AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಮ್ಮ ಶಾಲೆ ನಮ್ಮ ಹೆಮ್ಮೆ ವಿಶೇಷ ಕಾರ್ಯಕ್ರಮ ತಪ್ಪದೇ ವೀಕ್ಷಿಸಿ.#avintvcom

1 min read
Featured Video Play Icon

https://youtu.be/mMIiEtOHAgc

ನಮ್ಮ ಶಾಲೆ ನಮ್ಮ ಹೆಮ್ಮೆ…….. ಪ್ರಗತಿ ಪಥದತ್ತ ನೀಡುವ ಶಾಲೆ…. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಿಡುವಾಳೆ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ. ಇಲ್ಲಿ ವಿದ್ಯಾಭಿಮಾನಿಗಳ, ಊರವರ, ಹಳೆ ವಿದ್ಯಾರ್ಥಿಗಳ, ದಾನಿಗಳ ಸಹಕಾರದಿಂದ ಮತ್ತು ಎಸ್.ಡಿ.ಎಂ.ಸಿ‌ ಮೂಲಕ ಅಭಿವೃದ್ಧಿ ಪತದಲ್ಲಿ ಸಾಗುತ್ತಿರುವ ಹಳ್ಳಿಗಾಡಿನ ಸರ್ಕಾರಿ‌ ಶಾಲೆ…ನೆಡುವಾಳೆ ಶಾಲೆ. ೧೯೩೫ರಲ್ಲಿ ಆರಂಭವಾಗಿರುವ ಈ ಶಾಲೆ.. ಸುತ್ತ-ಮುತ್ತಲ ಬಡ, ಹಿಂದುಳಿದ ಜನಾಂಗದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಹೆಗ್ಗಳಿಕೆ‌ ಹೊಂದಿದೆ.. ಮಲೆನಾಡಿನ ಸುಂದರ ಪರಿಸರದಲ್ಲಿರುವ ಈ ಶಾಲೆ ಹೇಮಾವತಿ‌ ನದಿ‌ ಮೂಲದಿಂದ ಅನತಿ ದೂರದಲ್ಲಿದು ವಿದ್ಯಾಭಿಮಾನಿಗಳ ನೆಚ್ಚಿನ ತಾಣ.. ಅರಿಶಿನ ಹಕ್ಲು ಎಸ್ಟೇಟಿನ ಮಾಲೀಕರಾಗಿದ್ದ ಶ್ರೀ ಪ್ರವೀಣ ಗುರ್ಜರ್, ಉರುವಿನಖಾನ್ ಎಸ್ಟೇಟ್ ಮಾಲೀಕರಾಗಿದ್ದ ಶ್ರೀ ಯು.ಕೆ.ಲಕ್ಷ್ಮಣ ಗೌಡ್ರು, ಸೇಂಟ್ ಮೆರೀಸ್ ಕಲ್ಮನೆ ಎಸ್ಟೇಟ್ ಮಾಲೀಕರಾದ ಶ್ರೀ ಅವಿನಾಶ್ ಪ್ರಭು ಮುಂತಾದವರು ಶಾಲೆಯ ಸರ್ವಾಂಗೀಣ ಏಳಿಗೆಗೆ ಕಾರಣೀಕರ್ತರಾಗಿದ್ದರು.. ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಅಧ್ಯಾಪಕ ವೃಂದ ನಿಸ್ವಾರ್ಥ ಹಾಗು ಪ್ರಾಮಾಣಿಕ ಸೇವೆಯಿಂದ ಶಾಲೆಯ ಸುತ್ತಮುತ್ತ ಮನೆ ಮಾತಾಗಿತ್ತು. ಹಲವಾರು ವರ್ಷಗಳಿಂದ ಹಂತ ಹಂತವಾಗಿ ಅಭಿವೃದ್ಧಿ ಹೊಂದಿದ್ದ ಶಾಲೆ ಮಣ್ಣಿನ ಗೋಡೆ, ಹಸಿ ಇಟ್ಟಿಗೆ ಗೋಡೆಯಿಂದ ನಿರ್ಮಾಣ ಹೊಂದಿದ್ದು ಶಿಥಿಲಾವಸ್ಥೆ ಹೊಂದಿತ್ತು.. ಮೇಲ್ಚಾವಣಿ ಗೆದ್ದಲು ಹಿಡಿದಿತ್ತು.. ಕಿಟಕಿ ಬಾಗಿಲುಗಳು ಮುರಿಯಲಾರಂಭಿಸಿದವು ಹಂಚುಗಳು ಮಳೆನೀರಿಗೆ ಜಿನುಗುತ್ತಿದ್ದವು ಶಾಲಾ ವಾತಾವರಣ ಆಧುನಿಕ ಅಭಿರುಚಿಯಿಂದ ದೂರವಾಗುತ್ತಿತ್ತು. ಕಳೆದ ವರ್ಷ ಸುರಿದ ಭಾರೀ ಮಳೆಗೆ ಬಿರುಕು ಬಿಟ್ಟು ಬೀಳುವ ಹಂತ ತಲುಪಿತ್ತು. ಈ ನಡುವೆ ಮುಖ್ಯ ಶಿಕ್ಷಕರಾದ ಶ್ರೀ ತಿಮ್ಮಯ್ಯನವರ ವಯೋನಿವೃತ್ತಿ ನಂತರ ಶ್ರೀ ಪೂರ್ಣೇಶ.ವಿ. ಪಿ. ಇವರು ಪ್ರಭಾರ ವಹಿಸಿಕೊಂಡ ನಂತರ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ಗುರುರಾಜ್ ಮತ್ತು ಇರುವ ಶಾಲೆಯ ಅಲ್ಪ ಸ್ವಲ್ಪ ಸಂಪನ್ಮೂಲ ಕ್ರೂಢೀಕರಿಸಿ ಕೆಲಸ ಆರಂಭಿಸಿತು. ಕೊಠಡಿಯ ನೆಲದಿಂದ ನೀರು ಜಿನುಗುವುದು ತಪ್ಪಿಸಲು ಫೌಂಡೇಶನ್ ಗಿಂತ ಎತ್ತರವಿದ್ದ ಮಣ್ಣನ್ನು ತೆಗೆದು ಎರಡು ಅಡಿ ಆಳದಿಂದ ಸಿಮೆಂಟ್ ಪ್ಲಾಸ್ಟರ್ ಮಾಡಿಸಲಾಯಿತು, ಕಿಟಕಿಗಳು ಗೆದ್ದಲು ತಿಂದಿದ್ದರಿಂದ ಅವುಗಳನ್ನು ತೆಗೆದು ಹೊಸದಾಗಿ ರಿಪೇರಿ ಮಾಡಿದ ಕಿಟಕಿ ಅಳವಡಿಸಲಾಯಿತು. ಶ್ರೀ ಸತೀಶ್ ಮರ್ಕಲ್ ಇವರು ಕಿಟಕಿಗಳಿಗೆ ಕಬ್ಬಿಣದ ಸರಳು ಒದಗಿಸಿದರು, ಶ್ರೀಮತಿ ಪ್ರಮೀಳಾ ತಾಲ್ಲೂಕು ಪಂಚಾಯಿತಿ ಸದಸ್ಯರ ಅನುದಾನದಿಂದ ಎರಡುವರೆ ಲಕ್ಷ ಅನುದಾನದಲ್ಲಿ ಎರಡು ಕೊಠಡಿಗಳ ಮೇಲ್ಚಾವಣಿ ದುರಸ್ತಿ ಆಯಿತು. ಮೂಡಿಗೆರೆಯ ಜನಪ್ರಿಯ ಶಾಸಕರಾದ ಸನ್ಮಾನ್ಯ ಕುಮಾರಸ್ವಾಮಿಯವರು ನೆರೆ ಪರಿಹಾರ ನಿಧಿಯಿಂದ ನಾಲ್ಕು ಲಕ್ಷ ಅನುದಾನ ಒದಗಿಸಿದರು, ಇದರಿಂದ ಎರಡು ಕೊಠಡಿಗಳ ಮೇಲ್ಚಾವಣಿ ದುರಸ್ತಿಯಾಯಿತು . ಗ್ರಾಮ ಪಂಚಾಯಿತಿ ನೀಡುವಾಳೆ ಇವರು ನೀಡಿದ 26 ಸಾವಿರ ರೂಪಾಯಿಗಳಿಂದ ನಾಲ್ಕು ಬಾಗಿಲು ಬಂದೋಬಸ್ತ್ ಆದವು. ಗ್ರಾಮ ಪಂಚಾಯಿತಿ ನೀಡುವಾಳೆ ಇವರು ನೀಡಿದ 100000 ಹಣದಿಂದ ಶಾಲೆಯ ಆಸುಪಾಸಿನ ಮಣ್ಣು ತೆಗೆಸಿ ಸಮತಟ್ಟು ಮಾಡಲಾಯಿತು. ಗ್ರಾಮ ಪಂಚಾಯಿತಿಯ ಉದ್ಯೋಗ ಖಾತ್ರಿ ಯೋಜನೆಯಿಂದ ಆಟದ ಮೈದಾನವನ್ನು 2 ಲಕ್ಷ ಅನುದಾನದಲ್ಲಿ ದುರಸ್ತಿ ಗೊಳಿಸಲಾಯಿತು. ಶಾಲೆಯ ಅಭಿವೃದ್ಧಿ ಕೆಲಸಗಳಿಗೆ ಹಲವಾರು ದಾನಿಗಳು ನೆರವಾದರು, ಕೋವಿಡ್ 19 ಲಾಕ್ಡೌನ್ ನಮ್ಮನ್ನು ಸ್ವಲ್ಪಕಾಲ ತಡೆಯಿತು. ಶ್ರೀ ಗುರುರಾಜ್, ಶ್ರೀ ಸೋಮೇಶ್, ಶ್ರೀ ಚಂದ್ರಶೇಖರ್, ಶ್ರೀ ರತ್ನಾಕರ್ ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀ ಪೂರ್ಣೇಶ್ .ವಿ.ಪಿ ಶ್ರೀಮತಿ ರಮ್ಯಶ್ರೀ ಇವರುಗಳ ತಂಡ, ಮಹಾದಾನಿಗಳಾದ ಶ್ರೀ ಸುನಿಲ್ ಗೌಡರನ್ನು ಭೇಟಿ ಮಾಡಿ ಅಭಿವೃದ್ಧಿಗೆ ಸಹಕರಿಸುವಂತೆ ವಿನಂತಿಸಲಾಯಿತು. ಶ್ರೀ‌ನಾಗರಾಜ್ ಭಟ್ ಇವರೊಂದಿಗೆ ಪರಾಮರ್ಶಿಸಿದ ದಾನಿಗಳಾದ ಶ್ರೀ ಸುನಿಲ್ ಗೌಡರು ದೂರದರ್ಶಿತ್ವ, ಗುಣಮಟ್ಟ, ವಿಶ್ವಾಸಾರ್ಹತೆಯ ಕಾಮಗಾರಿ ಆರಂಭಿಸಿದರು. ಶಾಲೆಗೆ ಹೊಂದಿಕೊಂಡಿದ್ದ ಮಣ್ಣನ್ನು ಒಂದು ವಾರ ಕಾಲ ಶ್ರಮವಹಿಸಿ ತಗೆಸುವುದರೊಂದಿಗೆ ಶಾಲೆಗೆ ರಸ್ತೆ ಸಂಪರ್ಕವನ್ನು ಕಲ್ಪಿಸಿದರು ನಾಲ್ಕು ಕೊಠಡಿಗಳಿಗೆ ಟೈಲ್ಸ್ ಅಳವಡಿಸಿದರು, ವರಾಂಡಕ್ಕೆ ಗ್ರಾನೈಟ್ ಅಳವಡಿಸಲು ನೆರವಾದರು. ಮುಖ್ಯ ಶಿಕ್ಷಕರ ಕೊಠಡಿಗೆ ಟೈಲ್ಸ್ ಅಳವಡಿಸಿದರು. ವರಾಂಡಕ್ಕೆ ಗ್ರಾನೈಟ್ ಅಳವಡಿಸಲು ನೆರವಾಗಿದ್ದಾರೆ. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್. www.avintv.com

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author