AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸಚಿವ ರಮೇಶ್ ಜಾರಕಿಹೊಳಿಯನ್ನು ಸಂಪುಟದಿಂದ ವಜಾಮಾಡಿ.ತಪ್ಪದೇ ವೀಕ್ಷಿಸಿ.#avintvcom

1 min read
Featured Video Play Icon

ಯಾವುದೇ ನೀತಿಯಿಲ್ಲ, ಮೌಲ್ಯವಿಲ್ಲ….. ದಾಂಪತ್ಯನಿಷ್ಠೆಯನ್ನೂ ಕೇಳುವ ಹಾಗಿಲ್ಲ. ಇಂದಿನ ಪರಂಪರಾಗತ ಭ್ರಷ್ಟ ಪಕ್ಷಗಳ ರಾಜಕಾರಣಿಗಳು ಕೇವಲ ಭ್ರಷ್ಟರಷ್ಟೇ ಅಲ್ಲ, ಪರಮವಂಚಕರು ಮತ್ತು ಪರಮಲಂಪಟರೂ ಆಗಿದ್ದಾರೆ. ಹಲವರು ವಿಕೃತಕಾಮಿಗಳೂ ಹೌದು. ರಾಜಕಾರಣಿಗಳ ಅನೈತಿಕ ಸಂಬಂಧಗಳ ಬಗ್ಗೆ ಕೆಲವರು ಮಾತನಾಡುವುದನ್ನು ಕೇಳಿದರೆ ವಾಕರಿಕೆ ಬರುತ್ತದೆ. ಇಂತಹವರ ಜೊತೆಗೆ ಓಡಾಡುವ ಜನರನ್ನು ನೋಡಿದರೂ ನನಗೆ ಅಸಹ್ಯವಾಗುತ್ತದೆ. ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಪರಸ್ತ್ರೀಯರೊಂದಿಗೆ ಮಾಡಬಾರದ್ದನ್ನು ಮಾಡಿ ಅದನ್ನು ಚಿತ್ರೀಕರಿಸಿಕೊಳ್ಳುವ ಮನಸ್ಥಿತಿ ಇರುವವರು ಖಂಡಿತ ಅಪರಾಧ ಮತ್ತು ವಿಕೃತ ಮನೋಭಾವದವರು. ಎರಡುಮೂರು ವರ್ಷದ ಹಿಂದೆ ಒಬ್ಬ ಐಪಿಎಸ್ ಅಧಿಕಾರಿಯೂ ಹೀಗೆಯೇ ಮಾಡಿದ್ದ. ಟಿವಿಯಲ್ಲಿ ಅಥವ ಪತ್ರಿಕೆಯಲ್ಲಿ ರಾಜಕಾರಣಿಗಳ ದರಿದ್ರ ಮುಖಗಳು ಕಾಣಿಸಿದ ತಕ್ಷಣ ಅದು ತಮ್ಮ ಮಕ್ಕಳ ಕಣ್ಣಿಗೆ ಕಾಣಿಸದ ಹಾಗೆ ಪೋಷಕರು ತಮ್ಮ ಕೈಯನ್ನು ಮಕ್ಕಳ ಕಣ್ಣಿಗೆ ಅಡ್ಡ ಇಡುವ ಸಮಯ ಇದು. ಬಂದಿರುವ ಆರೋಪದಲ್ಲಿ ಕನಿಷ್ಠ ಸತ್ಯಾಂಶ ಇದ್ದರೂ ಸಚಿವ ರಮೇಶ್ ಜಾರಕಿಹೊಳಿಯವರನ್ನು ಈ ಕೂಡಲೇ ಸಂಪುಟದಿಂದ ವಜಾ ಮಾಡಬೇಕು. ರಾಜೀನಾಮೆ ನೀಡುವ ಅವಕಾಶವನ್ನೂ ಕೊಡಬಾರದು. ಅಂತಹ ಕನಿಷ್ಠ ಗೌರವಕ್ಕೂ ಇವರು ಅರ್ಹರಲ್ಲ ಎಂದು ಕರ್ನಾಟಕ ರಾಷ್ಟ್ರ ಸಮಿತಿಯ ರಾಜ್ಯದ್ಯಕ್ಷ ರವಿಕೃಷ್ಣರೆಡ್ಡಿ ತಿಳಿಸಿದ್ದಾರೆ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್. www.avintv.com

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author