ನೈಜ ಹೋರಾಟಗಾರರ ವೇದಿಕೆ ನಾಗರಿಕರ ಹೆಣಗಳ ಮೇಲೆ ಸರ್ಕಾರ ನಡೆಸುವವರನ್ನು ಧಿಕ್ಕರಿಸಿ #avintvcom
1 min read
ನೈಜ ಹೋರಾಟಗಾರರ ವೇದಿಕೆ
ಕರ್ನಾಟಕದ ಸಮಸ್ತ ನಾಗರಿಕ ಬಂಧುಗಳಿಗೆ ನನ್ನ ನಮಸ್ಕಾರಗಳು
ನಾಗರಿಕರ ಹೆಣಗಳ ಮೇಲೆ ಸರ್ಕಾರ ನಡೆಸುವವರನ್ನು ಧಿಕ್ಕರಿಸಿ
ಕೊರೋನಾ ಸಾಂಕ್ರಾಮಿಕ ರೋಗದಿಂದ ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಬೆಂಗಳೂರು ಮಹಾನಗರದಲ್ಲಿ ಸರ್ಕಾರ ಹೇಳುವುದಕ್ಕಿಂತಲೂ ವಾಸ್ತವಿಕ ಅಂಶಗಳ ಬೇರೆಯಾಗಿದೆ. ಸರ್ಕಾರದ ಅಂಕಿಅಂಶ, ಮತ್ತು ಮಾಧ್ಯಮದ ವರದಿಗಳನ್ನು ಬದಿಗಿಟ್ಟು ನೋಡುವುದಾದರೆ ಈ ಸಾಂಕ್ರಾಮಿಕ ರೋಗದಿಂದ ಅತ್ಯಂತ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಇದನ್ನು ಕಣ್ಣಾರೆ ನೋಡಬೇಕಾದರೆ ನಗರದ ಹಲವಾರು ಆಸ್ಪತ್ರೆಗಳ ಕಡೆ ಹೋದಲ್ಲಿ ಅಥವಾ ವಿದ್ಯುತ್ ಚಿತಾಗಾರ, ಸ್ಮಶಾನ ಗಳಿಗೆ ಭೇಟಿ ನೀಡಿದರೆ ಸರ್ಕಾರದ ಅಂಕಿಅಂಶಗಳು ಮತ್ತು ಮಾಧ್ಯಮಗಳ ವರದಿ ನಂಬಲನರ್ಹ ವಾಗಿದೆ. ನಿಮಗೆ ಎಂದೆನಿಸುವುದು ರಲ್ಲಿ ಸಂಶಯವಿಲ್ಲ
ಬೆಂಗಳೂರು ನಗರಾಭಿವೃದ್ಧಿ ಹಿಡಿತಕ್ಕಾಗಿ ಸಚಿವರ ಲಾಬಿ
ಇಂತಹ ಸಂದಿಗ್ಧ ಸಮಯದಲ್ಲಿ ರಾಜ್ಯದ ಅದರಲ್ಲೂ ಬೆಂಗಳೂರಿನ ನಾಗರಿಕರು ಸೇರಿದಂತೆ ಪ್ರತಿವರ್ಷ ಆದಾಯ ತೆರಿಗೆಗಳನ್ನು ಕಟ್ಟುವುದರ ಜೊತೆಗೆ ಪ್ರತಿಯೊಂದು ಪದಾರ್ಥಗಳನ್ನು ಖರೀದಿಸುವ ಸಂದರ್ಭದಲ್ಲಿ ಹಾಗೂ ಹೋಟೆಲ್ಗಳಲ್ಲಿ ಆಹಾರವನ್ನು ಸೇವಿಸುವ ಸಂದರ್ಭದಲ್ಲಿ ಜಿಎಸ್ಟಿ ಯನ್ನು ನೀವು ತೆರಿಗೆ ರೂಪದಲ್ಲಿ ಕಟ್ಟಿ ಸರ್ಕಾರವನ್ನು ನಡೆಸಲು ಮುಖ್ಯ ಪಾತ್ರವಹಿಸಿದ್ದರು ಈ ಸಮಯದಲ್ಲಿ ಸರ್ಕಾರದಿಂದ ನಿಮಗೆ ಆರೋಗ್ಯಸೇವಾ ಸೌಲಭ್ಯಗಳು ದೊರೆಯುತ್ತಿಲ್ಲ.
