AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ರಾಜ್ಯ ವೀರಶೈವ ಲಿಂಗಾಯತ ಅಭಿರುದ್ದಿ ನಿಗಮ ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭ* #avintvcom

1 min read
Featured Video Play Icon

ಮೂಡಿಗೆರೆ
ರಾಜ್ಯ ವೀರಶೈವ ಲಿಂಗಾಯತ ಅಭಿರುದ್ದಿ ನಿಗಮ ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭ* —————————————-ಪ್ರತಿಯೊಬ್ಬರು ಸಮಾಜದ ಅಭಿರುದ್ಧಿ-ಪ್ರಗತಿಗಾಗಿ ಶ್ರಮಿಸಿ :
ಬಿ ಎಸ್ ಪರಮಶಿವಯ್ಯ. . ಮೂಡಿಗೆರೆ :
ವೀರಶೈವ ಲಿಂಗಾಯತ ಒಳಪಂಗಡ ಗಳು ಒಗ್ಗಟ್ಟಿನಿಂದ ಸದೃಢ ರಾಗಿ ಸಮಾಜದಲ್ಲಿ ಧರ್ಮ ಸಾಮರಸ್ಯ ವನ್ನು ಎತ್ತರಕ್ಕೆ ಕೊಂಡೊಯ್ಯವ ಅಗತ್ಯ ವಿದೆ ಎಂದು ಕರ್ನಾಟಕ ಸರ್ಕಾರ ದ ವೀರಶೈವ ಲಿಂಗಾಯತ ಅಭಿರುದ್ದಿ ನಿಗಮ ಮಂಡಳಿ ಯ ನೂತನ ಅಧ್ಯಕ್ಷ. ಬಿ. ಎಸ್. ಪರಮಶಿವಯ್ಯ ಹೇಳಿದರು. . ಅವರು ಗುರುವಾರ ಸಂಜೆ ಮೂಡಿಗೆರೆ ಪಟ್ಟಣದ ಮಹಂತಿನ ಸಮುದಾಯಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. . ಬೆಂಗಳೂರು. ಮಂಗಳೂರಿನಂತಹ ಮಹಾ ನಗರಗಳಲ್ಲಿದ್ದ ಅನೇಕ ಮಠಗಳ ಪರಿಸ್ಥಿತಿ ಕೆಳಮಟ್ಟದಲ್ಲಿದೆ.
ಈಗ ಬೆರಳೆಣಿಕೆಯಷ್ಟು ಮಠಗಳು ಮಾತ್ರ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸುತ್ತಿವೆ. ವೀರಶೈವ ಲಿಂಗಾಯತರೆಲ್ಲರೂ ಒಂದು ಗೂಡ ಬೇಕಿದೆ. ತಮ್ಮ ಮಕ್ಕಳುಗಳನ್ನು ಐ. ಪಿ. ಎಸ್…..ಐ ಎ ಎಸ್. ಕೆ. ಎ ಎಸ್ . ಪರೀಕ್ಷೆ ಎದುರಿಸಿ ಅಧಿಕಾರಿ ಗಳನ್ನಾಗಿ ಮಾಡಿ ಸಮಾಜದ ಪ್ರಗತಿಗೆ ಮುಂದಾಗಬೇಕು ಎಂದರು. . ವೀರಶೈವ ಸಮಾಜಕ್ಕೆ ದುಡಿಯುವ ದೃಷ್ಟಿ ಯಿಂದ ತನಗೆ ಎಂ. ಎಲ್ . ಸಿ. ಆಗುವ ಆಸೆಯಿತ್ತು. ಅದಕ್ಕಾಗಿ ಆರ್ಜಿ ನೀಡಿದ್ದೆ. ತಾನು ಎಂ. ಎಲ್. ಸಿ. ಆಗಲು ಉತ್ತರ ಕರ್ನಾಟಕ 150 ಮಠಗಳ ಸ್ವಾಮೀಜಿ ಗಳು ಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರು. ತನ್ನ ಆರ್ಜಿ ಕೇಂದ್ರದಲ್ಲಿ ತಿರಸ್ಕೃತ ಗೊಂಡಿತು.
ಇದರಿಂದ ಮುಖ್ಯ ಮಂತ್ರಿಗಳಿಗೂ ಬೇಸರ ಉಂಟಾಗಿತ್ತು. ಈಗ ನಿಗಮದ ಅಧ್ಯಕ್ಷ ರಾಗಿ ಅಧಿಕಾರ ಸ್ವೀಕರಿಸಿ 4.ತಿಂಗಳು ಕಳೆದಿದ್ದರು ವಾಹನ. ಕಚೇರಿ ನೀಡಿಲ್ಲ. ಅಲ್ಲದೆ ಅಧಿಕಾರಿಯೊಬ್ಬರನ್ನುಇತ್ತೀಚೆಗೆ ನೇಮಕ ಮಾಡಲಾಗಿದೆ.
