ರೇವಣಕರ್ ಹಾಗೂ ತಂಡ! ಜನರ ಸಂಕಷ್ಟಕ್ಕೆ ಉಪಹಾರ ಹಾಗೂ ಆಹಾರ ಕಿಟ್ ವಿತರಣೆ #avintvcom
1 min read
ಹುಬ್ಬಳ್ಳಿ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ಸುನೀಲ್ ರೇವಣಕರ್ ಹಾಗೂ ತಂಡ!
ಹುಬ್ಬಳ್ಳಿ:- ಕೊರೊನಾ ಸಂಕಷ್ಟದಲ್ಲಿ ಅದೆಷ್ಟೋ ಜನರು ಹಸಿವಿನಿಂದ ಬಳಲುತ್ತಿರುವುದುನ್ನು ಕಂಡ ಹುಬ್ಬಳ್ಳಿ ಯುವಕರ ತಂಡವೊಂದು ನಿರಂತರವಾಗಿ ಉಪಹಾರ ಹಾಗೂ ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ…
ಹೌದು….. ಕೊರೊನಾ ಜಿಲ್ಲೆಯಲ್ಲಿ ಕೊರೊನಾ ಹಾವಳಿ ಹೆಚ್ಚುತ್ತಿದ್ದು, ಸಂಪೂರ್ಣವಾಗಿ ಜಿಲ್ಲಾಡಳಿತ ಲಾಕ್ ಡೌನ್ ಮಾಡಿದ್ದು ಅದೆಷ್ಟೋ ಜನರು ಅಗತ್ಯ ದಿನಸಿ ವಸ್ತುಗಳನ್ನು ಖರೀದಿ ಮಾಡಲು ಸಾಧ್ಯವಾಗದೇ ಹಾಗೂ ತಮ್ಮ ಸಂಕಷ್ಟವನ್ನು ಹೇಳಲಾಗದೇ ಕಷ್ಟ ಅನುಭವಿಸುತ್ತಿರುವವರಿಗೆ, ನವನಗರದ ನಿವಾಸಿ ಸುನೀಲ್ ರೇವಣಕರ್” ಹಾಗೂ ಯುವಕರ ತಂಡವು ನಿರಂತರವಾಗಿ ಅವರಿಗೆ ಅಕ್ಕಿ,ಬೆಳೆ,ಸಕ್ಕರೆ, ಎಣ್ಣಿ, ರವಾ,ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳನ್ನು ನೀಡಿ ಅವರ ಹಸಿವು ನೀಗಿಸುವ ಕೆಲಸ ಮಾಡುತ್ತಿದೇ ಇನ್ನೂ ಅಷ್ಟೇ ಅಲ್ಲದೆ ಕೊರೊನಾ ತಡೆಗಟ್ಟಲು ತಮ್ಮ ಜೀವವನ್ನು ಪಣಕಿಟ್ಟು ಹೋರಾಡುತ್ತಿರುವ ಪೋಲಿಸ್ ಹಾಗೂ ಪೌರ ಕಾರ್ಮಿಕರಿಗೆ ದಿನನಿತ್ಯ ಉಪಹಾರ ನೀಡುವ ಮಹತ್ವದ ಕಾರ್ಯ ಮಾಡುತ್ತಿದೆ..
ಬೈಟ್:- ಸುನಿಲ್ ರೇವಣಕರ್( ಆಹಾರ ಕಿಟ್ ವಿತರಣೆ ಮಾಡಿದವರು)ವರದಿ.ಸುರೇಶ್ ಜಾದವ್ ಅವಿನ್ ಟಿವಿಯ ಹುಬ್ಬಳ್ಳಿ