ಇಂತಹ ಸಾವು-ನೋವುಗಳನ್ನು ಅನುಭವಿಸುತ್ತಿರುವ ನಾಗರಿಕರ ಹೆಣಗಳ ರಾಶಿಗಳ ಮಧ್ಯೆ ಬೆಂಗಳೂರು ನಗರವನ್ನು ತನ್ನ ಹಿಡಿತದಲ್ಲಿ ಅಥವಾ ತನ್ನ ಕದಂಬಬಾಹು ಗಳಲ್ಲಿ ಇರಬೇಕೆಂದು ಅಪೇಕ್ಷಿಸುವ ನರರಾಕ್ಷಸ ರಾಜಕಾರಣಿ ಗಳು ವಿಧಾನಸೌಧದಲ್ಲಿ ಕುಳಿತು ಲಾಬಿ ನಡೆಸುತ್ತಿರುವುದು, ಕಂದಾಯ ಸಚಿವರು, ಉಪಮುಖ್ಯಮಂತ್ರಿ, ಜೊತೆಗೆ ಅರಣ್ಯ ಸಚಿವರು ಕೂಡ ಈಗ ಆ ಲಾಬಿಯ ಹಿಂದೆ ಬಿದ್ದಿರುವುದುನೋಡಿದರೆ ಅವರ ಪೈಶಾಚಿಕ ಮನಸ್ಥಿತಿ ನಿಮಗೆ ತಿಳಿಯುತ್ತದೆ. ಈ ಮಧ್ಯೆ ಕರೋನಾ ಸಾಂಕ್ರಾಮಿಕ ರೋಗದ ಲೀಡರ್ ನಾನೇ ಎಂದು ಆರೋಗ್ಯ ಸಚಿವರು ಪಟ್ಟು ಹಿಡಿದಿರುವುದು ಇದೆಲ್ಲವೂ ನಿಮ್ಮೆಲ್ಲರ ಗಮನಕ್ಕೆ ಬಾರದೆ ಇರಬಹುದು ಅಥವಾ ಬಂದಿರಬಹುದು. ಇಂತಹ ದುಷ್ಟ ಕೂಟಕ್ಕೆ ನಾವು ಮತ ಕೊಟ್ಟು ಕಳಿಸಿದ್ದೇವಲ್ಲ ಎಂಬ ಆತಂಕ ನಿಮ್ಮನ್ನು ಕಾಡುತ್ತಿದ್ದರೆ ಆಶ್ಚರ್ಯವಿಲ್ಲ.
ವಾಮ ಮಾರ್ಗದಲ್ಲಿ ರಚನೆಯಾದ ಈ ಸರ್ಕಾರಕ್ಕೆ ತಾಯಿ ಹೃದಯವೇ ಇಲ್ಲ
ಈ ಸರ್ಕಾರ ನಡೆಸುವ ಜನಪ್ರತಿನಿಧಿಗಳಿಗೆ ನೇರವಾಗಿ ನಾವು ಬಹುಮತ ನೀಡಿಲ್ಲ!!!! ವಾಮಮಾರ್ಗದಿಂದ ನಾನೇ ಮುಖ್ಯಮಂತ್ರಿಯಾಗಬೇಕೆಂದು ಹಟಕ್ಕೆ ಬಿದ್ದು ವಿಧಾನಸಭೆ ಸದಸ್ಯರಿಗೆ ಖರೀದಿಸಿ ರಾಜಿನಾಮೆ ಕೊಡಿಸಿ ಅವರನ್ನೇ ಮರುಚುನಾವಣೆಯಲ್ಲಿ ಆಯ್ಕೆಯಾಗುವ ಮಟ್ಟದವರೆಗೂ ಹಣದ ಹೊಳೆಯನ್ನೇ ಹರಿಸಿದ ಭಾರತೀಯ ಜನತಾ ಪಕ್ಷ ದ ಈ ಸರ್ಕಾರ ಜನರ ಜೀವದ ಜೊತೆ, ಜನರ ಹೆಣಗಳ ಜೊತೆ, ಜನರ ಆರೋಗ್ಯದ ಜೊತೆ, ಚೆಲ್ಲಾಟ ಮಾಡುತ್ತಿರುವುದು ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಮೇಲೆ ನಡೆಯುತ್ತಿರುವ ಅತ್ಯಾಚಾರ ವೆಂದೇ ಭಾವಿಸಬಹುದಾಗಿದೆ.
ಪ್ರಜೆಗಳಾಗಿ ಇದೆಲ್ಲವನ್ನು ನೋಡಿದ ನಿಮ್ಮ ಹೊಟ್ಟೆಯಲ್ಲಿ ಅಗ್ನಿ ಜ್ವಾಲೆ ಉತ್ಪತ್ತಿಯಾಗುವುದಿಲ್ಲವೇ?
ನಾಗರಿಕ ಬಂಧುಗಳೇ ಇದೆಲ್ಲವೂ ನಿಮ್ಮ ಕಣ್ಣೆದುರು ನಡೆಯುತ್ತಿದೆ.ಹಲವಾರು ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದೆ ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಗಮನಿಸಿದರೆ ನನ್ನ ಹೊಟ್ಟೆಯಲ್ಲಿ ಅಗ್ನಿಯ ಜ್ವಾಲೆ ಹತ್ತಿ ಉರಿಯುತ್ತಿದೆ ಇದೆಲ್ಲವನ್ನು ನೋಡುತ್ತಿರುವ ಕೆಲವರು ನಮಗೆ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿರುವುದು ನೋಡಿದರೆ ಈ ನಾಡಿನ ದ್ರೋಹಿಗಳೆಂದು ಭಾವಿಸಬೇಕಾಗುತ್ತದೆ.
