ಎಟಿಎಮ್ ಗೆ ಹಣ ತರಲು ಹೋದ ಯುವಕನಿಗೆ ಲಾಠಿ ಬೀಸಿದ ಪಿಎಸ್ಐ- ಯುವಕನ ಸ್ಥಿತಿ ಗಂಭೀರ#avintvcom
1 min read
ಎಟಿಎಮ್ ಗೆ ಹಣ ತರಲು ಹೋದ ಯುವಕನಿಗೆ ಲಾಠಿ ಬೀಸಿದ ಪಿಎಸ್ಐ- ಯುವಕನ ಸ್ಥಿತಿ ಗಂಭೀರ
ಹುಬ್ಬಳ್ಳಿ- ಅಗತ್ಯ ವಸ್ತುಗಳ ಖರೀದಿಗೆ ಎ.ಟಿಎಮ್ ಗೆ ಹಣ ತರಲು ಹೋದ ಯುವಕನಿಗೆ, ಹಳೇಹುಬ್ಬಳ್ಳಿ ಪಿಎಸ್ ಐ ಲಾಠಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಯುವಕನ ಕುಟುಂಬಸ್ಥರು ಗಂಭೀರವಾಗಿ ಆರೋಪ ಮಾಡಿದ್ದಾರೆ.
ಹೌದು,,, ಕೊರೊನಾ ತಡೆಗಟ್ಟಲು ರಾಜ್ಯ ಸರ್ಕಾರ ಪೊಲೀಸ್ ಇಲಾಖೆಗೆ ಅನಗತ್ಯ ಓಡಾಡುವ ಸಾರ್ವಜನಿಕರಿಗೆ ದಂಡ ಹಾಗೂ ತಿಳಿ ಹೇಳಬೇಕು ಎಂದು ಆದೇಶ ಮಾಡಿದೆ. ಆದರೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಸುಖಾನಂದ ಶಿಂಧೆ ಹಳೆ ಹುಬ್ಬಳ್ಳಿ ನಿವಾಸಿ ರೆಹಮುತ್ ಕಾರತಗರ ಎಂಬಾತನಿಗೆ ಬೈಕ್ ನಿಲ್ಲಿಸಲಿಲ್ಲಾ ಎಂದು, ಲಾಠಿಯಿಂದ ಹಿಗ್ಗಾ ಮುಗ್ಗಾ ಥಳಿಸಿದ ಪರಿಣಾಮ, ಯುವಕ ತೀವ್ರವಾದ ರಕ್ತಸ್ರಾವವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಸಂಬಂಧಿಕರು ಪಿಎಸ್ಐ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೈಟ್- ನಿಜಾರಮ್ಮುದ್ ಕಾರತಗರ (ಹಲ್ಲೇಗೊಳಗಾದ ಯುವಕನ ಸಹೋದರ)
ಇನ್ನು ಪೊಲೀಸ್ ಕಮೀಷನರ್ ಸಾಕಷ್ಟು ಬಾರಿ ಯಾವುದೇ ಕಾರಣಕ್ಕೂ ಹೊಡೆಯಬಾರದೆಂದು ಹೇಳಿಕೆ ನೀಡಿದ್ದರು ಸಹ, ಪಿಎಸ್ಐ, ಲಾಠಿಯಿಂದ ಹಲ್ಲೆ ಮಾಡಿದ್ದಾರೆ. ಇನ್ನು ಘಟನೆಯಲ್ಲಿ ಯುವಕನಿಗೆ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದ ಪರಿಣಾಮ, ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಪಿಎಸ್ಐ ಸುಖಾನಂದ ಸಿಂಧೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಾರ್ವಜನಿಕರ ಮೇಲೆ ದಿನದಿಂದ ದಿನಕ್ಕೆ ದರ್ಪ ಹೆಚ್ಚುತ್ತಿದೆ ಎಂದು ಸ್ಥಳೀಯರು ಗಂಭೀರವಾಗಿ ಆರೋಪ ಮಾಡಿ, ಪಿಎಸ್ಐ ವಿರುದ್ಧ ಪ್ರಕರಣ ದಾಖಲು ಮಾಡುವುದಾಗಿ ತಿಳಿಸಿದ್ದಾರೆ.
ಬೈಟ್- ನಜೀರ್ ಹೊನ್ನಾಳ, ಸ್ಥಳೀಯರು
ಸಾರ್ವಜನಿಕರಿಗೆ ತಿಳಿ ಹೇಳುವವರೆ ಈ ರೀತಿ ಮಾಡಿದರೆ ಹೇಗೆ? ಸರ್ಕಾರ ಜನರ ಮೇಲೆ ಯಾವುದೇ ರೀತಿ ಲಾಠಿ ಬೀಸಬಾರದೆಂದು ಆದೇಶ ಇದೆ. ಆದ್ರು ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದೆ ಈ ಪಿಎಸ್ಐ. ಹೀಗೆ ಮಾಡುವುದು ಸರಿಯೇ ಎಂದು ಸಾರ್ವಜನಿಕರಲ್ಲಿ ಪ್ರಶ್ನೆಯಾಗಿದೆ. ವರದಿ.ಸುರೇಶ್ ಜಾದವ್ ಅವಿನ್ ಟಿವಿಯ ಹುಬ್ಬಳ್ಳಿ