AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಎಚ್ಚರ. ಎಚ್ಚರ. ಎಚ್ಚರ.*ಪೊಲಿಸರಿಗೊಂದು ಸಲಾಂ* #avintvcom

1 min read
Featured Video Play Icon

ಎಚ್ಚರ. ಎಚ್ಚರ. ಎಚ್ಚರ.

*ಪೊಲಿಸರಿಗೊಂದು ಸಲಾಂ*

*ಮಲೆನಾಡಿನಲ್ಲಿ ದರೋಡೆ ಗಿಳಿದವರ ಪಾಡು ನೋಡಿ*

ಮೂಡಿಗೆರೆ:-
ಇತ್ತೀಚೆಗೆ ಮಲೆನಾಡು ಭಾಗವಾದ ಮೂಡಿಗೆರೆ ತಾಲೂಕಿನ ಮುದ್ರೆಮನೆ ಎಂಬಲ್ಲಿ ನಾಲ್ವರು ದರೋಡೆಕೋರರ ತಂಡವೊಂದು ರಾತ್ರಿ ಕತ್ತಲಲ್ಲಿ ರಸ್ತೆ ಬದಿ ಹೊಂಚು ಹಾಕಿ ಕುಳಿತಿತ್ತು. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 73 ರಲ್ಲಿ ರಾತ್ರಿ ಹೊತ್ತಿನಲ್ಲಿ ಬರುವ ವಾಹನವನ್ನು ಅಡ್ಡಗಟ್ಟಿ ದರೋಡೆ ನಡೆಸುವುದು ಅವರ ಉದ್ದೇಶವಾಗಿತ್ತು.

ಅದೇ ಸಮಯದಲ್ಲಿ ಗಸ್ತಿನಲ್ಲಿದ್ದ ಮೂಡಿಗೆರೆ ಠಾಣೆಯ ಸಬ್ಇನ್ಸ್ಪೆಕ್ಟರ್ ರವಿ ಮತ್ತವರ ಪೊಲೀಸ್ ಸಿಬ್ಬಂದಿಗಳ ತಂಡವು ನಿದ್ರೆಗೆಟ್ಟು ಸಂಚರಿಸುತ್ತಿದ್ದ ಸಮಯವದು.
ಮೂಡಿಗೆರೆ ಮತ್ತು ಗೋಣಿಬೀಡು ಪೊಲೀಸ್ ಠಾಣೆಗಳ ಸರಹದ್ದು ಮುದ್ರೆಮನೆ ಎಂಬ ತಿರುವಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಲು ಹಾಕಿದ್ದ ಹಂಪ್ಸ್ ಬಳಿ ಪೋಲಿಸ್ ಜೀಪನ್ನೆ ದರೋಡೆಕೋರರ ತಂಡ ಅಡ್ಡ ಹಾಕಿತ್ತು.

ಕಾಡತೂಸುಗಳನ್ನು ತುಂಬಿದ ಪಿಸ್ತೂಲ್ ಸಹಿತ ಮಚ್ಚುಗಳನ್ನು ಹಿಡಿದು ರಸ್ತೆಗೆ ಅಡ್ಡವಾಗಿ ನಿಂತಿದ್ದ ದರೋಡೆಕೋರರ ತಂಡವನ್ನು ನೋಡಿದ ಪೊಲೀಸರು ತಕ್ಷಣ ಅಲರ್ಟ್ ಆಗಿದ್ದರು.

