ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ.ತಪ್ಪದೇ ವೀಕ್ಷಿಸಿ.#avintvcom
1 min read
ಕೇಂದ್ರ ಸರ್ಕಾರದ ಜನವಿರೋಧಿ ಪೆಟ್ರೋಲ್ .ಡೀಸೆಲ್. ಅಡುಗೆ ಅನಿಲ. ದರ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿ ಜನಸಾಮಾನ್ಯರು ಬದುಕಲಾಗದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ ಈಗಾಗಲೇ ಕೋವಿಡ್ ದಾಳಿಯಿಂದ ಹೈರಾಣಾಗಿರುವ ಜನರ ಮೇಲೆ ತೈಲದ ಏರಿಕೆ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ 300 ದಿನಗಳ ಅವಧಿಯಲ್ಲಿ 66 ಭಾರಿ ಏರಿಕೆಯಾದರೂ ಅಬಕಾರಿ ಸುಂಕವನ್ನು ಇಳಿಸದೆ ಜನವಿರೋಧಿ ನೀತಿಯನ್ನು ಅನುಸರಿಸುವ ಮೂಲಕ ಕಾರ್ಪೊರೇಟರ್ ಗಳ ಲಾಭಕ್ಕೆ ಪೂರಕವಾದ ಆಡಳಿತವನ್ನು ನಡೆಸುತ್ತಿದೆ ಈಗಾಗಲೇ ಬ್ಯಾಂಕ್ ವಿಮೆ ದೂರವಾಣಿ ರಸ್ತೆ ಶಿಕ್ಷಣ ಆರೋಗ್ಯ ಕೈಗಾರಿಕೆ ಕೃಷಿ ರಂಗದ ಮೇಲೆ ಖಾಸಗೀಕರಣವನ್ನು ಜಾರಿಗೊಳಿಸುವ ಮೂಲಕ ನಿರುದ್ಯೋಗ ಅಸಮಾನತೆಯ ಕಂದಕಗಳು ಜನರ ಬದುಕನ್ನೇ ದುಸ್ತರ ಗೊಳಿಸಿದ್ದು ವಿದೇಶಿ ಬಂಡವಾಳ ಕಾರ್ಪೊರೇಟ್ ಪರವಾದ ಆಡಳಿತದಿಂದಾಗಿ ಹೋರಾಡಿ ಗಳಿಸಿದ ಸ್ವಾತಂತ್ರ್ಯ ಸಮಾನತೆ ಸಹೋದರತ್ವದ ಆಶಯಗಳು ಬುಡಮೇಲಾಗಿ ಸರ್ವಾಧಿಕಾರಿ ಅಸಮಾನತೆ ಜಾತಿ ವಿವಾದ ಮೀಸಲಾತಿ ವಿರೋಧಿ ಅತ್ಯಾಚಾರ ಹಲ್ಲೆ ಹಿಂಸೆಗಳು ದ್ವಿಗುಣಗೊಂಡು ದೇಶದ ಘನತೆ ಗೌರವ ಮಾನ ಮರ್ಯಾದೆ ಗೆ ದಕ್ಕೆ ಆಗುವಂತಾಗಿದೆ ಮಹಿಳೆಯರು ಯುವಕರು ಮಕ್ಕಳು ಕಾರ್ಮಿಕರು ದಲಿತರು ಅಲ್ಪಸಂಖ್ಯಾತರು ರಕ್ಷಣೆಯಿಲ್ಲದೆ ಆತಂಕಕ್ಕೆ ಒಳಗಾಗಿದ್ದಾರೆ ವಿವಾದಾತ್ಮಕ ಕೃಷಿರಂಗದ ಕತ್ತು ಕತ್ತರಿಸುವ ಕಾರ್ಪೊರೇಟ್ ಪರವಾದ ಕೃಷಿ ಮಸೂದೆಗಳ ರೈತರ ಉತ್ಪಾದನೆ ಪ್ರಚಾರ ಮತ್ತು ಸೌಲಭ್ಯ ಕಾಯ್ದೆ ರೈತರ ಬೆಲೆ ಬರವಸೆ ಹಾಗೂ ಹಾಗೂ ಕೃಷಿ ಸೇವೆಗಳ ಕಾಯ್ದೆ ಅಗತ್ಯ ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ ತಿದ್ದುಪಡಿ ಕಾಯ್ದೆ 2020 ಜಾರಿಗೆ ತರುವುದರ ಮೂಲಕ ದೇಶದ ಇಡೀ ಪಡಿತರ ವ್ಯವಸ್ಥೆಯನ್ನು ಕಾರ್ಪೊರೇಟರ್ ಗೆ ನೀಡುವ ಈ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಹೋರಾಟ ನಡೆಸಲಾಯಿತು ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್. www.avintv.com ಅನುಭವಿ ಸುದ್ದಿ ವರದಿಗಾರರು ಬೇಕಾಗಿದ್ದಾರೆ