ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಜನ ವಿಜ್ಞಾನ ಚಳುವಳಿ ವಿಶೇಷ ಉಪನ್ಯಾಸ ಮಾಲಿಕೆ-15 ಮಾನ್ಯರೇ,*#avintvcom
1 min read
ಕೆಜೆವಿಎಸ್ ವೆಬಿನಾರ್ -36. ಜನ ವಿಜ್ಞಾನ ಚಳುವಳಿ ವಿಶೇಷ ಉಪನ್ಯಾಸ ಮಾಲಿಕೆ-15 ಮಾನ್ಯರೇ, *ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು 10.03.2021 ರಿಂದ ಪ್ರಾರಂಭಿಸಿ ಮಾರ್ಚಿ 31ರ ವರೆಗೆ ವಾರ್ಷಿಕ ಸದಸ್ಯತ್ವ ಹಾಗೂ ವಾರ್ಷಿಕ ದಾನಿಗಳ ನೊಂದಣಿ ಅಭಿಯಾನವನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಪ್ರತಿದಿನ ಜನವಿಜ್ಞಾನ ಚಳುವಳಿಯ ಜೊತೆಯಾಗಿರುವ ಹಿರಿಯ ಕಾರ್ಯಕರ್ತರಿಂದ ತಾವು ಹೇಗೆ ವಿಜ್ಞಾನ ಚಳುವಳಿಗ ಪ್ರವೇಶಿಸಿದರು, ತಮ್ಮ ಅನುಭವ ಹಾಗೂ ಮುನ್ನೋಟ ಕುರಿತಂತೆ ಮಾತನಾಡಲಿದ್ದಾರೆ. ಈ ಸಂಚಿಕೆಯ 15 ನೆಯ ಉಪನ್ಯಾಸ ಇಂದು(28.03.2021) ಭಾನುವಾರ ಸಂಜೆ 7.30ಕ್ಕೆ ಕಳೆದ ಮೂರು ದಶಕಗಳ ಕಾಲ ಜನ ವಿಜ್ಞಾನ ಚಳುವಳಿಯ ಭಾಗವಾಗಿರುವ ಚಿಕ್ಕಮಗಳೂರು ಜಿಲ್ಲಾ ಕೆಜೆವಿಎಸ್ ಕಾರ್ಯದರ್ಶಿ ಶ್ರೀ ಮಂಜುನಾಥಸ್ವಾಮಿ ಡಿ.ಎಂ. ಅವರು ಮಾತನಾಡಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆ ಕೆಜೆವಿಎಸ್ ಚಿಕ್ಕಮಗಳೂರು ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಅನಿತಾ. ಸ್ವಾಗತ: ಕೆಜೆವಿಎಸ್ ಚಿತ್ರದುರ್ಗ ಜಿಲ್ಲಾ ಕಾರ್ಯದರ್ಶಿ ಶ್ರೀ ಕೆ.ಬಿ.ಮಹಂತೇಶ್. ಪರಿಚಯ: ಕೆಜೆವಿಎಸ್ ಚಿಕ್ಕಮಗಳೂರು ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಕೆ.ಎನ್.ಮೋಹನ್. ವಂದನಾರ್ಪಣೆ; ಕೊಪ್ಪ ತಾಲ್ಲೂಕು ಕೆಜೆವಿಎಸ್ ಅಧ್ಯಕ್ಷರಾದ ಶ್ರೀ ಕೆ.ಎಂ.ರುದ್ರೇಶ್. ಇಂಥ ವಿಶೇಷವಾದ ಕಾರ್ಯಕ್ರಮಕ್ಕೆ ತಾವು ಭಾಗವಹಿಸಲು ಕೋರಿದೆ. ದಯಮಾಡಿ ಕೆಳಗಿನ ಲಿಂಕ್ ಬಳಸಿ ಸಭೆಯಲ್ಲಿ ಭಾಗವಹಿಸಲು ವಿನಂತಿ.