AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕರುಣಾಮಯಿ ಬಾಲಕ 1 ಲಕ್ಷಾ, ಪೌರ ಕಾರ್ಮಿಕರಿಗೆ ಸಹಾಯ ನೀಡಿದ ಬಾಲಕ#avintvcom

1 min read
Featured Video Play Icon

ಸ್ಲಗ್ – ಕರುಣಾಮಯಿ ಬಾಲಕ

ಕಿಲ್ಲರ್ ಕರೋನಾದಿಂದ ಜನಸಾಮಾನ್ಯರಿಗೆ ಅದೆಷ್ಟೋ ಸಮಸ್ಯೆ ಎದುರಾಗಿದೆ.‌ ಅಲ್ದೆ ಕರೋನಾ ನಿಯಂತ್ರಣದಲ್ಲಿ ಮುಂಚೂಣಿ ವಹಿಸಿರೋ ಫ್ರಂಟ್ ಲೈನ್ ವಾರಿಯರ್ಸ್ ಗಳಾದ ಪೌರಕಾರ್ಮಿಕರು ದಿನನಿತ್ಯ ಅನುಭವಿಸುತ್ತಿರೋ ಸಮಸ್ಯೆಗೆ ಇಲ್ಲೊಬ್ಬ ಕರುಣಾಮಯಿ ಬಾಲಕ ತಾನು ಕೂಡಿಟ್ಟ ಹಣದಿಂದ ಸಹಾಯ ಹಸ್ತ ನೀಡಿದ್ದಾನೆ. ಏನ್ ಮಾಡಿದ್ದಾನೆ ಆ ಬಾಲಕ‌ ಅಂತಾ ಹೇಳ್ತೀವಿ ನೋಡಿ……

ವಾ/ಓ- 1 ಹೀಗೆ ಕುಡಿಕೆಯಲ್ಲಿ ತಾನು ಕೂಡಿಟ್ಟ ಹಣವನ್ನೆಲ್ಲ ಕುಡಿಕೆ ಒಡೆದು ಈ ಬಾಲಕ‌ ಅದೇನ್ ಖರೀದಿ ಮಾಡೋಕೆ ತಯಾರಾಗಿದ್ದಾನೆ ಅಂತಾ ಅನ್ಕೊಂಡ್ರಾ ? ಹೌದು ತನ್ನ ಜನ್ಮದಿನದ ಹಿನ್ನೆಲೆ ತಾನೇ ಕೂಡಿಟ್ಟ ಹಣದಿಂದ ಸೈಕಲ್ ಖರೀದಿಸಬೇಕೆಂಬ ಆಸೆ ಹೊತ್ತಿದ್ದ ಈ ಬಾಲಕ ಕಳೆದ ಹಲವು ದಿನಗಳಿಂದ ಕುಡಿಕೆಯಲ್ಲಿ ಕೂಡಿಟ್ಟ ಹಣವನ್ನ ಇದೀಗ ಪೌರಕಾರ್ಮಿಕರ ಸಹಾಯಕ್ಕಾಗಿ ನೀಡಿದ್ದಾನೆ. ಪ್ರತಿ ದಿನ‌ಬೆಳಿಗ್ಗೆ ನಗರ ಪ್ರದೇಶವನ್ನ ಸ್ವಚ್ಚಗೊಳಿಸೋ ಪೌರ ಕಾರ್ಮಿಕರ ಸಂಕಷ್ಟಕ್ಕೆ ಮಿಡಿದಿರುವ ಈ ಬಾಲಕ ಪೌರ ಕಾರ್ಮುಕರಿಗೆ ಮಾಸ್ಕ್, ಹ್ಯಾಂಡ್ ಗ್ಲೌಸ್ ಹಾಗೂ ಸ್ಯಾನಿಟೈಸರ್ ವಿತರಿಸುತ್ತಿದ್ದಾನೆ. ಕಳೆದ ಕೆಲವು ದಿನಗಳ ಹಿಂದೆ ಪೌರ ಕಾರ್ಮಿಕರು ಕೈಯಲ್ಲಿ ಹ್ಯಾಂಡ್ ಗ್ಲೌಸ್ ಇಲ್ಲದೇ, ಸರಿಯಾದ ಮಾಸ್ಕ್ ಧರಿಸದೇ ನಗರ ಸ್ವಚ್ಛತೆಯಲ್ಲಿ ಮುಂದಾಗಿರೋ ದೃಶ್ಯವನ್ನ ಮಾದ್ಯಮದಲ್ಲಿ ವೀಕ್ಷಿಸಿರೋ ಈ ಬಾಲಕ ಪೌರ ಕಾರ್ಮಿಕರಿಗೆ ತಾನು ಕೂಡಿಟ್ಟ ಹಣದಿಂದ ಮಾಸ್ಕ್ ,ಹ್ಯಾಂಡ್ ಗ್ಲೌಸ್, ಹಾಗೂ ಸ್ಯಾನಿಟೈಸರ್ ವಿತರಿಸುವ ನಿಟ್ಟಿನಲ್ಲಿ ಮಾನವೀಯತೆ ಮೆರೆದಿದ್ದಾನೆ.