JCB ಪಕ್ಷಗಳಲ್ಲಿರುವ ರಾಜಕಾರಣಿಗಳು ಭ್ರಷ್ಟಾಚಾರದ ವಿಷಯದಲ್ಲಿ ಇವರ DNA ಒಂದೇ ಆಗಿದೆ.
ಇದೆಲ್ಲವನ್ನು ಮುಂದಿನ ಚುನಾವಣೆ ಸಮಯದಲ್ಲಿ ನೀವು ಮರೆತುJCBಪಕ್ಷಗಳು ನೀಡುವ ಎಂಜಲುಕಾಸುಗಳಿಗೆ ಕೈಯೊಡ್ಡಿ ಕರ್ನಾಟಕ ರಾಜ್ಯವನ್ನು ಅವರಿಗೆ ಮಾರಾಟ ಮಾಡದಿರಿ. ಇಂತಹ ದುಷ್ಟಕೂಟದ ರಾಜಕಾರಣಿಗಳಿಗೆ ಮತ ನೀಡುವುದೇ ಆದಲ್ಲಿ ಅದು ನೀವು ನಿಮ್ಮ ತಾಯಿಗೆ ಮಾಡುವ ದ್ರೋಹ ವೆಂದೇ ಭಾವಿಸಲಾಗುತ್ತದೆ.
ಹೊಸ ಪಕ್ಷ ಹೊಸ ರಾಜಕಾರಣಿಗಳನ್ನು ತನ್ನಿ
ನೀವು ಈಗಲಾದರೂ ಎಚ್ಚೆತ್ತುಕೊಂಡು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎಂಬ ಮೂರು ಭ್ರಷ್ಟ ಪಕ್ಷಗಳನ್ನು ಬದಿಗೆ ತಳ್ಳಿ ಪರ್ಯಾಯವಾಗಿ ಉದಯವಾಗಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಆಮ್ ಆದ್ಮಿ ಪಕ್ಷ, ಪ್ರಜಾಕೀಯ ಪಕ್ಷ ವಾಗಿರಬಹುದು ಇದರಲ್ಲಿ ಮುಂಚೂಣಿಯಲ್ಲಿರುವ ಯುವ ರಾಜಕಾರಣಿ ರವಿಕೃಷ್ಣಾರೆಡ್ಡಿ, ಉಪೇಂದ್ರ, ಪೃಥ್ವಿ ರೆಡ್ಡಿ ಈ ತರ ಹೊಸ, ಹೊಸ ರಾಜಕಾರಣಿಗಳನ್ನು ಮುನ್ನೆಲೆಗೆ ತಂದು ಕರ್ನಾಟಕವನ್ನು ಭ್ರಷ್ಟಾಚಾರರಹಿತ *ತಾಯಿ ಹೃದಯದ ನಿಷ್ಠಾವಂತ ಪ್ರಾಮಾಣಿಕ ಜನರ ಕೈಗೆ ಕರ್ನಾಟಕ ರಾಜ್ಯ ಸರ್ಕಾರದ ಆಡಳಿತ ನಡೆಸಲು ಆಯ್ಕೆ ಮಾಡಿದ್ದೆ ಆದಲ್ಲಿ ಮುಂದೆ ಇಂತಹ ದುಸ್ಥಿತಿ ಬರುವುದಿಲ್ಲ ಎಂಬ ಮುಂದಾಲೋಚನೆಯಿಂದ ನಿಮ್ಮಲ್ಲಿ ನಾನು ಈ ಮನವಿಯನ್ನು ಮಾಡುತ್ತಿದ್ದೇನೆ. ನನ್ನ ಮನವಿಗೆ ದಯವಿಟ್ಟು ಸ್ಪಂದಿಸಿ ಪ್ರತಿಕ್ರಿಯಿಸಿ
ಹೆಚ್. ಎಂ.ವೆಂಕಟೇಶ್
ಸಾಮಾಜಿಕ ಹೋರಾಟಗಾರರು
ನ್ಯಾಯಾಂಗ ಬಡಾವಣೆ
ಬೆಂಗಳೂರ
(ದಯವಿಟ್ಟು ಈ ಮೇಲ್ಕಂಡ ನನ್ನ ಮನವಿಯನ್ನು ಎಲ್ಲರೂ ತಮ್ಮತಮ್ಮ ಫೇಸ್ಬುಕ್ ಗ್ರೂಪ್ ಗಳಿಗೆ ವಾಟ್ಸಪ್ ಗ್ರೂಪ್ ಗಳಿಗೆ ಇನ್ಸ್ಟಾಗ್ರಾಮ್ ಗಳಿಗೆ ಹಂಚಿ ಜನಾಭಿಪ್ರಾಯವನ್ನು ಸಂಗ್ರಹಿಸಿ. HMV)
http://nisargacare.com/career/