ಸೈರನ್ ಮೊಳಗಿಸದೇ ಚಲಿಸುತ್ತಿದ್ದ ಪೊಲೀಸ್ ಜೀಪನ್ನು ಸಾಮಾನ್ಯ ನಾಗರಿಕರ ವಾಹನವೆಂದು ಕೊಂಡಿದ್ದ ದರೋಡೆಕೋರರು ಅಡ್ಡ ಹಾಕಿದರು.
ಅಲ್ಲದೆ ದೀಪ ನಿಂತೊಡನೆ ದರೊಡೆಕೊರರು ಸುತ್ತುವರೆದು ಇನ್ನೇನು ಒಳಗಿನ ಅವರನ್ನು ಹೊರಗೆಳೆಯಬೇಕು ಅನ್ನುವಷ್ಟರಲ್ಲಿ ಒಳಗಿದ್ದ ಅಷ್ಟು ಪೊಲೀಸರು ದಾಳಿಕೋರರ ಮೇಲೆ ಒಮ್ಮೆಲೆ ಎರಗಿದ್ದರು.

ಸಿನಿಮೀಯ ಮಾದರಿಯಲ್ಲಿ ನಡೆದ ದಾಳಿಯಿಂದ ಸ್ವಲ್ಪವೂ ವಿಚಲಿತ ಆಗದ ಪೊಲೀಸರು ದರೋಡೆ ಕೊರರ ಕೈಲ್ಲಿದ್ದ ಆಯುಧಗಳನ್ನು ಹಿಡಿದುಕೊಂಡು ದರೋಡೆಕೋರರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.

ಹಾಗೆ ಮಂಡ್ಯ ಜಿಲ್ಲೆಯ ಹೊಸೂರು ಎಂಬಲ್ಲಿಯ ಕುಮಾರ ಅಲಿಯಾಸ್ ಶಿವು (29),

ಹಾಸನ ಜಿಲ್ಲೆ ಹೊಳೇನರಸೀಪುರ ದ ಹುಳಿವಾಲ ಎಂಬಲ್ಲಿನ ಕುಮಾರಸ್ವಾಮಿ(23),

ಬೆಂಗಳೂರು ಬಳಿಯ ಪೀಣ್ಯ ವಾಸಿ ಅಜಯ್(25),

ಮೂಡಿಗೆರೆ ತಾಲೂಕು ಕೊಟ್ಟಿಗೆಹಾರದ ಶಿವಕುಮಾರ್ (40) ರನ್ನು ಪೊಲೀಸರು ಬಂಧಿಸಿ ಕಂಬಿ ಹಿಂದಕ್ಕೆ ಕಳಿಸಿದ್ದಾರೆ.

ಮಲೆನಾಡು ಭಾಗವಾದ ಮೂಡಿಗೆರೆ ತಾಲೂಕು ಹೇಳಿ ಕೇಳಿ ಅಲ್ಲಲ್ಲಿ ಒಂಟಿ ಮನೆಗಳಿರುವ ಪ್ರದೇಶವಾಗಿದೆ.
ಹೀಗಾಗಿ ದರೋಡೆಕೋರರ ತಂಡವು ಕಾರ್ಯಾಚರಿಸುತ್ತಿರುವ ವಿಷಯವನ್ನು ತಿಳಿದು ನಿಬ್ಬೆರಗಾಗಿದ್ದಾರೆ.
ದರೊಡೆ ನಡೆಸುತ್ತಿದ್ದ ತಂಡವನ್ನು ಆರಂಭದಲ್ಲೇ ಚಿವುಟಿ ಹಾಕಿರುವ ಮೂಡಿಗೆರೆ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಸಾರ್ವಜನಿಕರು ಪೊಲಿಸರ ಜೊತೆಗೆ ಸಹಕರಿಸಿದರೆ ಸಹಕಾರಿಯಾಗುತ್ತೆ.
ಯಾರಿಗಾದರೂ ಅಪರಿಚಿತರು ಕಂಡಾಗ ಅನುಮಾನ ಬಂದರೆ ಕೂಡಲೆ ಹತ್ತಿರದ ಪೊಲಿಸ್ ಠಾಣೆಗೆ ತಿಳಿಸುವಂತೆ ಮೂಡಿಗೆರೆ ಪಿ ಎಸ್ ಐ ರವಿಯವರು ತಿಳಿಸಿದ್ದಾರೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author