AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಮನೆ ಕಳೆದುಕೊಂಡ ರಾಜು ರವರಿಗೆ ಆರ್ಥಿಕ ನೆರವು ನೀಡಿದ ಆದಿದ್ರಾವಿಡ ಸಮುದಾಯ#avintvcom

1 min read
Featured Video Play Icon

*ಮನೆ ಕಳೆದುಕೊಂಡ ರಾಜು ರವರಿಗೆ ಆರ್ಥಿಕ ನೆರವು ನೀಡಿದ ಆದಿದ್ರಾವಿಡ ಸಮುದಾಯ

ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ,
ಜಾವಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲ್ಕುಡಿಗೆ ರಾಜುರವರ ಮನೆ ಅತಿಯಾದ ಮಳೆಯಿಂದಾಗಿ ಕುಸಿದು ಬಿದ್ದ ಘಟನೆ ತಿಳಿದು ಇಂದು ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜಸೇವಾ ಸಂಘ ಹಾಗೂ ದ,ಕ ಜಿಲ್ಲಾ ಆದಿದ್ರಾವಿಡ ಸಮಾಜಸೇವಾ ಸಂಘದ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅವರೊಂದಿಗೆ ಚಿಕ್ಕಮಗಳೂರು ಜಿಲ್ಲಾ ಮಂಡಳಿ ಮತ್ತು ಬಾಳೂರು ಹೋಬಳಿ ಮಟ್ಟದ ಪದಾಧಿಕಾರಿಗಳು ಭಾಗವಹಿಸಿದ್ದರು.
ಮನೆ ಕಳೆದುಕೊಂಡ ರಾಜುರವರ ಕುಟುಂಬಕ್ಕೆ ರಾಜ್ಯ ಮಂಡಳಿ ಮತ್ತು ದ,ಕ ಜಿಲ್ಲಾ ಪದಾಧಿಕಾರಿಗಳು ಬೇಸರವನ್ನು ವ್ಯಕ್ತಪಡಿಸಿ ಅವರು ಕುಟುಂಬಕ್ಕೆ ಆರ್ಥಿಕ ನೆರವು ನೀಡಿದರು. ಇದನ್ನು ಬಾಳೂರು ಅಧ್ಯಕ್ಷರು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಎ ಎಸ್ ಮೋನಪ್ಪ ರವರು ಮಾತನಾಡಿ ಆರ್ಥಿಕ ನೆರವು ನೀಡಿದ ರಾಜ್ಯ ಮಂಡಳಿ ಮತ್ತು ದ,ಕ ಜಿಲ್ಲಾ ಆದಿದ್ರಾವಿಡ ಸಮಾಜಸೇವಾ ಸಂಘದ ಪದಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಕರ್ನಾಟಕ ರಾಜ್ಯ ಸಂಚಾಲಕರಾದ ಪ್ರೇಮ್ ನಾಥ್ ಬಲ್ಲಾಳ್ ಬಾಗ್, ರಾಜ್ಯ ಸಹಕಾರ್ಯದರ್ಶಿ ಕೃಷ್ಣಪ್ಪ ಮೆಣಸುಕುಡಿಗೆ,ದ.ಕ ಜಿಲ್ಲಾ ಅಧ್ಯಕ್ಷರಾದ ರಘುನಾಥ್ ಅತ್ತಾವರ, ಜಿಲ್ಲಾ ಉಪಾಧ್ಯಕ್ಷರಾದ ಸುರೇಶ್, ಚೈತನ್ಯ ಬ್ಯಾಂಕ್ ಅಧ್ಯಕ್ಷರಾದ ಕೃಷ್ಣ ಸೂಟರ್ ಪೇಟೆ,
ಸೂರಜ್ ಬಲ್ಲಾಳ್ ಬಾಗ್, ಅಮಿತ್ ಬಲ್ಲಾಳ್ ಬಾಗ್, ರಾಜೇಶ್, ನಿತಿನ್ ಬಲ್ಲಾಳ್ ಬಾಗ್.
ಬಾಳೂರು ಹೋಬಳಿ ಅಧ್ಯಕ್ಷರಾದ ತನಿಯ್ಯಪ್ಪ ಹಡ್ತಲ್,
ಕಳಸ ತಾಲ್ಲೂಕು ಅಧ್ಯಕ್ಷರಾದ ಮೋಹನ್ ಹಿರೇಬೈಲ್,
ಸತೀಶ್ ಜಾವಳಿ, ರಮೇಶ್ ಕೆಳಗೂರು,
ಜಿಲ್ಲಾ ಮಂಡಳಿ ಸದಸ್ಯರಾದ ಕೃಷ್ಣಪ್ಪ ಜಾವಳಿ,
ವಿಶ್ವ ನಿಡುವಾಳೆ,
ಚಂದ್ರು ಸಂಪ್ಲಿ
ಮತ್ತಿತರರು ಉಪಸ್ಥಿತರಿದ್ದರು.
ಬರಹ ಕೃಪೆ::
ಮಂಜು ಜಾವಳಿ,
ಸಂತೋಷ್ ಡಿ ಸಾಲ್ಯಾನ್ ನಿಡುವಾಳೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

http://nisargacare.com/navachaithanya-old-age-home/

Career | job

About Author