day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ತುಳು ವೈಭವ 2021 ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು. #avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ತುಳು ವೈಭವ 2021 ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು. #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳುಕೂಟ (ರಿ)ಮೂಡಿಗೆರೆ ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 26-3-2021ರಂದು ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ತುಳು ವೈಭವ 2021 ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಸಂಜೆ 4 ಗಂಟೆಗೆ ಕಲಾಭಾರತಿ ತಂಡದ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮವು ನಡೆಯಿತು 5.30 ಗಂಟೆಗೆ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು. ಈ ಸಭಾಕಾರ್ಯಕ್ರಮದಲ್ಲಿ ಸಮಾರಂಭದ ಅಧ್ಯಕ್ಷರಾಗಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂಪಿ ಕುಮಾರಸ್ವಾಮಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟಕರಾಗಿ ಹಾಗೂ ಮುಖ್ಯ ಭಾಷಣಕಾರರಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ ಕತ್ತಲ್ಸಾರ್ ಹಾಗೂ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಭಾರತಿ ರವೀಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಧರ್ಮಗುರುಗಳಾದ ನಿಜಾಮುದ್ದೀನ್ ಅನ್ಸಾರಿ ಗಬ್ಗಲ್ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ನಿಟ್ಟೆ ಶಶಿಧರ ಶೆಟ್ಟಿ ,ರವೀಂದ್ರ ಶೆಟ್ಟಿ , ನರೇಂದ್ರ ಕೆರೆಕಾಡು ಹಾಗೂ ಗೌರವಾಧ್ಯಕ್ಷರಾಗಿ ಡಾಕ್ಟರ್ ರಾಮಚರಣ ಅಡ್ಯಂತಾಯ ಹಾಗೂ ವಸಂತ ಪೂಜಾರಿ ಮತ್ತು ತುಳುಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ಸಾರ್ ಅವರು ಮಾತನಾಡಿ ತುಳು ಭಾಷೆ ಸಂಸ್ಕೃತಿ ಹಾಗೂ ತುಳು ಲಿಪಿ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು ಮೂಡಿಗೆರೆಯಲ್ಲಿ ನಡೆಯುತ್ತಿರುವ ತುಳು ವೈಭವ ಕಾರ್ಯಕ್ರಮ ಬಗ್ಗೆ ತುಂಬಾ ಹರ್ಷವ್ಯಕ್ತಪಡಿಸಿದರು ಹಾಗೆ ಮೂಡಿಗೆರೆಯಲ್ಲಿ ತುಳು ಭವನ ನಿರ್ಮಿಸಲು ನಿವೇಶನ ಕೋರಿ ಶಾಸಕರಲ್ಲಿ ಮನವಿ ಮಾಡಿದರು .ಮೂಡಿಗೆರೆ ತುಳುಕೂಟದ ಅಧ್ಯಕ್ಷರು ಜಾನಪ್ಪ ಮಾಸ್ಟರ್ ಮಾತನಾಡಿ ತುಳು ವೈಭವಕ್ಕೆ ಸಹಕರಿಸಿದ ಎಲ್ಲಾ ತುಳು ಬಾಂಧವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಭಾರತಿ ರವೀಂದ್ರ ಮಾತನಾಡಿ ತುಳುನಾಡಿನ ಸಂಸ್ಕೃತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು .ತುಳುನಾಡಿನ ಕಂಬಳ, ಕೋಳಿ ಅಂಕ, ನಾಗರಾಧನೆ, ಕೋಲ ಇದರ ಬಗ್ಗೆ ಜ್ಞಾಪಿಸಿಕೊಂಡರು. ಮುಸ್ಲಿಂ ಧರ್ಮಗುರುಗಳಾದ ನಿಜಾಮುದ್ದೀನ್ ಅನ್ಸಾರಿ ಅವರು ಮಾತನಾಡಿ ಮಲಯಾಳಂ ಮತ್ತು ತುಳು ಲಿಪಿ ಒಂದೇ ರೀತಿ ಇದ್ದು ಹತ್ತಿರದ ಹೊಂದಾಣಿಕೆ ಇರುತ್ತದೆ ಎಂದು ತಿಳಿಸಿದರು. ಮೂಡಿಗೆರೆ ಯಲ್ಲಿ ನಡೆದಿರುವ ಸೌಹಾರ್ದ ತುಳುಕೂಟಕ್ಕೆ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದರು .ಈ ಕಾರ್ಯಕ್ರಮಕ್ಕೆ ನಿಕಟಪೂರ್ವ ಅಧ್ಯಕ್ಷರಾದ ಪಿ ವಿಶ್ವ ಕುಮಾರ್ ಇವರು ಎಲ್ಲರನ್ನೂ ಸಭೆಗೆ ಸ್ವಾಗತಿಸಿದರು. ಕಾರ್ಯಕ್ರಮದ ನಿರ್ದೇಶಕರಾದ ವಿನೋದ್ ಕುಮಾರ್ ಶೆಟ್ಟಿ ಅವರು ಪ್ರಸ್ತಾವಿಕ ನುಡಿ ನುಡಿದರು. ಶಾಸಕರಾದ ಎಂಪಿ ಕುಮಾರಸ್ವಾಮಿಯವರು ಮಾತನಾಡಿ ತುಳು ವೈಭವ ಕಾರ್ಯಕ್ರಮದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ಕೂಡ ನಿಮ್ಮೊಂದಿಗೆ ಇದ್ದೇನೆ ನನ್ನ ಸಹಕಾರ ನಿಮ್ಮೊಂದಿಗಿದೆ ಇನ್ನು ಮುಂದೆಯೂ ಇದೆ ಎಂದು ತಿಳಿಸಿದರು. ಈ ಸಮಾರಂಭದಲ್ಲಿ ಮೂವರು ಸಾಧಕರಾದ ಲಕ್ಮಣ ಗೌಡ ನಿವೃತ್ತ ಮುಖ್ಯ ಶಿಕ್ಷಕರು ಬಿಳಗೊಳ, ಸಮಾಜ ಸೇವಕರಾದ ಆರಿಫ್ ಬಣಕಲ್ ಹಾಗು ಕುಮಾರಿ ನಿಕಿತಾ ರೀಷಾ ಡಿಸೋಜ ಇವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿಯಾದ ಜಾನ್ ಡಿಸೋಜ ಇವರು ಸಹಕರಿಸಿದ ಎಲ್ಲರಿಗೂ ವಂದನೆಯನ್ನು ಸಲ್ಲಿಸಿದರು. ನಂತರ ಲಕುಮಿ ಕುಶಾಲ್ ದ ಕಲಾವಿದೆರ್ ತಂಡದಿಂದ “ಎನ್ನ ಬಂಗ ಎಂಕೆ ಗೊತ್ತು” ಎಂಬ ಹಾಸ್ಯಮಯ ತುಳು ನಾಟಕ ಪ್ರದರ್ಶನವಾಯಿತು. ಮೂಡಿಗೆರೆ ತಾಲೂಕಿನ ಸುತ್ತ-ಮುತ್ತ ಸುಮಾರು 2500 ತುಳು ಬಾಂಧವರು ನಾಟಕವನ್ನು ವೀಕ್ಷಿಸಿದರು. ಈ ನಾಟಕದಲ್ಲಿ ಖ್ಯಾತ ತುಳು ಚಲನಚಿತ್ರ ನಟ ಹಾಗೂ ತುಳು ರಂಗಭೂಮಿ ಕಲಾವಿದ ಅರವಿಂದ ಬೋಳಾರ್ ಇವರ ಪಾತ್ರ ವಿಶೇಷವಾಗಿತ್ತು. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್.

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author