500ಕೋಟಿ ರೂ ಅನುದಾನ ಬಿಡುಗಡೆ ಮಾಡಿ ಖಾತೆಗೆ ಜಮಾ ಮಾಡಲಾಗಿದೆ. ಎಪ್ರಿಲ್ 20ರ ನಂತರ ಸಭೆ ಕರೆದು ಸಮಾಜದ ಹಾಗೂ ಮಠದ ಉದ್ದಾರಕ್ಕಾಗಿ ಶಕ್ತಿ ಮೀರಿ ಶ್ರಮಿಸುತ್ತೇನೆಂದರು.
ಜಿಲ್ಲಾ ಅಖಿಲ ಭಾರತ ವೀರಶೈವ ಮಹಾ ಸಭಾದ ಸಂಘಟನಾ ಕಾರ್ಯದರ್ಶಿ ಡಾ.ಮೋಹನ್ ರಾಜಣ್ಣರವರು ಬಿ ಎಸ್ ಪರಮಶಿವಯ್ಯ ರವರ ಜೀವನ ಚರಿತ್ರೆ ಯನ್ನು ಸಂಕ್ಷಿಪ್ತ ವಾಗಿ ತಿಳಿಸಿ.ಬಿ.ಎಸ್. ಪರಮಶಿವಯ್ಯ ರವರಿಗೆ “ಪರಮಶಿವಾಬಿನಂದನೆ “ಎಂಬ ಪ್ರಶಸ್ತಿ ಯನ್ನು ಘೋಷಿಸಿದರು. . . ವೀರಶೈವ ಮುಖಂಡ ಬಿ. ಬಿ. ಬಸವರಾಜು ರವರು ಪ್ರಾಸ್ತಾವಿಕ ವಾಗಿ ಸಮಾಜದ ಹಾಗೂ ಮಹಂತಿನಮಠದಬಗ್ಗೆ ಮಾತನಾಡಿದರು. ಸಮಾಜದ ಅಧ್ಯಕ್ಷ ರಾದ ಬಿ ಎಸ್ ಓಂಕಾರ್ ರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಮಾಜದ ಎಲ್ಲಾ ವೀರಶೈವ ಲಿಂಗಾಯತ ಬಂಧುಗಳು ಒಗ್ಗಟ್ಟಾಗಿ ಕ್ರಿಯಾಶೀಲತೆಯಿಂದ ಸಮಾಜವನ್ನು ಕಟ್ಟಬೇಕುಎಂದರು. ಮಹಂತಿನ ಮಠದ ಪೀಠಾಧ್ಯಕ್ಸರಾದ ಶ್ರೀ. ಶ್ರೀ. ಶ್ರೀ ಷ. ಬ್ರ. ಚಂದ್ರಶೇಖರ್ ಶಿವಾಚಾರ್ಯ ಸ್ವಾಮಿ ಗಳು ಆಶ್ರೀವಚನ ನೀಡಿದರು. ನಂತರ ನಿಕಟ ಪೂರ್ವಧ್ಯಕ್ಸರಾದ ಉಗ್ಗೆ ಹಳ್ಳಿ ರಾಜಶೇಖರ ದಂಪತಿಗಳಿಗೆ ಸನ್ಮಾನಿಸಲಾಯಿತು.. ಜಿಲ್ಲಾ ಕಾರ್ಯದರ್ಶಿಎಂ. ಆರ್. ಪೂರ್ಣೇಶ್ ಮೂರ್ತಿ.
ಯುವ ಘಟಕ ದ ಅಧ್ಯಕ್ಷ ಎಂ ಸಿ ಆದರ್ಶ.
ಮಹಿಳಾ ಘಟಕ ದ ಅಧ್ಯಕ್ಷ ರಾದ ಶ್ರೀಮತಿ ಸುಶೀಲ ಶೇಖರ್. ಉಪಸ್ಥಿತರಿದ್ದರು. ಮೊದಲಿಗೆ ಎಂ. ಡಿ. ಇಂದ್ರೇಶ್ ಸ್ವಾಗತಿಸಿದರು.. ಪ್ರಾರ್ಥನೆ ಶ್ರೀಮತಿ ಶಕುಂತಲಾ ಪಾಟೀಲ್ ನೆರವೇರಿಸಿದರು.. ಕಾರ್ಯದರ್ಶಿ ಬಿ ಕೆ ಚಂದ್ರಶೇಖರ ವಂದಿಸಿದರು. ಕೊವೆ ರವಿಪಟೇಲ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ಕುಮಾರಿ.!!ವೇಧಾಶ್ರೀ ಗುರುಪ್ರಸಾದ್ ರವರಿಂದ ಭರತನಾಟ್ಯ – ಸಾಂಸ್ಕ್ರುತಿಕ ಕಾರ್ಯಕ್ರಮ ನೆರವೇರಿಸಲಾಯಿತು.
ಭಾರೀ ಜನಸ್ತೋಮ ನೆರೆದಿತ್ತು.*
*ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್*

http://nisargacare.com/career/http://nisargacare.com/navachaithanya-old-age-home/

About Author