ಕೊಳೂರು ಗ್ರಾಮದ ವ್ಯಕ್ತಿ ಕಾರು ಡಿಕ್ಕಿಯಾಗಿ ಪಾದಚಾರಿ ಸಾವು.#avintvcom
1 min read
ಪಾದಚಾರಿ ಸಾವು
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕಿನ.
ಬೆಟ್ಟಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ
ಕೊಳೂರು ಗ್ರಾಮದ
ವ್ಯಕ್ತಿ ಕಾರು ಡಿಕ್ಕಿಯಾಗಿ ಪಾದಚಾರಿ ಸಾವು.
ಕೋಳೂರು ಗ್ರಾಮದ ಶರತ್(25) ವರ್ಷ ಮೃತ ದುರ್ದೈವಿ.
ಸೋಮವಾರ ಕೆಲಸಕ್ಕೆ ಹೋಗಿ ವಾಪಸ್ಸು ಮನೆಗೆ ತೆರಳುವ ಸಂದರ್ಭದಲ್ಲಿ ಹಿಂದಿನಿಂದ ಯಮನಂತೆ ಎರಗಿದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಶರತ್ ಗೆ ತಾಯಿ ಮತ್ತು ತಂಗಿ ಇದ್ದು ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ದಿಕ್ಕೇ ತೋಚದಂತ ಪರಿಸ್ಥಿತಿಯಲ್ಲಿ ತಾಯಿಯು ಕಣ್ಣೀರಿಡುತ್ತಿದ್ದರೆ,
ಇತ್ತ ಇದ್ದ ಒಬ್ಬ ಅಣ್ಣನನ್ನು ಕಳೆದುಕೊಂಡ ತಂಗಿಯ ಆಕ್ರಂದನ ಮುಗಿಲು ಮುಟ್ಟಿತು.
ಕೂಲಿ ಕೆಲಸ ಮಾಡಿಕೊಂಡೆ ತಮ್ಮ ಕುಟುಂಬವನ್ನು ಮುನ್ನಡೆಸುತ್ತಿದ್ದ ಮೃತ ಶರತ್ ಕುಟುಂಬಕ್ಕೆ ಮುಂದಿನ ಜೀವನ ಹೇಗೆ ಎಂಬುದೇ ಪ್ರಶ್ನೆ ಆಗಿದೆ.
ಏನೇ ಆದರೂ ಜವರಾಯನ ಅಟ್ಟಹಾಸಕ್ಕೆ ಒಂದು ಬಡಪಾಯಿ ಜೀವ ಹೋಗಿದಂತೂ ವಿಪರ್ಯಾಸ.
ಕೃಪೆ ಬಕ್ಕಿ ಮಂಜುನಾಥ್.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.