AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಮಗನಿಂದ ಪಾಶ್ವವಾಯು ಪೀಡಿತ ತಂದೆಯ ಮೇಲೆ ಹಲ್ಲೆ*#avintvcom

1 min read
Featured Video Play Icon

*ಮಗನಿಂದ ಪಾಶ್ವವಾಯು ಪೀಡಿತ ತಂದೆಯ ಮೇಲೆ ಹಲ್ಲೆ*

:ಪಾಶ್ವವಾಯು ಪೀಡಿತನಾಗಿ ಹಾಸಿಗೆ ಹಿಡಿದಿದ್ದ ತಂದೆಯ ಮೇಲೆ ಮಗನೇ ಕೊಡಲಿಯಿಂದ ಹಲ್ಲೆ ಮಾಡಿ ತಂದೆ ಗಂಭೀರವಾಗಿ ಗಾಯಗೊಂಡ ಘಟನೆ

ಮೂಡಿಗೆರೆ ತಾಲ್ಲೂಕಿನ
ಕೊಟ್ಟಿಗೆಹಾರ ಸಮೀಪದ ಚನ್ನಡ್ಲಿನಲ್ಲಿ ನಡೆದಿದೆ.
ಪಾಶ್ವವಾಯು ಪೀಡಿತನಾಗಿ ಹಾಸಿಗೆ ಹಿಡಿದಿದ್ದ ಸುಂದರ್ ಹಾಗೂ ಮಗ ನಿಖೇಶ್ ನಡುವೆ ಬುಧವಾರ ಹಣದ ವಿಚಾರವಾಗಿ ಜಗಳವಾಗಿದ್ದು ಜಗಳ ವಿಕೋಪಕ್ಕೆ ಹೋಗಿ ಮಗ ನಿಖೇಶ್ ತಂದೆ ಸುಂದರ್ ಅವರ ತಲೆಗೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ಸುಂದರ್ ಅವರನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಮಗ ನಿಖೇಶ್ ಬಾಳೂರು ಠಾಣೆಯಲ್ಲಿ ಪೋಲಿಸರಿಗೆ ಶರಣಾಗಿದೆ.
ಅಂಗವಿಕಲ ಹಾಗೂ ಬುದ್ದಿಮಾಂದ್ಯ ಇಬ್ಬರು ಮಕ್ಕಳು ಹಾಗೂ ಪತ್ನಿಯೊಂದಿಗೆ ವಾಸವಾಗಿದ್ದ ಸುಂದರ್ ಅವರು ಕಳೆದ ವರ್ಷ ಪಾಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದರು.
ಈ ಸಂದರ್ಭದಲ್ಲಿ ಇವರ ಚಿಕಿತ್ಸೆ ಗೆ ದಾನಿಗಳು ನೆರವಾಗಿದ್ದು ಸಾವಿರಾರು ರೂ ಸಂಗ್ರಹವಾಗಿತ್ತು. ಚಿಕಿತ್ಸೆಯೂ ನಡೆಯುತ್ತಿತ್ತು. ಬೆಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ನಿಖೇಶ್ ದಾನಿಗಳ ನೀಡಿದ ಹಣದ ವಿಷಯವಾಗಿ ಆಗಾಗ ಜಗಳವಾಡುತ್ತಿದ್ದ . ಬುಧವಾರ ಈ ವಿಷಯವಾಗಿ ಜಗಳವಾಗಿದ್ದು ನಿಖೇಶ್ ತಂದೆ ಸುಂದರ್ ಅವರ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿ ಪೋಲಿಸರಿಗೆ ಶರಣಾಗಿದ್ದಾನೆ. ಸುಂದರ್ ಅವರ ಸ್ಥಿತಿ ಗಂಭೀರವಾಗಿದೆ.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Navachaitanya Old Age Home

Career | job

About Author