ಕರೋನಾ ಸೋಂಕಿತರ ಕೇಂದ್ರಕ್ಕೆ ಲಸಿಕಾ ಕೇಂದ್ರಕ್ಕೆ, ವೈದ್ಯರಿಗೆ ಆಹಾರ ಪ್ಯಾಕೆಟ್ ವಿತರಿಸಲಾಯಿತು. #avintvcom
1 min read
ಮುಂದುವರಿದ ಸಹಾಯ ಹಸ್ತ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು.
ಇಂದು ಜಿಲ್ಲಾ ಕರೋನಾ ಸೋಂಕಿತರ ಕೇಂದ್ರಕ್ಕೆ ಮತ್ತು ಜಿಲ್ಲಾ ಲಸಿಕಾ ಕೇಂದ್ರಕ್ಕೆ, ವೈದ್ಯರಿಗೆ ಆರೋಗ್ಯ ಕಾರ್ಯಕರ್ತರಿಗೆ,ಜಿಲ್ಲಾ ಸಂಸ್ಥೆ ವತಿಯಿಂದ ಉತ್ತಮ ಗುಣಮಟ್ಟದ ಆಹಾರ ಪ್ಯಾಕೆಟ್ಗಳನ್ನು
ವಿತರಿಸಲಾಯಿತು.
5ನೇ ದಿನದ ಆಹಾರ ವ್ಯವಸ್ಥೆಯನ್ನು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ದೇವಾಂಗ ಸಂಘ ಚಿಕ್ಕಮಗಳೂರು. ರವರು ಮಾಡಿಕೊಟ್ಟಿರುತ್ತಾರೆ, ಇವರಿಗೆ ಜಿಲ್ಲಾ ಸಂಸ್ಥೆ ವತಿಯಿಂದ ಧನ್ಯವಾದಗಳು.
ಈ ಕಾರ್ಯದಲ್ಲಿ ,ಜಿಲ್ಲಾ ಕಾರ್ಯದರ್ಶಿ ಶ್ರೀ ಪಣಿರಾಜ್ , ಜಿಲ್ಲಾ ಸಹಾಯಕ ಆಯುಕ್ತರಾದ ಡಾಕ್ಟರ್ ಶ್ರೀನಿವಾಸ್ ,ಜಿಲ್ಲಾ ಸಂಘಟಕರು, ಕಿರಣ್ ಕುಮಾರ್. ನವೀನ್ ಕುಮಾರ್ , ಸ್ಥಾನಿಕ ಆಯುಕ್ತರಾದ ಶ್ರೀ ಯು ಎಸ್ ಪ್ರಕಾಶ್ , ರಾಘವೇಂದ್ರ .ಸೋಂಕಿತ ಕೇಂದ್ರದ ವ್ಯವಸ್ಥಾಪಕರಾದ ಕಿರಣ್, ವೈದ್ಯ ಸಿಬ್ಬಂದಿಗಳು, ನರ್ಸ್ ಗಳು ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.