AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮನವಿ. ಸ್ವಾಮಿ ನನ್ನ ಮನೆಗೂ ನನ್ನ ತೋಟ ಇರುವ ಜಾಗಕ್ಕೂ ನಡುವಿನ ಅಂತರ 7.ಕಿಲೋಮೀಟರ್ #avintvcom

1 min read
Featured Video Play Icon

https://youtu.be/9PEQmk1fI6s

ಮನವಿ.

ಮಾನ್ಯ ಜಿಲ್ಲಾಧಿಕಾರಿಗಳು.
ಚಿಕ್ಕಮಗಳೂರು.

ಸ್ವಾಮಿ ನನ್ನ ಮನೆಗೂ ನನ್ನ ತೋಟ ಇರುವ ಜಾಗಕ್ಕೂ ನಡುವಿನ ಅಂತರ 7.ಕಿಲೋಮೀಟರ್ ಇದೆ,
ನಿಮ್ಮ ಆದೇಶದ ಪ್ರಕಾರ ನಾನು ತೋಟಕ್ಕೆ ವಾಹನದಲ್ಲಿ ಹೋಗುವಂತಿಲ್ಲ.
ಮೊನ್ನೆ ಮೊದಲ ದಿನ (ನಿಮ್ಮ ಆದೇಶದ) ಹೋದಾಗ ನಿಮ್ಮ ಮಾರ್ಷಲ್ ಗಳು ಅಡ್ಡ ಹಾಕಿ ಪಾಣಿ ತೋರಿಸಿ ಇಲ್ಲ ದಂಡ ಕಟ್ಟಿ ಇಲ್ಲ ವಾಹನ ಬಿಟ್ಟು ಹೋಗಿ ಅಂದ್ರು,
ಅಲ್ಲ ಸ್ವಾಮಿ ತೋಟಕ್ಕೆ ಹೋಗೋ ರೈತ ಪಾಣಿ,ಜೇಬಲ್ಲಿ ಹಣ ಇಟ್ಕೊಂಡು ಹೋಗ್ತಾನ?ಅಂತ ಕೇಳಿದ್ದಕ್ಕೆ ನಮಗ್ಗೊತ್ತಿಲ್ಲ ನಿಮಗೆ DC order ಗೊತ್ತಿಲ್ವಾ?? ಅಂದರು.
ಸರಿ ಅಂತ ದಮ್ಮಯ್ಯ ದಕ್ಕಯ್ಯ ಹೊಡೆದು ವಾಪಸ್ ಬಂದಾಯ್ತು,
ಇವಾಗ ನೋಡಿದ್ರೆ ಮತ್ತೆ 28ರ ವರೆಗೆ ಕಠಿಣ lockdownಮುಂದುವರಿಕೆ. ,ಸ್ವಾಮಿ ನಿಮ್ಮ ಆದೇಶದಲ್ಲಿ ತಪ್ಪಿಲ್ಲ but.ನಾವು ಪೇಟೆಯಲ್ಲಿ ಓಡಾಡಿದರೆ ವಾಹನ ಸೀಜ್ ಮಾಡಿ,ದಂಡ ಹಾಕಿ,ನಾನು ಮನೆಯಿಂದ ಹಳ್ಳಿಯಲ್ಲಿ ತೋಟಕ್ಕೂ ಬೈಕ್ ನಲ್ಲಿ ಒಬ್ಬನೇ ಹೋಗೋ ಹಾಗಿಲ್ಲಾಂದ್ರೆ ಹೇಗೆ ಸ್ವಾಮಿ?,
ನಮ್ಮ ಮಲೆನಾಡೇ ಹಾಗಿದೆ ಒಂದುಮನೆಯಿಂದ ಒಂದು ಮನೆಗೇ 2,,,,,3,,,,,4ಕಿಲೋಮೀಟರ್ ಗಳಾಗುತ್ತೆ.
ಸ್ವಾಮಿ ನಿಮ್ಮ ಈಗಿನ ಆದೇಶದ ಪ್ರಕಾರ home deliver ಮಾಡಬಹುದು ಅಂದರೆ, ನಿಮ್ಮ Timeings ಪ್ರಕಾರ ಬೆಳಿಗ್ಗೆ 6ರಿಂದ 10 ಗಂಟೆ ಒಳಗೆ ಅಂದ್ರೆ ಅಂಗಡಿಯವನಿಗೆ ಹಳ್ಳಿ ಬೈರಾಪುರದಿಂದ order ಬಂದರೆ ಆ ಸಮಯದ ಒಳಗೆ ಹೋಗಿ ಬರಲು ಸಾದ್ಯವೇ??,.
