ಲಾಕ್ ಡೌನ್ ನಲ್ಲಿ ಜನರನ್ನು ಸಂಕಷ್ಟಕ್ಕೆ ದೂಡುತ್ತಿರುವ ಮೈಕ್ರೋ ಫೈನಾನ್ಸ್ ಗಳು #avintvcom
1 min read
ಲಾಕ್ ಡೌನ್ ನಲ್ಲಿ ಜನರನ್ನು ಸಂಕಷ್ಟಕ್ಕೆ ದೂಡುತ್ತಿರುವ ಮೈಕ್ರೋ ಫೈನಾನ್ಸ್ ಗಳು
_________
ಕೃಪೆ:ಕೂಡಿಗೆ ಗಣೇಶ
_________
ಕೋವಿಡ್ 19 .ಎರಡನೇ ಅಲ್ಲೆಯ ಲಾಕ್ ಡೌನ್ ನಿಂದ ಉದ್ಯೋಗ ಇಲ್ಲದೆ ಕಂಗೆಟ್ಟಿರುವ ಬಡವರಿಗೆ ಕೆಲವು ಖಾಸಗಿ ಮೈಕ್ರೋ ಫೈನಾನ್ಸ್ ಸೇರಿದಂತೆ ಗ್ರಾಮೀಣ ಕೂಟ .ಎಸ್ ಕೆ ಎಸ್ ಸಂಘ .ಎಲ್ ಎನ್ ಟಿ ಸಂಘ ಬಿ ಎಸ್ ಎಸ್ ಸಂಘ ಬೆಲ್ ಸ್ಟಾರ್ ಸ್ಪಂದನಾ .ಮತ್ತು ಇನ್ನಿತರ ಹಣಕಾಸು ಸಂಸ್ಥೆ ಅವರಿಂದ ತುಂಬಾ ತೊಂದರೆ ಮತ್ತು ಜನರಿಗೆ ಬಡ್ಡಿದರ ಜಾಸ್ತಿಯಾಗುತ್ತದೆ ಎಂದು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದಾರೆ ಆದರೆ ಪ್ರತಿ ವಾರದ ತಿಂಗಳ ಕಂತುಗಳನ್ನು ಕಡ್ಡಾಯವಾಗಿ ಪಾವತಿಸಲೇಬೇಕು ಎಂದು ಮಾಡಿಕೊಂಡಿರುವ ನಿಯಮಗಳಿಂದ ಜನತೆ ಮತ್ತಷ್ಟು ದಿಕ್ಕೆಡುವಂತೆ ಮಾಡಿದೆ .ಆದ್ರೆ ಕೆಲ ಹಣಕಾಸು ಸಂಸ್ಥೆಯವರು ಪ್ರತಿ ದಿನ ಮನೆಗಳಿಗೆ ತೆರಳಿ ನೀವು ಹಣ ಕಟ್ಟದಿದ್ದರೆ ನಿಮಗೆ ಬಡ್ಡಿಗೆ ಬಡ್ಡಿ ಆಗುತ್ತದೆ ನಿಮ್ಮ ಹಣವನ್ನು ಪಾವತಿ ಮಾಡಿ ಎಂದು ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಮಹಿಳೆಯರಿಗೆ ತುಂಬಾ ಕಿರುಕುಳ ಕೊಡುತ್ತಿದ್ದಾರೆ ಆದರೆ 1ಕಡೆ ಕೊರೋನಾ ಹಾವಳಿ ಇನ್ನೊಂದು ಕಡೆ ಮಳೆಯ ಆರ್ಭಟ ಮಳೆ ಇರುವದರಿಂದ ಮನೆಯಿಂದ ಹೊರಗೆ ಯಾವುದೇ ಮಹಿಳೆಯರು ಕೆಲಸಕ್ಕೆ ಹೋಗುತ್ತಿಲ್ಲ ಆದರೆ ಕೆಲ ಖಾಸಗಿ ಹಣಕಾಸು ಸಂಸ್ಥೆಯವರು ಮಹಿಳೆಯರಿಗೆ ನಿಮ್ಮ ಹಳ್ಳಿಯ ಕಡೆ ಜನಗಳಿಗೆ ಯಾವುದೇ ತೊಂದರೆಯಿಲ್ಲ ನೀವು ಹಣವನ್ನು ತೆಗೆದುಕೊಂಡಿದ್ದೀರಾ ನೀವು ಹಣವನ್ನು ಕಟ್ಟಿ ಎಂದು ಪೀಡಿಸುತ್ತಿರುವ ಬಗ್ಗೆ ಹಲವು ದೂರುಗಳು ಕೇಳಿ ಬರುತ್ತಿದೆ ಎಂದು ಸೋಮವಾರಪೇಟೆ ತಾಲ್ಲೂಕು ಕರವೇ ಅಧ್ಯಕ್ಷ ರಾದ ಪ್ರಾನ್ಸಿಸ್ ಡಿಸೋಜಾ ಅವರು ಆಗ್ರಹಿಸಿದ್ದಾರೆ
ಮಗಳ ಮದುವೆ ಹಬ್ಬ ಹರಿದಿನಗಳು ಕೃಷಿ ಚಟುವಟಿಕೆ ಮನೆಯ ಖರ್ಚು ಕುಟುಂಬದ ಆರೋಗ್ಯ ಸಮಸ್ಯೆಗಳನ್ನು ನೀಗಿಸಿಕೊಳ್ಳಲು ಫೈನಾನ್ಸ್ ಕಂಪನಿಗಳಿಂದ ಜನರು ಸಾಲ ಪಡೆದಿದ್ದಾರೆ ಆದರೆ ಕೊರೋನಾ ಎರಡನೇ ಅಲೆಯೂ ಜೋರಾದ ಪರಿಣಾಮ ಸರಕಾರ ಲಾಕ್ ಡೌನ್ ಮಾಡಿರುವುದರಿಂದ ಕೆಲಸವಿಲ್ಲದೆ ಸಾಲದ ಕಂತುಗಳನ್ನು ಪಾವತಿಸಲು ಆಗದೆ ಇರುವ ಜನತೆಗೆ ಸಾಲದ ಕಂತುಗಳನ್ನು ಪಾವತಿಸಬೇಕೆನ್ನುವ ದೂರುಗಳು ಕೇಳಿ ಬರುತ್ತಿವೆ .
