AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಾನವಿಯತೆ ಮೆರೆದ ಸ್ವಯಂ ಸೇವಕರು #avintvcom

1 min read
Featured Video Play Icon

ಮಾನವಿಯತೆ ಮೆರೆದ ಸ್ವಯಂ ಸೇವಕರು
5 /8 /2021 ರಂದು ಚಿಕ್ಕಮಗಳೂರು ಜಿಲ್ಲೆಯ ಮುತ್ತೋಡಿ ಜಾಗರ ಕೊಳವೆ ಗ್ರಾಮ ಪಂಚಾಯಿತಿ ಹತ್ತಿರ ಸುಮಾರು ತಿಂಗಳಿಂದ ಮಳೆಯಲ್ಲಿ ರಸ್ತೆಯಲ್ಲಿ ತಿರುಗಾಡುತ್ತಿದ್ದ ಸುಮಾರು 60 ವರ್ಷ ಪ್ರಾಯದ ಮಾತನಾಡಲು ಬಾರದ ಮೂಗ ಇರುವುದನ್ನು ಕಂಡು ಅಲ್ಲಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆದ ಗುರುರಾಜ್ ಎಂಬವರು ಅದೇ ಊರಿನ ಗ್ರಾಮಸ್ಥರು ಸೇರಿ ಅಲ್ಲಿ ಒಂದು ಬಸ್ ಸ್ಟಾಂಡ್ ನಲ್ಲಿ ಸೇರಿಸಿಕೊಂಡಿದ್ದರು. ದಿನಾಲು ಊರಿನವರು ಊಟ-ತಿಂಡಿ ಕೊಡುತ್ತಿದ್ದರು.
ಇವತ್ತು ನಮ್ಮ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪಿಶ್ ಮೊನು ರವರಿಗೆ ಗ್ರಾಮ ಪಂಚಾಯತ್ ಕಾರ್ಯದರ್ಶಿಯವರಾದ ಗುರುರಾಜ್ ರವರು ಫೋನ್ ಮಾಡಿದಾಗ ತಕ್ಷಣ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯ ಉಪಾಧ್ಯಕ್ಷರಾದ ಆರಿಫ್ ಬಣ್ಕಲ್ ಅಲ್ಲಿಗೆ ತೆರಳಿ ಅಲ್ಲಿಯೇ ಗ್ರಾಮಸ್ಥರ ಸಹಕಾರದಿಂದ ಬಿಸಿನೀರಿನಲ್ಲಿ ಸ್ನಾನ ಮಾಡಿಸಿ ಕಳಸ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿ ಸಂಸೆ ಆಶ್ರಮಕ್ಕೆ ಸೇರಿಸಲಾಯಿತು.
ಈ ಕಾರ್ಯಕ್ಕೆ ಅಲ್ಲಿಯ ಗ್ರಾಮಸ್ಥರು ಮತ್ತು ಪ್ರತ್ಯೇಕವಾಗಿ ಗ್ರಾಮ ಪಂಚಾಯತ್ ಅಧಿಕಾರಿ ಯವರಾದ ಗುರುರಾಜ್ ಎಂಬವರು ಅಂಬುಲೆನ್ಸ್ ಬಾಡಿಗೆ ಮತ್ತು ಅವರ ಸಂಪೂರ್ಣ ಸಹಕಾರ ನೀಡಿದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author