ಸ್ವರ್ಣ ಸಂಸ್ಥೆ ಮತ್ತು ಕಲಾಕೃಪಾಸನ್ನಿಧಿ ಕಲಾವಿದರಿಗೆ &ಕೂಲಿ ಕಾರ್ಮಿಕರ ಮಕ್ಕಳಿಗೆ ವತಿಯಿಂದ ಆಹಾರದ ಕಿಟ್ ವಿತರಣೆ #avintvcom
1 min readದೈಹಿಕವಾಗಿ ಸದೃಡವಾಗಿದ್ದರೆ ಎಲ್ಲ ಕಾರ್ಯವನ್ನು ಸಮಾಜಮುಖಿಯಾಗಿ ಉತ್ತಮ ರೀತಿಯಲ್ಲಿ ಮಾಡಬಹುದು.ಕೋವಿಡ್ ಸಮಯದಲ್ಲಿ ಮಕ್ಕಳ ಆರೋಗ್ಯ ಕಾಪಾಡುವುದು ಬಹಳ ಕಷ್ಟದಾಯಕ.ಅಲದೇ ಮೂರನೆ ಅಲೆಯು ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ ಎಂದು ಹೇಳಲಾಗುತ್ತದೆ ಅದಕ್ಕಾಗಿ ಎಲ್ಲರೂ ಉತ್ತಮ ಆಹಾರ ಸೇವಿಸಿ ಸರಕಾರದ ನಿಯಮಗಳನ್ನು ಪಾಲಿಸಲು ಸ್ಬರ್ಣ ಗ್ರುಫ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ವಿ.ಎಸ್.ವಿ.ಪ್ರಸಾದ ಹೇಳಿದರು.
ಅವರು ಹುಬ್ಬಳ್ಳಿಯ ಸ್ವರ್ಣ ಸಂಸ್ಥೆ ಮತ್ತು ಕಲಾಕೃಪಾಸನ್ನಿಧಿ ಸಮನ್ವಯ ಕಲಾ ಕೇಂದ್ರ ಹುಬ್ಬಳ್ಳಿ ಇವರ ವತಿಯಿಂದ ಬಾಪೂಜಿನಗರದ ಕೃಪಾಸನ್ನಿಧಿಯ ಬಾಲ ಕಲಾವಿದರಿಗೆ ಮತ್ತು ವಿವಿಧ ಬಡಾವಣೆಯ ಎಲ್ಲ ಕೂಲಿ ಕಾರ್ಮಿಕರ ಮಕ್ಕಳಿಗೆ ವಿಶ್ವ ಯೋಗ ದಿನಾಚರಣೆಯ ಅಂಣಗವಾಗಿ ಆಹಾರದ ಕಿಟ್ ವಿತರಣೆ ಮಾಡಿ ಮಾತನಾಡಿ ಕಲಾವಿದರ ಬದುಕು ಹೇಳತಿರದು, ಅವರು ನಮ್ಮ , ಸಂಸ್ಕೃತಿಗಳ ರಕ್ಷಕರು ಎಂದು ಹೇಳಿದರು.
ಮಾರ್ತಾಂಡಪ್ಪ ಎಮ್ ಕತ್ತಿ ಮಾತನಾಡಿ ಸ್ವರ್ಣ ಸಂಸ್ಥೆಯ ನಿರ್ದೇಶಕರಾದ ಡಾ.ಎಸ್.ವಿ.ಎಸ್.ಪ್ರಸಾದ ಅವರ ಕಾರ್ಯ ಮಾನವೀಯತೆಯ ಹಿನ್ನೆಲೆಯುಳ್ಳದ್ದು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಪದ್ಮಾ ಕೊಡಗು ಕಾರ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಕೃಷ್ಣಾ ಪಾಸ್ತೆ, ಯಲ್ಲಪ್ಪಾ ಬಿಜಾಪೂರ, ಚಿದಾನಂದ ನಿಲ್ಲಣ್ಣವರ, ಪ್ರಕಾಶ ತಿಗಡಿ, ದೇವೆಂದ್ರಪ್ಪ ಪಾಟೀಲ, ಪರುಶುರಾಮ ಪಾಸ್ತೆ, ಪ್ರಶಾಂತ ಬೆಳಮಕರ, ಮೋಹನ ಬಡಿಗೇರ, ಶೀಲಾ ,ಚೈತ್ರಾ ಮುಂತಾದವರು ಇದ್ದರು.
ಮಾರುತಿ ಗುಡಿ ಸಭಾಭವನ,ಗುರುದೇವ ನಗರ
ಬಾಪೂಜಿನಗರ
ರಾಜನಗರ, ಹುಬ್ಬಳ್ಳಿಯ ಮಕ್ಕಳಿಗೆ ಆಹಾರದ ಕಿಟ್ ವಿತರಿಸಲಾಯಿತು.