ಕಳಸದಲ್ಲಿಅದ್ದೂರಿ ಹೃದಯ ಸ್ಪರ್ಶಿ ಬೀಳ್ಕೊಡುಗೆ ಸಮಾರಂಭ #avintvcom
1 min read
ಕಳಸದಲ್ಲಿಅದ್ದೂರಿ ಹೃದಯ ಸ್ಪರ್ಶಿ ಬೀಳ್ಕೊಡುಗೆ ಸಮಾರಂಭ
ಕಳಸ:
ಪ್ರತಿಯೊಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿಷ್ಠೆ.ಪ್ರಾಮಾಣಿಕತೆ ಯಿಂದ ಕೆಲಸ ಮಾಡಿದಾಗ ಇಲಾಖೆಯ ಋಣ ತೀರಿಸಲು ಸಾಧ್ಯ ಎಂದು ಕುದುರೆಮುಖ ವೃತ್ತದ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಹೇಳಿದರು.
ಅವರು ಬುಧವಾರ ಸಂಜೆ ಕಳಸ ಪೊಲೀಸ್ ಠಾಣೆಯ ಆವರಣದಲ್ಲಿ ಬೆಂಗಳೂರು ನಗರಕ್ಕೆ ವರ್ಗವಣೆ ಗೊಂಡ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಶ್ರೀಮತಿ ರುಕ್ಮಿಣಿ ಸೋಮಶೇಖರ್ ರವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ಹಿರಿಯ ವ್ಯಕ್ತಿಗಳ ಹಾಗೂ ತಂದೆ- ತಾಯಿಗಳ ಪುಣ್ಯದಿಂದ ಈ ಹುದ್ದೆ ಸಿಕ್ಕಿದೆ ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬರು ಸಹ ನಿಷ್ಠೆ. ವಿನಯತೆ. ಸಂಯಮ ದಿಂದ ಕರ್ತವ್ಯ ನಿರ್ವಹಿಸಿ ಇಲಾಖೆ ಕೀರ್ತಿ ತನ್ನಿ ಎಂದು ತಿಳಿಸಿದರು..
ಮುಖ್ಯಅತಿಥಿಗಳಾದ ಪಿಎಸ್ ಐ.ಶ್ರೀಮತಿ ಗಾಯಿತ್ರಿ ರವರು ಮಾತನಾಡುತ್ತಾ ಪೊಲೀಸ್ ನವರು ಜನಸ್ನೇಹಿ ಪೊಲೀಸ್ ಸೇವೆಯೊಂದಿಗೆ ಸಮಾಜದಲ್ಲಿ ಮತ್ತು ಇಲಾಖೆ ಯಲ್ಲಿ ಪ್ರಾಮಾಣಿಕತೆ. ಬದ್ಧತೆ. ಹಾಗೂ ಜವಾಬ್ದಾರಿ ಮೆರೆಯುವ ಮೂಲಕ ಇತರರಿಗೆ ಮಾದರಿ ಯಾಗಿದ್ದಾರೆ.
ಬೆಂಗಳೂರು ನಗರಕ್ಕೆ ವರ್ಗಾವಣೆಗೊಂಡ ಮಹಿಳಾ ಪೊಲೀಸ್ ಕಾನ್ಸ್ಟೇಬಲ್
ಶ್ರೀಮತಿ ರುಕ್ಮಿಣಿ ಸೋಮಶೇಖರ್ ರವರು ಸನ್ಮಾನ ಸ್ವೀಕರಿಸಿ ಅಭಿನಂದನಾ ನುಡಿಯನ್ನು ನುಡಿಯುತ್ತಾ ಕಳಸ ಪೊಲೀಸ್ ಠಾಣೆಯ ಎಲ್ಲಾ ಹಿರಿಯ ಕಿರಿಯ ಅಧಿಕಾರಿಗಳಿಗೆ ಅಭಿನಂದಿಸುತ್ತೇನೆ.
ನಾವು ಮಾಡುವ ಕೆಲಸ ವನ್ನು ಮೊದಲು ಪ್ರೀತಿಸಿ. ಬಡಜನರ ಸೇವೆಯೇ ದೇವರ ಸೇವೆ ಎಂದು ಭಾವಿಸಿ. ಶಿಸ್ತು. ಮೇಲಾಧಿಕಾರಿ ಗಳಿಗೆ ಗೌರವ ಕೊಡುವ ಮನೋಭಾವ ಬೆಳೆಸಿ ಕೊಳ್ಳುವ ಮೂಲಕ ಕರ್ತವ್ಯ ವನ್ನೇ ಪೂಜೆ ಎಂದು ಭಾವಿಸಬೇಕು ಅಂದಾಗ ಮಾತ್ರ ಮಾಡುವ ಕೆಲಸ ದಲ್ಲಿ ನೆಮ್ಮದಿ ಪಡೆಯಲು ಸಾಧ್ಯ ಎಂದರು. ಮತ್ತೊಮ್ಮೆ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.ಎಂದರು.
ನಂತರ ಮೂಡಿಗೆರೆ ಪುಷ್ಪಗಿರಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಶ್ರೀಮತಿ ರುಕ್ಮಿಣಿ ಸೋಮಶೇಖರ್ ರವರ ಉತ್ತಮ ಪೊಲೀಸ್ ಸೇವೆ ಗುರುತಿಸಿ “ಪುಷ್ಪಗಿರಿ ಕೌಶಲ್ಯ ಪ್ರತಿಭಾ ರತ್ನ “ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎ ಎಸ್ ಐ ಮುರಳಿದರ್ .
ನಿವೃತ್ತ ಪೊಲೀಸ್ ಸಹಾಯಕ ಉಪ ನಿರೀಕ್ಷಕರಾದ ಶ್ರೀ ಹನುಮಂತರವರು.
ಎಂ ಎಂ ಅಶೋಕ್. ಜಯಕುಮಾರ್.
ಮಲ್ಲೇಶ್ ಮೊದಲುಮಟ್ಟಿ. ಅನಿಲ್. ಸೋಮಶೇಖರ್ ಮಾತನಾಡಿದರು. ಡಾ.ಸಿ ಆರ್. ಮೋಹನ್ ಕುಮಾರ್ ಸ್ವಾಗತಿಸಿ. ಕಾರ್ಯಕ್ರಮ ನಿರೂಪಿಸಿದರು.
ಉಮೇಶ್ ರವರು ವಂದಿಸಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್