ಸೋಮವಾರಪೇಟೆ ತಾಲ್ಲೂಕಿನಲ್ಲಿ ಲೆಕ್ಕಕ್ಕೆ ಸಿಗದ ಹತ್ತಾರು ಫೈನಾನ್ಸ್ ಕಂಪೆನಿಗಳಿದ್ದು ಜನರು ತಮ್ಮ ತುರ್ತು ಸಮಸ್ಯೆಗಳನ್ನು ತೀರಿಸಿಕೊಳ್ಳಲು ಮಹಿಳಾ ಸಂಘ ಜೊತೆಗೆ ಈ ಕಂಪೆನಿಗಳ ನೇರವಾಗಿ ಮೊರೆಹೋಗಿದ್ದು ತುರ್ತು ಸಮಸ್ಯೆಗಳು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಅಧಿಕ ಬಡ್ಡಿಗೆ ಹಣ ಪಡೆದಿದ್ದಾರೆ ಬಹುತೇಕರು ತಮ್ಮ ಸಾಲಕ್ಕೆ ಪ್ರತಿದಿನ ಕಂತಿನ ರೂಪದಲ್ಲಿ ಹಣ ಪಾವತಿಸುತ್ತಿದ್ದಾರೆ ತಾಲ್ಲೂಕಿನಲ್ಲಿ ಇದರ ವ್ಯವಹಾರ ಪ್ರತಿವಾರ ಕೋಟ್ಯಂತರ₹ವಹಿವಾಟು ಫೈನಾನ್ಸ್ ಕಂಪೆನಿ ಮೂಲಕ ನಡೀತಿದೆ ಯಾರೋ ನೀಡಿದ ಸಲಹೆಗೆ ಸಾಲ ಪಡೆದವರು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ ಕೊರೋನಾ ಮೊದಲನೆಯ ಅಲೆಯಲ್ಲಿ ಹಾಕಿದ ನಷ್ಟವನ್ನು ಸರಿಪಡಿಸಿಕೊಳ್ಳಲು ವ್ಯಾಪಾರ ವಹಿವಾಟಿಗೆಂದು ರೈತಾಪಿ ಜನರು ಕೃಷಿ ಚಟುವಟಿಕೆಗೆಂದು ಸಾಲ ಮಾಡಿದವರೆ ಹೆಚ್ಚು ಮೊದಲನೇ ಹಂತ ಮುಗಿಯಿತು ಎಂದು ನಿಟ್ಟುಸಿರು ಬಿಡುವ ವೇಳೆಗೆ ಎರಡನೆಯ ಅಲೆ ಅಪ್ಪಳಿಸಿ ಸರಕಾರ ದಿಢೀರ್ ಲಾಕ್ ಮಾಡಿದ್ದು ಎಲ್ಲವೂ ಸೂಕ್ತವಾಗಿ ಎಲ್ಲರ ನಿರೀಕ್ಷೆಗೆ ಬರಸಿಡಿಲು ಬಡಿದು ಎಲ್ಲವೂ ತಲೆಕೆಳಗೆ ಮಾಡಿತ್ತು ವ್ಯಾಪಾರ ವಹಿವಾಟು ಅದರಲ್ಲೂ ಬೀದಿಬದಿ ವ್ಯಾಪಾರ ಶಬ್ದ ವಾಗಿರೋದು ಆರ್ಥಿಕತೆ ಮೇಲೆ ಬಹುದೊಡ್ಡ ಹೊಡೆತ ಬಿದ್ದಿದೆ ಜನರಿಗೆ ದಿಕ್ಕು ತೋಚದಂತೆ ಪರಿಸ್ಥಿತಿ ನಿರ್ಮಾಣವಾಗಿದೆ ಇತ್ತ ಲೇವಾದೇವಿ ಹಾಗೂ ಮೈಕ್ರೋ ಫೈನಾನ್ಸ್ ಕಂಪನಿಗಳು ಮಹಿಳೆಯರಿಗೆ ಹಣ ಪಾವತಿ ಮಾಡಬೇಕೆಂದು ಒತ್ತಾಯಿಸಿ ಜನರ ಕಷ್ಟಕ್ಕೆ ಕಿವಿಗೊಡದೆ ಬಲವಂತವಾಗಿ ಪೀಡಿಸುತ್ತಿರುವುದು ಜೊತೆಗೆ ಜನರ ಆಕ್ರೋಶ ಮಡುಗಟ್ಟಿದೆ ..
