*ಕೋವೀಡ್ ಕೇರ್ ಸೆಂಟರ್ ತೆರೆಯಲು ಜಿಲ್ಲಾಧಿಕಾರಿಗೆ ಮನವಿ*#avintvcom
1 min read
*ಕೋವೀಡ್ ಕೇರ್ ಸೆಂಟರ್ ತೆರೆಯಲು ಜಿಲ್ಲಾಧಿಕಾರಿಗೆ ಮನವಿ*
ಮೂಡಿಗೆರೆ ತಾಲೂಕ್.
ಬಾಳೂರು ಹೋಬಳಿಯ ನಿಡುವಾಳೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೋವೀಡ್ ಕೇರ್ ಸೆಂಟರ್ ಆಗಿ ನಿರ್ಮಿಸಲು ಬಾಳೂರು ಹೋಬಳಿಯ ನಿಡುವಾಳೆ ಗ್ರಾಮಸ್ಥರು ಮೂಡಿಗೆರೆ ಉಪತಹಶೀಲ್ದಾರ್ ಸುಧಾರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಎನ್ ಎಸ್ ಸುಧಾಕರ್ ಮಾತನಾಡಿ ನಿಡುವಾಳೆ ಆಸ್ಪತ್ರೆ ಅಭಿವೃದ್ಧಿ ಆಗಬೇಕು ಮತ್ತು ಆಸ್ಪತ್ರೆಗೆ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಬೇಕೆಂದು ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ.
ಮುಂದಿನ ಬಾರಿ ಧರಣಿ ಕೂರುವುದಾಗಿ ಎಚ್ಚರಿಸಿದರು.
ಅದೇರೀತಿ ಇನ್ನೋರ್ವ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಎ ಎಸ್ ಮೋನಪ್ಪ ಮಾತನಾಡಿ ಮಲೆನಾಡಿನ ಒಂದು ಭಾಗವಾಗಿರುವ ಬಾಳೂರು ಹೋಬಳಿಯಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ ಕೂಡ ಗುಡ್ಡಗಾಡು ಪ್ರದೇಶ ಆಗಿರುವುದರಿಂದ ಸರಿಯಾದ ರಸ್ತೆ ಸಂಪರ್ಕ ವ್ಯವಸ್ಥೆ ಇರುವುದಿಲ್ಲ ಮತ್ತು ಹೋಬಳಿಗೆ ಬರುವ ಮೂರು ಆಸ್ಪತ್ರೆಯಲ್ಲಿ ಸರಿಯಾಗಿ ವೈದ್ಯರು, ಸಿಬ್ಬಂದಿಗಳಿಲ್ಲ.
ಕೋವೀಡ್ ಎರಡನೇ ಅಲೆ ಬಂದ ಸಂದರ್ಭದಲ್ಲಿ ಈ ಭಾಗದಲ್ಲಿ ಅತಿಹೆಚ್ಚು ಸೋಂಕಿತರು ಕಂಡುಬಂದಿದ್ದು ಅವರು ದೂರದ ಆಸ್ಪತ್ರೆಗೆ ಹೋಗಲು ವಾಹನ ಸಂಚಾರವಿಲ್ಲದೆ ಮತ್ತು ಆರ್ಥಿಕ ಸಂಕಷ್ಟದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಈ ಆರೋಗ್ಯ ಕೇಂದ್ರವನ್ನು ಕೋವೀಡ್ ನಿಗಾ ಘಟಕವನ್ನಾಗಿ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಮುಂದೆ ಧರಣಿ ನಡೆಸುವಂತೆ ಎಚ್ಚರಿಕೆ ನೀಡಿದರು.
ಮತ್ತು ಮಾನ್ಯ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಕರ್ನಾಟಕ ಸರ್ಕಾರ, ಉಸ್ತುವಾರಿ ಸಚಿವರು ಚಿಕ್ಕಮಗಳೂರು, ಶಾಸಕರು ಮೂಡಿಗೆರೆ, ಹಾಗೂ ಜಿಲ್ಲಾಧಿಕಾರಿಗೆ ಮನವಿಯನ್ನು ಅಂಚೆ ಮೂಲಕ ಕಳುಹಿಸಲಾಯಿತು ಎಂದರು.
ತನಿಯ್ಯಪ್ಪ ಹಡ್ತಾಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ವಂದಿಸಿದರು.
ನಿಡುವಾಳೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಮನೋಜ್ ಕುಮಾರ್.
ಗ್ರಾಮಲೆಕ್ಕಾಧಿಕಾರಿ ಮಹೇಶ್,
ಧರ್ಮಸ್ಥಳ ವಿಪತ್ತು ನಿರ್ವಹಣಾದ ಸ್ವಾಮಿ.
ನಾರಾಯಣ. ಶಂಕರ ಹೇಮಾವತಿ. ಬಿಕೆ ಸಂಜೀವ,ರವಿ ಸಂಪಿಗೆಖಾನ್,
ಆಟೋ ಸಂಘದ ಅಧ್ಯಕ್ಷ ವಿಶ್ವ,
ಆಟೋ ಮಹೇಶ್, ಹರೀಶ್,
ರವಿ ಮಕ್ಕಿಮನೆ,
ವಿಠ್ಠಲ್ ಚೆಂದುಳ್ಳಿ, ಹಾಗೂ ರಾಮೇಶ್ವರ ಆಟೋ ಸಂಘದ ಪದಾಧಿಕಾರಿಗಳು,ಬಾಳೂರು ಠಾಣಾ ಸಿಬ್ಬಂದಿಗಳು,ಗ್ರಾಮಸ್ಥರು ಉಪಸ್ಥಿತರಿದ್ದರು.
ಬರಹ ಕೃಪೆ.
ಮಂಜು ಜಾವಳಿ,ಸಂತೋಷ್ ಡಿ ಸಾಲ್ಯಾನ್ ನಿಡುವಾಳೆ..
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.