AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ವ್ಯಸನ ಮುಕ್ತ ಮೌಲ್ಯ ಅಭಿಯಾನ ಕಾರ್ಯಕ್ರಮ.ತಪ್ಪದೇ ವೀಕ್ಷಿಸಿ.#avintvcom

1 min read
Featured Video Play Icon

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಕರ್ನಾಟಕ ಗಾಂಧಿ ಸ್ಮಾರಕ ನಿದಿ.ಬೆಂಗಳೂರು. ರಾಷ್ಟ್ರೀಯ ಸೇವಾ ಯೋಜನೆ, ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್. ಅರಸಿಕೆರೆ. ಹಾಗೂ ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಸಂಸ್ತೆ. ಭಾರತಿಬೈಲ್ ಇವರ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ವ್ಯಸನ ಮುಕ್ತ ಮತ್ತು ಮೌಲ್ಯ ಯುತ ಸಮಾಜಕ್ಕಾಗಿ ಯುವಜನತೆ ಗಾಂಧಿ ತತ್ವ ಪ್ರೇರಿತ ಶಿಬಿರ ಹಾಗು ಮಾತೃದಿವಸ ಆಚರಣೆಯನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಭಾರತೀಬೈಲಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಮೊದಲನೆ ದಿನದ ದ್ವಜರೋಹಣ ಕಾರ್ಯಕ್ರಮವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು. ಚನರಾಯಪಟ್ಟಣ ನೆರವೆರಿಸಿ ಕೊಟ್ಟರು. ದ್ವಜರೋಹಣವನ್ನು ಡಾ:ಹೆಚ್.ಎಲ್.ನಾಗರಾಜ್.(ಉಪ ವಿಭಾಗಾದಿಕಾರಿಗಳು ಹಾಗೂ ಮಹಾ ಪೋಷಕರು. ಕಸ್ತೂರಬಾ ಗಾಂಧಿ ಆಶ್ರಮ ಭಾರತೀಬೈಲ್) ನೆರವೇರಿಸಿದರು. ಇವರು ಎಲ್ಲ ಶಿಬಿರಾರ್ಥೀಗಳನ್ನು ಕುರಿತು ಯುವ ಜನತೆಯ ಪಾತ್ರ, ಯಶೋಧರಮ್ಮದಾಸಪ್ಪ ನವರು ಮದ್ಯಪಾನ ವ್ಯಸನ ಮುಕ್ತಗೊಳಿಸಲು ತಮ್ಮ ಹುದ್ದೆಯನ್ನು ತ್ಯಾಗ ಮಾಡುವುದರ ಬಗ್ಗೆ ಗಾಂಧಿ ತತ್ವಗಳು ಹಾಗು ಕಸ್ತೂರಬಾ ಗಾಂಧಿಯವರ ಬಗ್ಗೆ ಕುರಿತು ಹಲವಾರು ವಿಷಯಗಳನ್ನು ಕುರಿತು ಶಿಭಿರಾರ್ಥಿಗಳ ಮನ ಮುಟ್ಟುವಂತೆ ತಿಳಿಸಿ ಕೊಟ್ಟರು. ಇ ಕಾರ್ಯಕ್ರಮವನ್ನು ಕುರಿತು ಶಿಬಿರದ ಮಾರ್ಗದರ್ಶಕರಾದ ಶಿವರಾಜ್.ಜಿ.ಬಿ.ರವರು ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವವನ್ನು ಮತ್ತು ಪ್ರಾದ್ಯಾಪಕರನ್ನು ಕುರಿತು ಮಾತನಾಡಿದರು. ಕಸ್ತೂರಬಾ ಗಾಂಧಿಯವರಿಗೆ ಹೇಳಿದ ಮಾತನ್ನು ತಿಳಿಸಿ ಕೊಟ್ಟರು. ಕಸ್ತೂರಬಾ ಗಾಂಧಿ ಯವರು ಗಾಂಧಿಜೀಯ ಬಳಿ 85.ಎಕರೆ ಜಾಗವನ್ನು ಖರಿದಿಸಿದ್ದರ ಬಗ್ಗೆ ಹೇಳಿದಾಗ ಅವರನ್ನು ಕುರಿತು ಗಾಂಧಿಜೀಯವರು ನಿನಗೆ ನನ್ನ ಆಶೀರ್ವಾದ ಬೇಕೆಂದರೆ ನೀನು ಕಸ್ತೂರಬಾ ಗಾಂಧಿ ಆಶ್ರಮದಲ್ಲಿ ಸಮಾದಿಯಾಗಬೇಕು ಎಂಬ ರೋಮಾಂಚನಗೊಳ್ಳುವಂತಹ ವಿಷಯಗಳನ್ನು ತಿಳಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಬಣಕಲ್ ವಿಸ್ಮಯ ಜೇಸಿ ಅದ್ಯಕ್ಷರಾದ ನವೀನ್. ಪೂರ್ವಾದ್ಯಕ್ಷರಾದ ರವಿಶಂಕರ್.ಜೆಸಿ ಕೃಷ್ಣೆಗೌಡ. ಜೆಸಿ ಪ್ರಸನ್ನ.ಜೆಸಿ ರತೀಶ್.ಜೆಸಿ ಕಾರ್ಯದರ್ಶಿ ಸುರೆಂದ್ರ. ಗ್ರಾಮಸ್ಥರು, ಟ್ರಸ್ಟ್ ನ ಪಧಾದಿಕಾರಿಗಳು ಬಾಗವಹಿಸಿದ್ದರು. ವರದಿ. ಮಗ್ಗಲಮಕ್ಕಿಗಣೇಶ್. ಬ್ಯೂರೋ ನ್ಯೂಸ್. www.avintv.com

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author