ಕಸ ಗಟಾರ ನೀರು ರಸ್ತೆ ಮೇಲೆ ಹರಿದು ಬರುತಿದ್ದು ಇದನ್ನು ಸ್ವಚ್ಛ ಗೊಳಿಸುವದರ ಬಗ್ಗೆ #avintvcom
1 min read
ಬೆಳಗಾವಿ ಜಿಲ್ಲೆಯ ಅಥಣಿಯ ಶಿವಯೋಗಿ ನಗರ ಇದು ಸಂಕೋನಟ್ಟಿ ಗ್ರಾಮ ಪಂಚಾಯತಿಗೆ ಒಳಪಟ್ಟಿದೆ ಇಲ್ಲಿ ಒನ ಕಸ ಗಟಾರ ನೀರು ರಸ್ತೆ ಮೇಲೆ ಹರಿದು ಬರುತಿದ್ದು ಇದನ್ನು ಸ್ವಚ್ಛ ಗೊಳಿಸುವದರ ಬಗ್ಗೆ ವಿದ್ಯುತ ದೀಪಗಳನ್ನೂ ಅಳವಡಿಸುವ ಕುರಿತು ಹಲವು ಬಾರಿ ಸ್ಥಳೀಯ ಶಾಸಕರಾದ ಮಹೇಶ ಕುಮಠಳ್ಳಿ ,ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ,ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ,ತಾಲೂಕ ಪಂಚಾಯತ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಗಮನ ಹರಿಸದೆ ಇರುವದು ವಿಪರ್ಯಾಸದ ಸಂಗತಿ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಪ್ರವೀಣ ನಾಯಿಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಶಿವಯೋಗಿ ನಗರದಲ್ಲಿ ಮೂರೂ ತಿಂಗಳ ಹಿಂದೆ ವಿದ್ಯುತ ದೀಪಗಳನ್ನು ಅಳವಡಿಸಿದ್ದು ಇನ್ನು ಸಮಸ್ಯಗಳ ಸರಮಾಲೆ ಇದ್ದರೂ ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಸ್ಯಗಳ ಬಗ್ಗೆ ಗಮನ ಹರಿಸದೆ ತಮ್ಮ ತಮ್ಮ ಕಾರ್ಯಾಲಯದಲ್ಲಿ ಅಭಿವೃದ್ಧಿ ಮಂತ್ರ ಪಠಿಸುತ್ತಿದ್ದಾರೆ.ಹೊರತು ಅಭಿವೃದ್ಧಿ ಆಗಿಲ್ಲ ಶಿವಯೋಗಿ ನಗರದಲ್ಲಿರುವ ಸಮಸ್ಯೆಯನ್ನು ಒಂದು ವಾರದಲ್ಲಿ ಬಗೆ ಹರಿಸಬೇಕು ಇಲ್ಲವಾದರೆ ತಮ್ಮ ವಿರುದ್ದ ಪ್ರತಿಭಟನೆ ಮಾಡಲಾಗುವದು ಎಂದು ಶಿವಯೋಗಿ ನಗರದ ಜನತೆ ಎಚ್ಚರಿಕೆ ನೀಡಿದ್ದಾರೆ .
ಬಹು ದಿನಗಳಿಂದ ಬೇಡಿಕೆ ಇರುವ ಅಭಿವೃದ್ಧಿ ದೃಷ್ಟಿ ಯಿಂದ ಗ್ರಾಮ ಪಂಚಾಯತದಿಂದ ಪುರಸಭೆ ಕಾರ್ಯಾಲಯಕ್ಕೆ ಒಳಪಡಿಸಬೇಕು ಎಂದು ಒತ್ತಾಯ ಮಾಡಲಾಗಿದೆ.
http://nisargacare.com/career/