ವಾ/ಓ- 2 ಪ್ರಮುಖವಾಗಿ ಅದೆಷ್ಟೋ ಜನ ಪರರಿಗೆ 10 ರೂಪಾಯಿ ಖರ್ಚು ಮಾಡೋಕು ಹಿಂದು ಮುಂದು ನೋಡೋ ಇಂತಹ ದಿನಗಳಲ್ಲಿ ತಾನು ಆಸೆಪಟ್ಟಂತೆ ಸೈಕಲ್ ಖರೀದಿಸಲು ಕೂಡಿಟ್ಟ ಹಣವನ್ನೆಲ್ಲ ಪೌರಕಾರ್ಮಿಕರಿಗಾಗಿ ಸಹಾಯ ಮಾಡಲು ಮುಂದಾಗಿರುವ ಈ ಬಾಲಕನ‌ ಹೃದಯವಂತಿಕೆ‌ ನಿಜಕ್ಕೂ ಮೆಚ್ಚುವಂತದ್ದು, ಕೇವಲ ಏಳು ವರ್ಷದವನಾಗಿರೋ ಈತ ಮಾದ್ಯಮಗಳಲ್ಲಿ ಪೌರ ಕಾರ್ಮಿಕರ ಸಮಸ್ಯೆ ಕುರಿತು ವೀಕ್ಷಿಸಿದ ವರದಿಯಿಂದ ಪೌರಕಾರ್ಮಿಕರ ಸಮಸ್ಯೆಗೆ ಮನಮಿಡಿದಿದ್ದಾನೆ. ಸ್ವತ ತಾನೇ ಸ್ವಯಂ‌ಪ್ರೇರಣೆಯಿಂದ ತನ್ನ ತಂದೆಗೆ ತಾನು ಕೂಡಿಟ್ಟ ಹಣವನ್ನ ಮಾಸ್ಕ್, ಹ್ಯಾಂಡ್ ಗ್ಲೌಸ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡುವುದಾಗಿ ತೀಳಿಸಿದ್ದಾನೆ.‌ಅದರಂತೆಯೇ ಈತನ ತಂದೆ ಬಾಲಕನ ಜೊತೆಗೂಡಿ, ಪೌರ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸುವ ಮೂಲಕ ಮಗನ ಸೈಕಲ್ ಆಸೆಯ ಬದಲಾಗಿ ಸಾಮಾಜಿಕ‌ ಕಳಕಳಿಗೆ ಸ್ಪಂದಿಸಿದ್ದಾರೆ.

ವಾ/ಓ- 3 ಒಟ್ಟಾರೆ ಪೌರ ಕಾರ್ಮಿಕರಿಗೆ ಹಿತದೃಷ್ಠಿ ಕಾಪಾಡಬೇಕಾದ ಪಾಲಿಕೆಯ ಅಧಿಕಾರಿಗಳ ಕೆಲಸವನ್ನ ಈ ಬಾಲಕ ಪೌರಕಾರ್ಮಿಕರ ಅನುಭವಿಸುವ ಸಮಸ್ಯೆಯನ್ನರಿತು ತಾನು ಕೂಡಿಟ್ಟ ಹಣವನ್ನ ಈ ರೀತಿ ಸಮಾಜಮುಖಿ ಕಾರ್ಯಕ್ಕೆ ಬಳಸುತ್ತಿರುವುದು ನಿಜಕ್ಕೂ‌ ಆತನ ಹೃದಯವಂತಿಕೆಗೆ ಹಿಡಿದ ಕೈಗನ್ನಡಿಯಾಗಿದೆ. ಅಲ್ಲದೆ ಈ ರೀತಿಯ ಕಾರ್ಯಕ್ಕೆ ಮುಂದಾಗುವ ಮೂಲಕ ಪುಟ್ಟ ಮಕ್ಕಳಿಗೆ ಈ ಬಾಲಕ ಮಾದರಿಯಾಗಿದ್ದಾನೆ.ವರದಿ.ಸುರೇಶ್ ಜಾದವ್ ಅವಿನ್ ಟಿವಿಯ ಹುಬ್ಬಳ್ಳಿ

Career | job

Navachaitanya Old Age Home

About Author