ಸೋಮವಾರಪೇಟೆ ತಾಲೋಕು ಶಿವರಾಮೇಗೌಡ ಬಣದ ತಾಲ್ಲೂಕು ಅಧ್ಯಕ್ಷ ರಾದ ಪ್ರಾನ್ಸಿಸ್ ಡಿಸೋಜಾ ಮಾತನಾಡಿ .
ಕೊರೋನಾ ಮಹಾಮಾರಿ ಎರಡನೆಯ ಅಲೆಯ ಹೆಚ್ಚಾಗುತ್ತಿದ್ದು ಆದರೆ ಕೆಲ ಖಾಸಗಿ ಮೈಕ್ರೋ ಫೈನಾನ್ಸ್ ಸೇರಿದಂತೆ ಎಸ್ ಕೆ ಎಸ್ .ಸಂಘ ಮತ್ತು ಬಿ.ಎಸ್ .ಎಸ್ ಸಂಘ ಮತ್ತು ಗ್ರಾಮೀಣ ಕೂಟ ಮತ್ತು ಬಿ ಎಸ್ ಎಸ್ ಸಂಘ ಎಲ್ ಎನ್ ಟಿ ಸಂಘ ಬೆಲ್ ಸ್ಟಾರ್ ಮತ್ತು ಇನ್ನಿತರ ಹಣಕಾಸು ಸಂಸ್ಥೆಯವರು ಬೆಳ್ಳಂಬೆಳಿಗ್ಗೆ ಸಾಲ ಪಡೆದ ಮಹಿಳೆಯರ ಮನೆಗಳ ಮುಂಭಾಗ ಬಂದು ನೀವು ಸಾಲವನ್ನು ಕಂತಿನ ರೂಪದಲ್ಲಿ ಕಟ್ಟದಿದ್ದಲ್ಲಿ ನಿಮ್ಮ ಆಧಾರ್ ಕಾರ್ಡ್ ಲಾಕ್ ಆಗುತ್ತದೆ ಮತ್ತು ನೀವು ಸಮಯಕ್ಕೆ ಸರಿಯಾಗಿ ಲೋನ್ ಕಟ್ಟದಿದ್ದರೆ ಬಡ್ಡಿಗೆ ಬಡ್ಡಿ ಬೀಳುತ್ತದೆ ಎಂದು ಖಾಸಗಿ ಮೈಕ್ರೋ ಫೈನಾನ್ಸ್ ಗಳು ತುಂಬಾ ಕಿರುಕುಳ ಕೊಡುತ್ತಿದ್ದಾರೆ .
1ಕಡೆ ಕೊರೋನಾ ಮಹಾಮಾರಿ ಇನ್ನೊಂದು ಕಡೆ ಮಳೆ ಹಾಗಾಗಿ ಯಾವುದೇ ಕೆಲಸಗಳು ಇಲ್ಲದೆ ಮನೆಯಲ್ಲಿ ಕುಳಿತಿರುವ ಮಹಿಳೆಯರಿಗೆ ಈಗ ಸಾಲ ಕಟ್ಟುವುದಕ್ಕೆ ತುಂಬಾ ಕಷ್ಟಕರವಾಗುತ್ತಿದೆ ಎಂದು ನಮಗೆ ಹಲವಾರು ಬಾರಿ ಫೋನ್ ಕರೆಗಳು ಬರುತ್ತಿರುತ್ತವೆ ಆದರೆ ಜಿಲ್ಲಾಧಿಕಾರಿಗಳು ಕೂಡಲೇ ಖಾಸಗಿ ಮೈಕ್ರೋ ಫೈನಾನ್ಸ್ ಗಳ ಹಾವಳಿಯನ್ನು 3 ತಿಂಗಳ ಕಾಲ ಯಾರು ಸಾಲ ಪಡೆದ ಮಹಿಳೆಯರಿಗೆ ಕಿರುಕುಳ ನೀಡಿದಲ್ಲಿ ಅಂತಹ ಖಾಸಗಿ ಮೈಕ್ರೋ ಫೈನಾನ್ಸ್ ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭ ಫ್ರಾನ್ಸಿಸ್ ಡಿಸೋಜಾ ಅವರು ಆಗ್ರಹಿಸಿದ್ದಾರೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
http://nisargacare.com/career/