ರೈಲ್ವೆ ನಿಲ್ದಾಣದ ಅತ್ಯಾಧುನಿಕ ರೈಲ್ವೆ ನಿಲ್ದಾಣ ದಾವಣಗೆರೆ ಜಿಲ್ಲೆಗೊಂದು ಪ್ರವಾಸಿ ತಾಣದಂತಾಗಿದೆ#avintvcom
1 min read
ದಾವಣಗೆರೆ
______
ದಿನಾಂಕ:-2-4-2021 ರಂದು ಸಂಜೆ 7 ಘಂಟೆಗೆ ಗಾಜಿನ ಮನೆಯಷ್ಟೇ ಪ್ರವಾಸಿ ತಾಣದಂತಿರುವ ನೂತನ ರೈಲ್ವೆ ನಿಲ್ದಾಣದ ಅತ್ಯಾಧುನಿಕ ರೈಲ್ವೆ ನಿಲ್ದಾಣ ದಾವಣಗೆರೆ ಜಿಲ್ಲೆಗೊಂದು ಪ್ರವಾಸಿ ತಾಣದಂತಾಗಿದೆ.ರಾತ್ರಿಯ ವಿಹಂಗಮ ನೋಟವನ್ನು ಸವಿಯುವ ಉದ್ದೇಶದಿಂದ ಮಾಧ್ಯಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಸೌಹಧ೯ ಕೂಟ ಸಮಾರಂಭದಲ್ಲಿ ರೈಲ್ವೆ ನಿಲ್ದಾಣದ ರೂವಾರಿ ಸಂಸದರಾದ ಶ್ರೀ ಜಿ.ಎಂ.ಸಿದ್ದೇಶ್ವರ ರವರು ಭೇಟಿ ನೀಡಿ ರೈಲ್ವೆ ನಿಲ್ದಾಣ ಯೋಜನೆಯ ಸಂಪೂರ್ಣ ವಿವರವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಶಾಸಕರಾದ ಎಸ್.ಎ.ರಾಮಚಂದ್ರಪ್ಪ, ಬಯಲು ಸೀಮೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜೀವನ್ ಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ವೀರೇಶ್ ಹನಗವಾಡಿ, ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಯಶವಂತ್ ರಾವ್ ಜಾಧವ್, ಧೂಡ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಮೇಯರ್ ಎಸ್.ಟಿ.ವೀರೇಶ್, ಜಿಲ್ಲಾಧಿಕಾರಿಗಳಾದ ಮಹಾಂತೇಶ್ ಬೀಳಗಿ, ಮಹಾನಗರ ಪಾಲಿಕೆ ಸದಸ್ಯರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಶ್ರೀಮತಿ ಸವಿತ ರವಿಕುಮಾರ
ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