ನಮ್ಮ ಪೊಲೀಸರ ಘನ ಕಾರ್ಯಗಳು ಒಂದೇ, ಎರಡೇ! #avintvcom
1 min read
*ಧನ ಪಿಚಾಚಿ ಪೋಲಿಸರು*
ಠಾಣೆಗೆ ಎಳೆದುಕೊಂಡು ಬಂದು ಒದೆಯುವುದು, ಉಚ್ಚೆ ಕುಡಿಸುವುದು, ದುಡ್ಡು ಕಿತ್ತುಕೊಳ್ಳುವುದು, ಗಾಡಿಯಲ್ಲಿದ್ದ ಚಿನ್ನ ಕದಿಯುವುದು, ರೌಡಿಗಳ ತರಹ ಎತ್ತಾಕಿಕೊಂಡು ಹೋಗಿ ಸುಲಿಗೆ ಮಾಡುವುದು, ಅವಾಚ್ಯವಾಗಿ ಬೈಯುವುದು, ರಾಜಕಾರಣಿಗಳು ಮತ್ತು ಹಣವಂತರ ಪೀಕುದಾನಿಗಳಾಗಿ ಅಮಾಯಕರನ್ನು ಮತ್ತು ಹೋರಾಟಗಾರರನ್ನು ಸುಳ್ಳು ಕೇಸುಗಳಲ್ಲಿ ಫಿಟ್ ಮಾಡಿ ಶೋಷಣೆ ಮಾಡುವುದು;
ನಮ್ಮ ಪೊಲೀಸರ ಘನ ಕಾರ್ಯಗಳು ಒಂದೇ, ಎರಡೇ!
ಇವರು ನಿಜಕ್ಕೂ ಮಾನಸಿಕ ಅಸ್ವಸ್ಥರಾಗಿದ್ದಾರೆ. ಅದೇನು ಕೆಲಸದ ಒತ್ತಡವೋ,
ಅಥವ ನ್ಯಾಯಾನ್ಯಾಯದ ಪರಿಜ್ಞಾನ ಕಳೆದುಕೊಂಡಿರುವ ಮಾನಸಿಕ ಸ್ಥಿತಿಯೋ, ಅಥವ ಧನಪಿಶಾಚಿ ಅಮರಿಕೊಂಡಿದೆಯೋ, ಅಥವ ಆತ್ಮಗೌರವವಿಲ್ಲದ ಮನಸ್ಥಿತಿಯೋ…, ಒಟ್ಟಾರೆಯಾಗಿ ಇಡೀ ಪೊಲೀಸ್ ವ್ಯವಸ್ಥೆಗೆ ವೈರಸ್ ತಗುಲಿದೆ.
ಈ ಸೋಂಕು ಪೀಡಿತರನ್ನು ಒಂದಷ್ಟು ದಿನ ಜನಸಾಮಾನ್ಯರಿಂದ ದೂರ ಇಟ್ಟು, ಚಿಕಿತ್ಸೆ ನೀಡಿ, ಗುಣಪಡಿಸಿ, ಮತ್ತೆ ಕೆಲಸಕ್ಕೆ ನೇಮಿಸಬೇಕಿದೆ.
ಪೊಲೀಸ್ ಇಲಾಖೆಯ ಅಳಿದುಳಿದ ಪ್ರಾಮಾಣಿಕ ಅಧಿಕಾರಿಗಳು ಈಗ ಆಂತರಿಕ ಸಭೆಗಳನ್ನು ಮಾಡಿ ತಮ್ಮ ಇಲಾಖೆಯ ಸುಧಾರಣೆಗೆ ಕ್ರಮ ತೆಗೆದುಕೊಳ್ಳಬೇಕು. ಗ್ಯಾಂಗ್ರಿನ್ ಆಗಿರುವ ಭಾಗವನ್ನು ಕಡಿದು ಎಸೆದರೆ ಮಾತ್ರ ಪ್ರಾಣ ಉಳಿಯುತ್ತದೆ. ಇಲ್ಲವಾದಲ್ಲಿ ಜೀವಕ್ಕೇ ಅಪಾಯ.
ನಾನಂತೂ ನನ್ನ ಇಷ್ಟು ದಿನಗಳ ಹೋರಾಟದ ಜೀವನದಲ್ಲಿ ಒಂದು ಪ್ರಕರಣದಲ್ಲಿಯಾದರೂ ನ್ಯಾಯ ಕೊಡಿಸಿದ ಒಬ್ಬನೇ ಒಬ್ಬ ಪೊಲೀಸನನ್ನು ಕಂಡಿಲ್ಲ.
ಇನ್ನು ಜನಸಾಮಾನ್ಯರ ಪಾಡೇನು?
* ರವಿ ಕೃಷ್ಣಾರೆಡ್ಡಿ
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.