ಬಣಕಲ್ ನಲ್ಲಿ ರಾತ್ರಿ 12.ಗಂಟೆಗೆ *ಬೆಂಕಿ ಅವಘಡ. ಮಸೀದಿ ಮೈಕ್ ಬಳಸಿದ ಆರೀಫ಼್*#avintvcom
1 min read
*ಬೆಂಕಿ ಅವಘಡ. ಮಸೀದಿ ಮೈಕ್ ಬಳಸಿದ ಆರೀಫ಼್*
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ನಲ್ಲಿ ರಾತ್ರಿ 12.ಗಂಟೆಗೆ ಇ ಬೆಂಕಿ ಅವಘಡ ಸಂಭವಿಸಿದೆ.
ಒಂದು ಬೇಕರಿ, ಚಪ್ಪಲಿ ಅಂಗಡಿ, ಮೊಬೈಲ್ ಅಂಗಡಿ,ಕಟಿಂಗ್ ಶಾಪ್ ಸಂಪೂರ್ಣ ವಾಗಿ ಬಸ್ಮವಾಗಿವೆ.
ಮತ್ತಿಕಟ್ಟೆ ಮಹೇಶ್ ರವರಿಗೆ ಸೇರಿದ ಕಟ್ಟಡ ವಾಗಿರುತ್ತೆ.
ಬೆಂಕಿಯ ಅವಘಡಕ್ಕೆ ನಿಕರವಾದ ಕಾರಣ ತಿಳಿದು ಬಂದಿಲ್ಲ.
ಸುದ್ದಿ ತಿಳಿದ ಸಮಾಜ ಸೇವಕ ಆರಿಫ಼್ ಪಕ್ಕದಲ್ಲೆ ಇದ್ದ ಮಸೀದಿಯ ಬಾಗಿಲು ತೆಗೆದು ಮೈಕಿನಲ್ಲಿ ಪ್ರಸಾರ ಮಾಡಿದಾಗ ಸುತ್ತಮುತ್ತಲಿನ ಜನ ಸೇರಿದರು.
ಅಗ್ನಿಶಾಮಕ ದಳ ಮತ್ತು ಪೊಲೀಸರ ಸಹಾಯದಿಂದ ಬೆಂಕಿಯನ್ನು ನಂದಿಸಲಾಯಿತು.
ಲಕ್ಷಾಂತರ ರೂಗಳ ವಸ್ತುಗಳು ಸುಟ್ಟು ಕರಕಲಾಗಿದೆ.
ಸಮಯ ಪ್ರಜ್ಞೆ ಅರಿತು ಮಸೀದಿಯ ಮೈಕ್ ಬಳಸಿ ದೊಡ್ಡದಾಗಿ ಆಗುವ ಅನಾಹುತವನ್ನು ತಪ್ಪಿಸಿದ ಆರೀಫ಼್ ರವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಬೇಕರಿ ಯಲ್ಲಿದ್ದ ಗ್ಯಾಸ್ ಹಂಡೆ ಸಿಡಿದಾಗ ಅ ಸಂದೇಶವನ್ನು ಮೊದಲೆ ಮೈಕ್ ಮೂಲಕ ತಿಳಿಸಿದ್ದರಿಂದ ಹೆಚ್ಚಿನ ಅನಾಹುತಗಳು ತಪ್ಪಿದಂತಾಗಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.