ತಾಲ್ಲೂಕು ಮುಖಂಡ ರವಿ ಬಕ್ಕಿ, ಮುಸ್ಲಿಂ ಮುಖಂಡ ಅಬ್ರಾಹರ್ಬಿ ಎಸ್ ಪಿ ಮಂಜಣ್ಣ ಮಾಣಿಮಕ್ಕಿ,ಕೋಳೂರು ಕುಮಾರ್,ಅಣಜೂರು ಮಲ್ಲೇಶ್,ಸಂದೀಪ್,ಬಕ್ಕಿ ನಾಗೇಶ್, ದಿನೇಶ್ ತ್ರಿಪುರ, ಹಮೀದ್ ಬಿಳಗುಳ, ಕಳಸ ಚಲ್ಲು, ಬಣಕಲ್ ಹೋಬಳಿ ಅಧ್ಯಕ್ಷ ಹೊನ್ನೆಶ್

ಮುಂತಾದವರು ಭಾಗವಹಿಸಿದ್ದರು

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್

http://nisargacare.com/career/

Assisted living facilities in Bangalore India

About Author