ಎಡದಂಡೆ ಕಾಲುವೆಗೆ ಏಪ್ರಿಲ್ 10 ರವರೆಗೆ ನೀರು ಹರಿಸಬೇಕು ಎಂದು ಬಹುಜನ ಸಮಾಜ ಪಕ್ಷ ಒತ್ತಾಯಿಸಿದೆ. #avintvcom
1 min read
ಮಾನ್ಯರೆ *ವಿಷಯ : ನಾರಾಯಣಪುರ ಬಸವಸಾಗರ ಜಲಾಶಯ ಎಡದಂಡೆ ಕಾಲುವೆಗೆ ಏಪ್ರಿಲ್ 10 2021 ರವರೆಗೆ ಕಾಲುವೆಗೆ ನೀರು ಹರಿಸಲು ಆದೇಶಿಸಲು ಕುರಿತು.* ಈ ಮೇಲ್ಕಾಣಿಸಿ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರಕಾರ ಎಡದಂಡೆ ಕಾಲುವೆ ಮಾರ್ಚ 31, 2021 ರವಗೆ ನೀರು ಹರಿಸಲು ಸೂಚಿಸಿದೆ ಆದರೆ ಏಪ್ರಿಲ್ 31 ರವರೆಗೆ ನೀರು ಹರಿಸುವುದರಿಂದ ರೈತರ ಬೆಳೆ ಸಂಪೂರ್ಣವಾಗಿ ಬರುವುದಿಲ್ಲ ಅದಕ್ಕಾಗಿ ರೈತರ ಬೆಳೆದ ಬೆಳೆಗಳು ಸಂಪೂರ್ಣವಾಗಿ ಬರಬೇಕು ಅಂದರೆ ಎಡದಂಡೆಯ ಕಾಲುವೆಯ ರೈತರ ಆಸೆಯಂತೆ ಕನಿಷ್ಠ ಏಪ್ರಿಲ್ 10, 2021 ರವರೆಗೆ ಹೆಚ್ಚಿಸಿ ನೀರು ಹರಿಸಬೇಕು ಎಂದು ಬಹುಜನ ಸಮಾಜ ಪಕ್ಷ ಒತ್ತಾಯಿಸುತ್ತದೆ. *ಈ ವಿಷಯವನ್ನು ತಮ್ಮ ಸುದ್ದಿ ವಾಹಿನಿ ಅಥವಾ ದಿನ ಪತ್ರಿಕೆಯಲ್ಲಿ ಪ್ರಕಟಿಸಿಬೇಕೆಂದು ವಿನಂತಿ.* ವಂದನೆಗಳೊಂದಿಗೆ ಇಂತಿ ತಮ್ಮ ವಿಶ್ವಾಸಿ ಪರಶುರಾಮ. ಬಿ. ದೊಡಮನಿ ಅಗತೀರ್ಥ ಜಿಲ್ಲಾ ಉಪಾಧ್ಯಕ್ಷರು ಬಹುಜನ ಸಮಾಜ ಪಾರ್ಟಿ ಯಾದಗಿರಿ