ವಿಪತ್ತು ನಿರ್ವಹಣ ತಂಡ ಮೂಡಿಗೆರೆ. ತಾಲ್ಲೊಕಿನ ಕಸಬಾ ವಲಯದ ಪ್ರತಿ ತಿಂಗಳ ಮಾಸಿಕ ವರದಿ#avintvcom
1 min read
ವಿಪತ್ತು ನಿರ್ವಹಣ ತಂಡ ಮೂಡಿಗೆರೆ. ತಾಲ್ಲೊಕಿನ ಕಸಬಾ ವಲಯದ ಪ್ರತಿ ತಿಂಗಳ ಮಾಸಿಕ ವರದಿ
ಶೌರ್ಯ ವಿಪತ್ತು ನಿರ್ವಹಣಾ ತಂಡ ತಿಂಗಳ ಮಾಸಿಕ ಸಭೆಯನ್ನು ಈ ದಿನ ನಡೆಸಲಾಯಿತು. ಸಭೆಯ ಸಂಯೋಜಕರಾದ ಪ್ರವೀಣ್ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಡಿಗೆರೆ ಕಸಬಾ ವಲಯದ ಮೇಲ್ವಿಚಾರಕರಾದ ವಿಘ್ನೇಶ್ ಹಾಗೂ ವಿಪತ್ತು ನಿರ್ವಹಣಾ ತಂಡದ ಸದಸ್ಯರುಗಳು ಉಪಸ್ಥಿತರಿದ್ದರು.
ಈ ಸಭೆಯಲ್ಲಿ ಎರಡು ತಿಂಗಳ ಅವಧಿಯಲ್ಲಿ ನಡೆಸಲಾದ 17 ಸೇವಾ ಕಾರ್ಯದ ವರದಿಯನ್ನು ಸಭೆಯಲ್ಲಿ ಪ್ರವೀಣ್ ಪೂಜಾರಿ ಅವರು ಮಂಡಿಸಿದರು.
ವಿಪತ್ತು ನಿರ್ವಹಣಾ ತಂಡದ ಸದಸ್ಯರ ಅನಿಸಿಕೆಗಳನ್ನು ಒಬ್ಬೊಬ್ಬರಾಗಿಯೇ ವ್ಯಕ್ತಪಡಿಸಲಾಯಿತು.
ಪ್ರತಿ ತಿಂಗಳ ಮೊದಲನೇ ಭಾನುವಾರದಂದು ನಮ್ಮ ಸೇವಾಕಾರ್ಯವನ್ನು ಮಾಡುವುದಾಗಿ ಎಲ್ಲಾ ಸದಸ್ಯರ ಒಮ್ಮತದಿಂದ ನಿರ್ಧರಿಸಲಾಯಿತು.
ಮುಂದಿನ ತಂಡದ ಕಾರ್ಯವೈಖರಿಯ ಬಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ವಿಘ್ನೇಶ್ ಇವರು ಸಭೆಗೆ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವ ಪ್ರತಿನಿಧಿಯಾದ ಕಾಮಾಕ್ಷಿಯವರು ಯುವಕರ ಕೆಲಸಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಇನ್ನು ಮುಂದೆ ತಂಡವು ಇದೇ ತರಹದ ಒಳ್ಳೆ ಕೆಲಸಗಳಿಗೆ ನಮ್ಮಿಂದಾಗುವ ಸಹಾಯವನ್ನು ನೀಡುತ್ತೇವೆಂದು ಭರವಸೆ ಯನ್ನು ವ್ಯಕ್ತಪಡಿಸಿದರು.
ಮುಂದಿನ ಯಾವುದೇ ವಿಚಾರಗಳು ಇಲ್ಲದೆ ಇರುವುದರಿಂದ ರವಿ ಪೂಜಾರಿ ಅವರು ವಂದನೆಗಳೊಂದಿಗೆ ಸಭೆಯನ್ನು ಮುಕ್ತಾಯ ಗೊಳಿಸಿದರು.
ಧನ್ಯವಾದಗಳೊಂದಿಗೆ
ಪ್ರವೀಣ್ ಪೂಜಾರಿ
*
ಸಂಯೋಜಕರು ಮೂಡಿಗೆರೆ ಕಸಬಾ ವಲಯ
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.