ಕರೋನಾ ಸೋಂಕಿತರ ಕೇಂದ್ರಕ್ಕೆ ಲಸಿಕಾ ಕೇಂದ್ರಕ್ಕೆ, ವೈದ್ಯರಿಗೆ ಆಹಾರ ಪ್ಯಾಕೆಟ್ಗಳನ್ನುವಿತರಿಸಲಾಯಿತು. #avintvcom
1 min read
*ಮುಂದುವರಿದ ಸಹಾಯ ಹಸ್ತ*
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು.
ದಿನಾಂಕ 14.06.2021 ರಂದು ಜಿಲ್ಲಾ ಸಂಸ್ಥೆ ವತಿಯಿಂದ ಮಾಸ್ಕ್ ಅಭಿಯಾನ ಮುಂದುವರೆದು ಇಂದು ನಗರದ ಕೂಲಿ ಕಾರ್ಮಿಕರಿಗೆ, ಕರ್ತವ್ಯನಿರತ ಪೊಲೀಸ್ ಇಲಾಖಾ ಸಿಬ್ಬಂದಿಗಳಿಗೆ, ಹೋಂಗಾರ್ಡ್ ಸಿಬ್ಬಂದಿಗಳಿಗೆ, ತಳ್ಳುವ ಗಾಡಿಯ ವ್ಯಾಪಾರಸ್ಥರಿಗೆ, ಛಾಯಾಗ್ರಾಹಕರ ಸಂಘಕ್ಕೆ, ಮತ್ತಿತರರಿಗೆ ಉತ್ತಮ ಗುಣಮಟ್ಟದ N-95 ಮಾಸ್ಕ್ ಗಳನು ವಿತರಿಸಲಾಯಿತು.
ಮೌಂಟನ್ ವ್ಯೂ 1980-81 ಬ್ಯಾಚ್ ಶಾಲೆಯ ಹಳೆಯ ವಿದ್ಯಾರ್ಥಿಗಳು ಮಾಸ್ಕ್ ಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ ಇವರಿಗೆ ಜಿಲ್ಲಾ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.
ಈ ಕಾರ್ಯದಲ್ಲಿ ಜಿಲ್ಲಾ ಕಾರ್ಯದರ್ಶಿ ಶ್ರೀ ಪಣಿರಾಜ್, ಜಿಲ್ಲಾ ಜಂಟಿ ಕಾರ್ಯದರ್ಶಿಗಳು ಶ್ರೀ ನೀಲಕಂಠ ಚಾರ್, ಜಿಲ್ಲಾ ಸ್ಥಾನಿಕ ಆಯುಕ್ತರು ಯುಎಸ್ ಪ್ರಕಾಶ್, ರಾಘವೇಂದ್ರ, ಸಂಘಟಕರು ಗಳಾದ ಕಿರಣ್ ಕುಮಾರ್ ,ನವೀನ್ ಕುಮಾರ್, ಗೈಡ್ ಕ್ಯಾಪ್ಟನ್ ಸುಪ್ರಿಯಾ ರವರು ಹಾಜರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.