ಅನ್ನದೇವರು ಮನೆಯನ್ನು ಹುಡುಕಿಕೊಂಡು ಬಂದಿತ್ತು. ನನಗೆ ನಂಬಲು ಸಾಧ್ಯವಾಗಲಿಲ್ಲ..#avintvcom
1 min read
*ಅನ್ನ ದೇವರು ಮನೆಗೆ ಬಂದಾಗ ಯಾಕೋ ಏನೋ ಎರಡು-ಮೂರು ದಿನಗಳಿಂದ ಯಾವುದೇ ರೀತಿಯ ಆಸಕ್ತಿ ಇಲ್ಲ ಮನಸ್ಸಿಗೆ ಏನೋ ಒಂದು ರೀತಿಯ ಕಿರಿಕಿರಿ ತನ್ನದಲ್ಲದ ತಪ್ಪಿನಿಂದ ಕರೋನಾ ಸಾಂಕ್ರಾಮಿಕ ರೋಗಕ್ಕೆ ಬಲಿಯಾದ ಕುಟುಂಬಗಳ ಕಣ್ಣೀರು. ಬೀದಿಗೆ ಬಿದ್ದ ಸಾರಿಗೆ ನೌಕರರ ಕುಟುಂಬ ವರ್ಗ. ಹಸಿವಿನಿಂದ ಬಳಲುತ್ತಿರುವ ಅಸಹಾಯಕರು ರೋಗರುಜಿನಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ಪ್ರಾಣ ಬಿಟ್ಟವರು ಹೀಗೆ ಹತ್ತು ಹಲವು ವಿಷಯಗಳು ನನ್ನನ್ನು ಎಡೆಬಿಡದೇ ಕಾಡುತ್ತಿತ್ತು. ಹೋದವರ್ಷದ ಲಾಕ್ ಡೌನ್ ಸಂದರ್ಭದಲ್ಲಿ ಒಂದು ಲಕ್ಷ ಊಟ ವಿತರಣೆ ಮಾಡಿದ್ದ ಚಿತ್ರಣ ಕಣ್ಣಮುಂದೆ ಬರುತ್ತಿತ್ತು. ಹಾಗಾಗಿ ಈ ವರ್ಷವೂ ಹಬ್ಬ ಮಾಡದಿರಲು ನಿರ್ಧಾರ. ನಮ್ಮ ಮನೆಯ ಗಾರ್ಡ್ನರ್ ಎರಡು ಮಾವಿನ ಎಲೆಗಳನ್ನು ಬಾಗಿಲಿಗೆ ಸಿಕ್ಕಿಸಿ ಹೋಗಿದ್ದ, ಹೂವು ಪೂಜೆಗಳ ಸಡಗರ ವಿಲ್ಲ. ಬೆಳಿಗ್ಗೆ ಹೋಟೆಲ್ ಗೆ ಹೋಗಿ ಎರಡು ಇಡ್ಲಿ ತಿಂದು ಬಂದೆ. ಮಧ್ಯಾಹ್ನದ ಹೊತ್ತಿಗೆ ಮನೆಯ ಬಾಗಿಲು ಹೊಡೆದ ಸದ್ದಾಯಿತು ನೀವು ಬೆಳಿಗ್ಗೆ ಹೋಟೆಲಿನಲ್ಲಿ ಇಡ್ಲಿ ತಿನ್ನುತ್ತಿರುವುದು ಅಮ್ಮ ನೋಡಿದ್ದಾರಂತೆ ಅದಕ್ಕೆ ಊಟ ಕಳುಹಿಸಿದ್ದಾರೆ……. ಸ್ವೀಕರಿಸುವ ಮನಸ್ಸಿರಲಿಲ್ಲ ಅನ್ನದೇವರು ಮನೆಯನ್ನು ಹುಡುಕಿಕೊಂಡು ಬಂದಿತ್ತು. ನನಗೆ ನಂಬಲು ಸಾಧ್ಯವಾಗಲಿಲ್ಲ………… HMV…………………………….ವರದಿ…..ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್
http://nisargacare.com/navachaithanya-old-age-home/