ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಶ್ರೀಸಿದ್ದೇಶ್ವರದೇವರ ಮೊದಲ ವರ್ಷದ ಜಾತ್ರೆ.ತಪ್ಪದೇ ವೀಕ್ಷಿಸಿ.#avintvcom
1 min readಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಭಾರತ ಹುಣ್ಣಿಮೆಯ ದಿನದಂದು ಶ್ರೀ ಸಿದ್ದೇಶ್ವರ ದೇವರ ವರ್ಷದ ಪ್ರಥಮ ಜಾತ್ರೆ ಯನ್ನು ಕೇದಾರ ಲಿಂಗ ದೇವಸ್ಥನಾದಿಂದ ಸಿದ್ದೇಶ್ವರ ದೇವಸ್ಥಾನದವರೆಗೆ ಸಿದ್ದೇಶ್ವರ ಹಾಗೂ ಕೇದಾರ ಲಿಂಗ ದೇವರ ಪಲ್ಲಕಿ ಡೊಳ್ಳು ಕುಣಿತ ನಂದಿಕೋಲ ಕುಣಿತ ದೀವಟಿಗೆ ಹಚ್ಚಿಕೊಂಡುಹೋಗುವ ಮೂಲಕ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಯಿಂದ ಸಿದ್ದೇಶ್ವರ ದೇವಸ್ಥಾನ ಪ್ರವೇಶ ಮಾಡಿದ ಮೇಲೆ ಮಗದುಮ್ಮ ,ನಿವಲಗಿ,ಜಾಲೀಹಾಳ,ಇಬ್ರಾಹಿಂಪೂರ ಮನೆತನದಿಂದ ರೊಟ್ಟಿ ಬುತ್ತಿ ಹಾಗೂ ಅನೇಕ ಆಹಾರ ತಯಾರಿಸಿಕೊಂಡು ಬಂದು ಗ್ರಾಮ ಹಾಗೂ ಸುತ್ತ ಹಳ್ಳಿಯ ಜನರಿಗೆ ಪ್ರಸಾದ ಬಡಿಸುವ ಮೂಲಕ ರೊಟ್ಟಿ ಬುತ್ತಿ ಜಾತ್ರೆ ಆಚರಿಸಲಾಯಿತು.ಎಂದು ಗ್ರಾಮದ ಗೌಡ್ರರಾದ ಪ್ರವೀಣ ನಾಯಿಕ ಹೇಳಿದರು.ಈ ಸಂದರ್ಭದಲ್ಲಿ ಮುಖಂಡರಾದ ರಾಮು ಮಗದುಮ್ಮ,ಮಾರುತಿ ಮಗದುಮ್ಮ,ಅಶೋಕ ಪೂಜಾರಿ,ರಂಜಿತ ಪೂಜಾರಿ ,ನಿಜಗುಣಿ ಮಗದುಮ್ಮ್ ,ಭೀಮು ಪೂಜಾರಿ ,ಗಿರಾಮಲ್ಲ ಇಬ್ರಾಹಿಂಪುರ ,ರವಿ ನಿವಲಗಿ ,ಸಂತೋಷ ಕಲ್ಲೋತ್ತಿ ,ಹಣಮಂತ ಬಾಡಗಿ ,ಸಿದ್ದಪ್ಪಾ ಆರಗೆ,ಚನಬಸ್ಸು ಜಾಲಿಹಾಳ ,ಚಿದಾನಂದ ಜಾಲಿಹಾಳ , ಮೌನೇಶ ಪತ್ತಾರ ,ಸಂತೋಷ ಪೂಜಾರಿ ,ನರಸಪ್ಪಾ ಕುಂಬಾರೆ ,ಬಾಪು ಆಬ್ಯಂಕರ್ ,ಮಾರುತಿ ಭಂಡಾರೆ ಸಿದರಾಯ ತೊಡಕರ,ವಿಷ್ಣು ಕಾಂಬಳೆ ಶಂಕರ ಗಸ್ತಿ ಹಾಗೂ ಎಲ್ಲಾ ಗ್ರಾಮಸ್ಥರು ಉಪಸ್ಥಿತರಿದ್ದರು. www.avintv.com