ಅಕಸ್ಮಾತ್ ಹೋಗಿಬಂದರೂ ಆ ಅಂಗಡಿಯವನು delivery charge ಏಷ್ಟು ಮಾಡಬೇಕು,,.
ಈ ತರ ಅವೈಜ್ಞಾನಿಕ ಆದೇಶಗಳಾಗಬಾರದೂ ಅಂತಾನೆ ಪ್ರದಾನಿಗಳು ಜಿಲ್ಲಾಧಿಕಾರಿಗಳಿಗೆ ಸ್ಥಳೀಯ ಪರಿಸರ ತಿಳಿದಿರುತ್ತೆ ಅಂತ ಜಿಲ್ಲಾಧಿಕಾರಿಗೆ ಅಧಿಕಾರ ಕೊಟ್ಟಿದ್ದೇ ಹೊರತು ಇಂತಾ ಜಿಲ್ಲೆಯ ವಾತಾವರಣ ಗೊತ್ತಿಲ್ಲದೆ AC Room ನಲ್ಲಿ ಕೂತು ನಗರ ಪ್ರದೇಶಕ್ಕೆ ಅನ್ವಯ ವಾಗುವ ಆದೇಶ ಹೋರಡಿಸುವದಕ್ಕಲ್ಲ.
ನೆನಪಿರಲಿ ಜಿಲ್ಲಾಧಿಕಾರಿಗಳೇ ಮಲೆನಾಡಿನಲ್ಲಿ ಇನ್ನೇನು ಮಳೆಗಾಲ ಶುರು ವಾಗುವುದರಲ್ಲಿದೇ,
ಶುರವಾದ ಮೇಲೆ ಮಳೆ ಬಿಡುವುದೇ ಅಕ್ಟೋಬರ್ನಲ್ಲಿ,
ಮಳೆ ಹಿಡಿಯೋ ಮುಂಚೆ ಮಲೆನಾಡಿಗರು ಕೆಲವು ಕೆಲಸಗಳನ್ನೂಮಾಡಿಕೊಳ್ಳಲೇಬೇಕಿದೆ.ಅದೂ ಪೇಟೆ ಓಡಾಟದಿಂದಲ್ಲ, ಹಳ್ಳಿಯಲ್ಲಿ ,
ಸರಿಯಾಗಿ ಮಲೆನಾಡ ಜಿಲ್ಲೆಯನ್ನು ಅರ್ಥ ಮಾಡಿಕೊಂಡು ಮುಂದಿನ ಆದೇಶ ಹೊರಡಿಸಿ ಸ್ವಾಮಿ,..
ಇನ್ನೂ 4ದಿನ ಕಾಯ್ತೀವಿ ಬಿಡಿ..ಹಾಗೇ ನಿಮ್ಮ ಮಾರ್ಷಲ್ ಗಳಿಗೂ ಹೇಳಿ ಹಳ್ಳಿ ತಿರುಗಿ ಕೂಲಿ ಕೆಲಸಗಾರರಿಗೆ ಹೆದರಿಸಿ ದಂಡ ಕಟ್ಟಿಸಿ ಕೊಳ್ಳೋಕ್ಕಿಂತ ಪಟ್ಟಣದ ಗಡಿಯಲ್ಲಿ ನಿಂತು ಅನಾವಶ್ಯಕವಾಗಿ ಪಟ್ಟಣಕ್ಕೆ ಬರೋರಿಗೆ ದಂಡ ಹಾಕಲಿಕ್ಕೆ,
ಯಾಕೆಂದರೇ ಪಟ್ಟಣದಲ್ಲಿ ತಿರುಗೋರಿಗೆ influence ಮೇಲೆ ತಿರುಗುತ್ತಾನೆ
ಇದ್ದಾರೆ.
ಹಳ್ಳಿಗರು ಹೊಟ್ಟೆ ಪಾಡಿಗಾಗಿ,
ಭವಿಷ್ಯಕ್ಕಾಗಿ ಹಳ್ಳಿಯಲ್ಲೇ ತಮ್ಮ ತಮ್ಮ ಜಮೀನು,
ಜಮೀನಿನ ಕೆಲಸಕ್ಕಾಗಿ,ಜಮೀನು ಉಳಸಿಕೊಳ್ಳಲಿಕ್ಕಾಗಿ ಓಡಾಡುತ್ತಿದ್ದಾರೆ ಅಂತ,
ನಿಮ್ಮ ಮಾರ್ಷಲ್ ಗಳಿಗೆ (ಪೋಲೀಸರಲ್ಲ) ಹಳ್ಳಿ ಅನ್ನೋದು ಮೃಷ್ಠಾನ್ನ ಬೋಜನವಾಗಿದೆ,
………………ಇಂತೀ ಮಲೆನಾಡ ನೊಂದ ರೈತ,ರೈತ ಕಾರ್ಮಿಕ,ಕೂಲಿ ಕೆಲಸಗಾರ,

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author